<p><strong>ನಾಲತವಾಡ:</strong> ಸಮೀಪದ ಆಲೂರ, ಕೇಸಾಪೂರ ಗ್ರಾಮಗಳ ಅಂಗಡಿಗಳಲ್ಲಿ ರಾಜಾರೋಷವಾಗಿ ಸಾರಾಯಿ ಮಾಡಲಾಗುತ್ತಿದೆ. ಗ್ರಾಮದಲ್ಲಿ ಸಾರಾಯಿ ಮಾರಾಟ ಬಂದ್ ಮಾಡಬೇಕು’ ಎಂದು ಗ್ರಾಮಸ್ಥರು, ಮಹಿಳೆಯರು ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.</p>.<p>ಸಾರಾಯಿ ಮಾರಾಟಗಾರರ ವಿರುದ್ಧ ಧಿಕ್ಕಾರ ಕೂಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಸಾರಾಯಿ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಮೌನವಹಿಸಿದ್ದು, ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಇವರು ಬರೀ ಕಚೇರಿಯಲ್ಲೇ ಕುಳಿತು ಕಾಲಹರಣ ಮಾಡಿದರೆ ಗ್ರಾಮವು ಸಾರಾಯಿ ಮುಕ್ತ ಆಗುವುದು ಯಾವಾಗ’ ಎಂದು ಮಹಿಳೆ ಸಂಗಮ್ಮ ಭೋವೇರ ಬೇಸರ ವ್ಯಕ್ತಪಡಿಸಿದರು.</p>.<p>‘ದುಡಿಯುವ ವರ್ಗದವರು ಸಾರಾಯಿ ಚಟಕ್ಕೆ ಒಳಗಾಗಿ ಕುಟುಂಬಗಳು ಬೀದಿಗೆ ಬೀಳುವಂತಾಗಿವೆ. ಸಾರಾಯಿ ಚಟಕ್ಕಾಗಿ ಸಾಲ, ಮಹಿಳೆಯರ ಮೇಲೆ ದೌರ್ಜನ್ಯ ಘಟನೆಗಳು ಹೆಚ್ಚುತ್ತಿವೆ. ಆಲೂರ ಮತ್ತು ಕೇಸಾಪೂರ ಗ್ರಾಮವನ್ನು ಸಾರಾಯಿ ಮುಕ್ತವಾಗಿಸಲು ಸಂಕಲ್ಪ ಮಾಡಿದ್ದು, ಇದಕ್ಕೆ ಅಧಿಕಾರಿಗಳು ಕೈಜೋಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>ಶಿಕ್ಷಕ ವೈ.ಬಿ. ತಳವಾರ ಮಾತನಾಡಿ, ‘ಸಾರಾಯಿ ದುಶ್ಚಟಕ್ಕೆ ಇಂದಿನ ಯುವ ಪೀಳಿಗೆ ಹಾಳಾಗುತ್ತಿದೆ. ಗ್ರಾಮವನ್ನು ಸಾರಾಯಿ ಮುಕ್ತವಾಗಿಸಲು ಸಂಕಲ್ಪ ಕೈಗೊಂಡಿದ್ದೇವೆ. ಸಾರಾಯಿ ಮಾರಾಟ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.</p>.<p>ಗ್ರಾಮಸ್ಥರಾದ ಗದ್ದೆಪ್ಪ ಭೋವೇರ, ಸಂಗನಗೌಡ ಪಾಟೀಲ, ಜಿ.ಜಿ.ಗೌಡರ, ಬಾಲಪ್ಪ ತಳವಾರ, ಸುರೇಶ ಬೈರವಾಡಗಿ, ದ್ಯಾಮಣ್ಣ ಇಂಗಳಗಿ, ಶ್ರೀನಿವಾಸ ಗೌಂಡಿ, ಅಂಬ್ರೇಶ ಸಂಗಮ, ನಾಗೇಶ<br> ಹಡಪದ, ಸಂಗಮ್ಮ ಭೋವೇರ, ಈರಮ್ಮ ಉಪ್ಪಿನಕಾಯಿ, ಗಿರಜಮ್ಮ ಪೂಜಾರಿ, ಅಯ್ಯಮ್ಮ ಹಿರೇಕುರಬರ, ಗದ್ದೆವ್ವ ಮಾದರ, ತಿಪ್ಪವ್ವ ಮಾದರ, ಹುಲಗಮ್ಮ ಮಾದರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಲತವಾಡ:</strong> ಸಮೀಪದ ಆಲೂರ, ಕೇಸಾಪೂರ ಗ್ರಾಮಗಳ ಅಂಗಡಿಗಳಲ್ಲಿ ರಾಜಾರೋಷವಾಗಿ ಸಾರಾಯಿ ಮಾಡಲಾಗುತ್ತಿದೆ. ಗ್ರಾಮದಲ್ಲಿ ಸಾರಾಯಿ ಮಾರಾಟ ಬಂದ್ ಮಾಡಬೇಕು’ ಎಂದು ಗ್ರಾಮಸ್ಥರು, ಮಹಿಳೆಯರು ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.</p>.<p>ಸಾರಾಯಿ ಮಾರಾಟಗಾರರ ವಿರುದ್ಧ ಧಿಕ್ಕಾರ ಕೂಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಸಾರಾಯಿ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಮೌನವಹಿಸಿದ್ದು, ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಇವರು ಬರೀ ಕಚೇರಿಯಲ್ಲೇ ಕುಳಿತು ಕಾಲಹರಣ ಮಾಡಿದರೆ ಗ್ರಾಮವು ಸಾರಾಯಿ ಮುಕ್ತ ಆಗುವುದು ಯಾವಾಗ’ ಎಂದು ಮಹಿಳೆ ಸಂಗಮ್ಮ ಭೋವೇರ ಬೇಸರ ವ್ಯಕ್ತಪಡಿಸಿದರು.</p>.<p>‘ದುಡಿಯುವ ವರ್ಗದವರು ಸಾರಾಯಿ ಚಟಕ್ಕೆ ಒಳಗಾಗಿ ಕುಟುಂಬಗಳು ಬೀದಿಗೆ ಬೀಳುವಂತಾಗಿವೆ. ಸಾರಾಯಿ ಚಟಕ್ಕಾಗಿ ಸಾಲ, ಮಹಿಳೆಯರ ಮೇಲೆ ದೌರ್ಜನ್ಯ ಘಟನೆಗಳು ಹೆಚ್ಚುತ್ತಿವೆ. ಆಲೂರ ಮತ್ತು ಕೇಸಾಪೂರ ಗ್ರಾಮವನ್ನು ಸಾರಾಯಿ ಮುಕ್ತವಾಗಿಸಲು ಸಂಕಲ್ಪ ಮಾಡಿದ್ದು, ಇದಕ್ಕೆ ಅಧಿಕಾರಿಗಳು ಕೈಜೋಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>ಶಿಕ್ಷಕ ವೈ.ಬಿ. ತಳವಾರ ಮಾತನಾಡಿ, ‘ಸಾರಾಯಿ ದುಶ್ಚಟಕ್ಕೆ ಇಂದಿನ ಯುವ ಪೀಳಿಗೆ ಹಾಳಾಗುತ್ತಿದೆ. ಗ್ರಾಮವನ್ನು ಸಾರಾಯಿ ಮುಕ್ತವಾಗಿಸಲು ಸಂಕಲ್ಪ ಕೈಗೊಂಡಿದ್ದೇವೆ. ಸಾರಾಯಿ ಮಾರಾಟ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.</p>.<p>ಗ್ರಾಮಸ್ಥರಾದ ಗದ್ದೆಪ್ಪ ಭೋವೇರ, ಸಂಗನಗೌಡ ಪಾಟೀಲ, ಜಿ.ಜಿ.ಗೌಡರ, ಬಾಲಪ್ಪ ತಳವಾರ, ಸುರೇಶ ಬೈರವಾಡಗಿ, ದ್ಯಾಮಣ್ಣ ಇಂಗಳಗಿ, ಶ್ರೀನಿವಾಸ ಗೌಂಡಿ, ಅಂಬ್ರೇಶ ಸಂಗಮ, ನಾಗೇಶ<br> ಹಡಪದ, ಸಂಗಮ್ಮ ಭೋವೇರ, ಈರಮ್ಮ ಉಪ್ಪಿನಕಾಯಿ, ಗಿರಜಮ್ಮ ಪೂಜಾರಿ, ಅಯ್ಯಮ್ಮ ಹಿರೇಕುರಬರ, ಗದ್ದೆವ್ವ ಮಾದರ, ತಿಪ್ಪವ್ವ ಮಾದರ, ಹುಲಗಮ್ಮ ಮಾದರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>