<p><strong>ಹೊರ್ತಿ:</strong> ಹೊರ್ತಿ-ನಿಂಬಾಳ ಕೆ.ಡಿ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ತುಂಬ ಬೃಹತ್ ಗುಂಡಿಗಳು ಉಂಟಾಗಿವೆ.</p>.<p>ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಕೂಡಿಸುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. ಮುಂದೆ ಇಂಚಗೇರಿ ಕನಕನಾಳ ಮೂಲಕ ಮಹಾರಾಷ್ಟ್ರದ ಆಕಳವಾಡಿ, ಮಾನಿಕನಾಳ, ಗಿರಗಾಂವ ಗ್ರಾಮಗಳನ್ನು ಸೇರಿಸುತ್ತದೆ. ಈ 7.5 ಕಿ.ಮೀ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ತಗ್ಗು-ಗುಂಡಿ ತಪ್ಪಿಸುತ್ತ ವಾಹನ ಚಲಾಯಿಸಬೇಕಿದೆ. ಕನಿಷ್ಠ ಈ ರಸ್ತೆಗೆ ಪ್ಯಾಚ್ ವರ್ಕ್ ಮಾಡಿಯಾದರೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೊರ್ತಿ ಮತ್ತು ನಿಂಬಾಳ ಗ್ರಾಮದ ರೈತರು ಮತ್ತು ವಾಹನ ಸವಾರರು ಒತ್ತಾಯಿಸಿದ್ದಾರೆ.</p>.<p>‘ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ’ ಎಂದು ಜೀಪ್ ಚಾಲಕ ಶರಬಸು ಎಂ. ಡೋಣಗಿ ದೂರಿದರು.</p>.<p>ಹೊರ್ತಿಯಿಂದ ನಿಂಬಾಳ ಕೆಡಿ ಗ್ರಾಮ ಮತ್ತು ತತ್ವಜ್ಞಾನಿ ಗುರುದೇವ ರಾನಡೆಯವರ ದೇವಸ್ಥಾನಕ್ಕೆ ತೆರಳಲು ಭಕ್ತರು ಇದೇ ರಸ್ತೆಯ ಮೂಲಕ ತೆರಳಬೇಕು. ಪವಿತ್ರ ಧಾರ್ಮಿಕ ಸ್ಥಳವಾದ ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭಕ್ತರು ಇದೇ ರಸ್ತೆಯ ಮೂಲಕ ತೆರಳಬೇಕು. ಈ 7.5 ಕಿ.ಮೀ. ರಸ್ತೆಯನ್ನು ಕ್ರಮಿಸಬೇಕಾದರೆ 40 ನಿಮಿಷ ಸಮಯ ವ್ಯಯಿಸಬೇಕಾಗುತ್ತಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ರೈತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<h2> ‘ಟೆಂಡರ್ ಹಂತದಲ್ಲಿ’ </h2><p>ಹೊರ್ತಿ-ನಿಂಬಾಳ ಕೆಡಿ ರಸ್ತೆ ಹಾಳಾಗಿದ್ದು ಗಮನಕ್ಕೆ ಬಂದಿದೆ. ಕಾಮಗಾರಿಯು ಟೆಂಡರ್ ಹಂತದಲ್ಲಿದೆ. ಸರ್ಕಾರದಿಂದ ಮಂಜೂರಾತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ. ಈ ಹಿಂದೆ ಕೂಡ ಶಾಸಕರು ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ದಯಾನಂದ ಮಠ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊರ್ತಿ:</strong> ಹೊರ್ತಿ-ನಿಂಬಾಳ ಕೆ.ಡಿ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ತುಂಬ ಬೃಹತ್ ಗುಂಡಿಗಳು ಉಂಟಾಗಿವೆ.</p>.<p>ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಕೂಡಿಸುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. ಮುಂದೆ ಇಂಚಗೇರಿ ಕನಕನಾಳ ಮೂಲಕ ಮಹಾರಾಷ್ಟ್ರದ ಆಕಳವಾಡಿ, ಮಾನಿಕನಾಳ, ಗಿರಗಾಂವ ಗ್ರಾಮಗಳನ್ನು ಸೇರಿಸುತ್ತದೆ. ಈ 7.5 ಕಿ.ಮೀ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ತಗ್ಗು-ಗುಂಡಿ ತಪ್ಪಿಸುತ್ತ ವಾಹನ ಚಲಾಯಿಸಬೇಕಿದೆ. ಕನಿಷ್ಠ ಈ ರಸ್ತೆಗೆ ಪ್ಯಾಚ್ ವರ್ಕ್ ಮಾಡಿಯಾದರೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೊರ್ತಿ ಮತ್ತು ನಿಂಬಾಳ ಗ್ರಾಮದ ರೈತರು ಮತ್ತು ವಾಹನ ಸವಾರರು ಒತ್ತಾಯಿಸಿದ್ದಾರೆ.</p>.<p>‘ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ’ ಎಂದು ಜೀಪ್ ಚಾಲಕ ಶರಬಸು ಎಂ. ಡೋಣಗಿ ದೂರಿದರು.</p>.<p>ಹೊರ್ತಿಯಿಂದ ನಿಂಬಾಳ ಕೆಡಿ ಗ್ರಾಮ ಮತ್ತು ತತ್ವಜ್ಞಾನಿ ಗುರುದೇವ ರಾನಡೆಯವರ ದೇವಸ್ಥಾನಕ್ಕೆ ತೆರಳಲು ಭಕ್ತರು ಇದೇ ರಸ್ತೆಯ ಮೂಲಕ ತೆರಳಬೇಕು. ಪವಿತ್ರ ಧಾರ್ಮಿಕ ಸ್ಥಳವಾದ ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭಕ್ತರು ಇದೇ ರಸ್ತೆಯ ಮೂಲಕ ತೆರಳಬೇಕು. ಈ 7.5 ಕಿ.ಮೀ. ರಸ್ತೆಯನ್ನು ಕ್ರಮಿಸಬೇಕಾದರೆ 40 ನಿಮಿಷ ಸಮಯ ವ್ಯಯಿಸಬೇಕಾಗುತ್ತಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ರೈತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<h2> ‘ಟೆಂಡರ್ ಹಂತದಲ್ಲಿ’ </h2><p>ಹೊರ್ತಿ-ನಿಂಬಾಳ ಕೆಡಿ ರಸ್ತೆ ಹಾಳಾಗಿದ್ದು ಗಮನಕ್ಕೆ ಬಂದಿದೆ. ಕಾಮಗಾರಿಯು ಟೆಂಡರ್ ಹಂತದಲ್ಲಿದೆ. ಸರ್ಕಾರದಿಂದ ಮಂಜೂರಾತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ. ಈ ಹಿಂದೆ ಕೂಡ ಶಾಸಕರು ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ದಯಾನಂದ ಮಠ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>