ಸಿಂದಗಿಗೆ ಜಿಲ್ಲೆಯಾಗುವ ಎಲ್ಲ ಅರ್ಹತೆ ಇದೆ. ದೇವಹಿಪ್ಪರಗಿ ಆಲಮೇಲ ಇಂಡಿ ಚಡಚಣ ತಾಲ್ಲೂಕುಗಳಿಗೆ ಮಧ್ಯದಲ್ಲಿರುವ ತಾಲ್ಲೂಕು ಸಿಂದಗಿ ಆಗಿದೆ. ಈಗಾಗಲೇ ನಮ್ಮ ಕ್ಷೇತ್ರದ ಜನತೆ ಹೋರಾಟಗಾರರ ಒತ್ತಡವೂ ಹೆಚ್ಚಿದೆ. ಹೀಗಾಗಿ ಸಿಂದಗಿ ಜಿಲ್ಲೆಯಾಗುವುದೇ ಸೂಕ್ತ–ಅಶೋಕ ಮನಗೂಳಿ ಶಾಸಕ ಸಿಂದಗಿ
ದೇವರಹಿಪ್ಪರಗಿ ಕ್ಷೇತ್ರದ ವಿವಿಧ ಗ್ರಾಮಗಳ ಪ್ರಮುಖರು ಹಾಗೂ ಜನತೆಯ ಅಭಿಪ್ರಾಯದಂತೆ ಜಿಲ್ಲಾ ಕೇಂದ್ರ ಈಗಿರುವುದೇ ಒಳ್ಳೆಯದು. ಏಕೆಂದರೆ ಆಡಳಿತದ ದೃಷ್ಟಿಯಿಂದ ಜಿಲ್ಲಾ ಕೇಂದ್ರ ಸ್ಥಳ ವಿಜಯಪುರವೇ ನಮಗೆ ಅತ್ಯಂತ ಹತ್ತಿರವಾಗಿದೆ.–ರಾಜುಗೌಡ ಪಾಟೀಲ ಶಾಸಕರು ದೇವರಹಿಪ್ಪರಗಿ
ಜಿಲ್ಲೆ ವಿಭಜನೆ ಈಗಿನ ಸಮಯದಲ್ಲಿ ಅಷ್ಟೊಂದು ಸೂಕ್ತ ನಿರ್ಧಾರವಾಗಲಾರದು. ಜಿಲ್ಲಾ ಕೇಂದ್ರ ಆಗಬೇಕಿದ್ದರೆ ಮುದ್ದೇಬಿಹಾಳ ಆಗಬೇಕು. ಹೀಗಾಗಿ ನಾನು ಮುದ್ದೇಬಿಹಾಳವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸುವೆ-ಸಿ.ಎಸ್.ನಾಡಗೌಡ ಅಪ್ಪಾಜಿ ಶಾಸಕ ಮುದ್ದೇಬಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.