<p><strong>ಹೊರ್ತಿ:</strong>ಆಧ್ಯಾತ್ಮವಾಗಿ ಹೆಸರುವಾಸಿಯಾಗಿರುವಇಂಚಗೇರಿಯು ‘ರಾಷ್ಟ್ರಪಕ್ಷಿ’ ನವಿಲುಗಳ ತಾಣವಾಗಿಯೂ ಜನಪ್ರಿಯವಾಗಿದೆ.</p>.<p>ಇಂಚಗೇರಿ ಮಠವು ಸಪ್ತ ಮಹಾರಾಜರ ಪುಣ್ಯಧಾಮ. ಆಧ್ಯಾತ್ಮಿಕ ನಿತ್ಯ-ನಿಯಮ, ಭಜನೆ, ಸತ್ಸಂಗ, ಪುರಾಣ-ಪ್ರವಚನ, ಚಿಂತನ-ಮಂಥನ ಆಚರಣೆ–ಸಂಪ್ರದಾಯ, ಸರ್ವಧರ್ಮ ಸಮನ್ವಯದ ಶಾಂತಿ ಕೇಂದ್ರವಾಗಿದೆ.</p>.<p>ಶ್ರೀಮಠಕ್ಕೆ ಆಗಮಿಸುವ ಭಕ್ತರು ಮಠದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ನವಿಲುಗಳು ಸ್ವಚ್ಛಂದವಾಗಿ ಓಡಾಡುವ ಮತ್ತು ಗರಿ ಬಿಚ್ಚಿ ಕುಣಿಯುವುದನ್ನು ಕಂಡು ಖುಷಿಪಡುತ್ತಿದ್ದಾರೆ.</p>.<p>ಕರ್ನಾಟಕದ ಗಡಿ ಭಾಗದಲ್ಲಿರುವ ಇಂಚಗೇರಿಮಠಕ್ಕೆ ನೆರೆ ಮಹಾರಾಷ್ಟ್ರ ಸೇರಿದಂತೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಹಾಯಾಗಿ ನಲಿದಾಡುವ ನವಿಲುಗಳನ್ನು ಕಣ್ಮುಂಬಿಕೊಳ್ಳುವುದರೊಂದೊಗೆ ಫೋಟೊ ತೆಗೆದುಕೊಂಡು ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.</p>.<p>ಶ್ರೀಮಠದಲ್ಲಿ ಬೆಳಿಗ್ಗೆ 4 ಗಂಟೆಗೆ ಕಾಕಡಾರುತಿ ಗಂಟೆ ಬಾರಿಸಿದ ಕೂಡಲೇ ನವಿಲುಗಳ ಸಾಮೂಹಿಕ ಕೂಗು ಕೇಳಿಬರುತ್ತವೆ. ಸಣ್ಣದೊಂದು ಶಬ್ದವಾದರೂ ಬೆಚ್ಚಿ ಬಿದ್ದು ಚೆಂಗನೆ ಹಾರಿ ಮರಗಳ ಕೊಂಬೆ ಮೇಲೆ ಕುಳಿತುಕೊಳ್ಳುತ್ತವೆ. ಮಠದ ಆವರಣದಲ್ಲಿ ಕಾಳುಕಡಿ ಹಸನುಗೊಳಿಸಿದ ನಂತರ ಅಲ್ಲಲ್ಲಿ ಬಿದ್ದ ಕಾಳುಗಳನ್ನು ತಿನ್ನುತ್ತವೆ.</p>.<p>ನವಿಲುಗಳಿಗೆ ಇಲ್ಲಿ ಯಾರ ಉಪದ್ರವವೂ ಇಲ್ಲ. ಹುಳ ಹುಪ್ಪಡಿಗಳನ್ನು ಹೆಕ್ಕಿ ತಿನ್ನುವುದರಿಂದ ಬೆಳೆಗಳಿಗೆ ಕೀಟಬಾಧೆ ಇಲ್ಲದಂತಾಗಿದೆ. 80ರ ದಶಕದಲ್ಲಿ ಬೆರಳೆಣಿಕೆಯಷ್ಟಿದ್ದ ನವಿಲುಗಳ ಸಂತತಿ ವರ್ಷದಿಂದ ವರ್ಷಕ್ಕೆ ವೃದ್ದಿಯಾಗುತ್ತಿದೆ. ಇಂಚಗೇರಿ ಭಾಗದಲ್ಲಿರುವ ಗುಡ್ಡಗಳ ಸಾಲು, ಮಠದ ಪ್ರಶಾಂತವಾದ ಆವರಣ ನವಿಲುಗಳ ವಾಸಕ್ಕೆ ಪ್ರಶಸ್ತವಾಗಿದೆ.</p>.<p>ಅದೇಷ್ಟೋ ನವಿಲುಗಳು ಇಲ್ಲಿ ಸಂತಾನಭಿವೃದ್ಧಿಯಾದ ನಂತರ ಭೀಮಾ ಹಾಗೂ ಕೃಷ್ಣಾ ನದಿ ತೀರದ ಅನೇಕ ಹಳ್ಳಿಗಳಿಗೆ ಮತ್ತು ನೆರೆ ಮಹಾರಾಷ್ಟ್ರಕ್ಕೆ ಒಲಸೆ ಹೋಗಿರುವುದುಂಟು.</p>.<p>ಈ ನವಿಲುಗಳ ತಾಣ ನೋಡಲೂ ಮಳೆಗಾಲ ಮತ್ತು ಚಳಿಗಾಲ ಸೂಕ್ತ ಸಮಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊರ್ತಿ:</strong>ಆಧ್ಯಾತ್ಮವಾಗಿ ಹೆಸರುವಾಸಿಯಾಗಿರುವಇಂಚಗೇರಿಯು ‘ರಾಷ್ಟ್ರಪಕ್ಷಿ’ ನವಿಲುಗಳ ತಾಣವಾಗಿಯೂ ಜನಪ್ರಿಯವಾಗಿದೆ.</p>.<p>ಇಂಚಗೇರಿ ಮಠವು ಸಪ್ತ ಮಹಾರಾಜರ ಪುಣ್ಯಧಾಮ. ಆಧ್ಯಾತ್ಮಿಕ ನಿತ್ಯ-ನಿಯಮ, ಭಜನೆ, ಸತ್ಸಂಗ, ಪುರಾಣ-ಪ್ರವಚನ, ಚಿಂತನ-ಮಂಥನ ಆಚರಣೆ–ಸಂಪ್ರದಾಯ, ಸರ್ವಧರ್ಮ ಸಮನ್ವಯದ ಶಾಂತಿ ಕೇಂದ್ರವಾಗಿದೆ.</p>.<p>ಶ್ರೀಮಠಕ್ಕೆ ಆಗಮಿಸುವ ಭಕ್ತರು ಮಠದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ನವಿಲುಗಳು ಸ್ವಚ್ಛಂದವಾಗಿ ಓಡಾಡುವ ಮತ್ತು ಗರಿ ಬಿಚ್ಚಿ ಕುಣಿಯುವುದನ್ನು ಕಂಡು ಖುಷಿಪಡುತ್ತಿದ್ದಾರೆ.</p>.<p>ಕರ್ನಾಟಕದ ಗಡಿ ಭಾಗದಲ್ಲಿರುವ ಇಂಚಗೇರಿಮಠಕ್ಕೆ ನೆರೆ ಮಹಾರಾಷ್ಟ್ರ ಸೇರಿದಂತೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಹಾಯಾಗಿ ನಲಿದಾಡುವ ನವಿಲುಗಳನ್ನು ಕಣ್ಮುಂಬಿಕೊಳ್ಳುವುದರೊಂದೊಗೆ ಫೋಟೊ ತೆಗೆದುಕೊಂಡು ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.</p>.<p>ಶ್ರೀಮಠದಲ್ಲಿ ಬೆಳಿಗ್ಗೆ 4 ಗಂಟೆಗೆ ಕಾಕಡಾರುತಿ ಗಂಟೆ ಬಾರಿಸಿದ ಕೂಡಲೇ ನವಿಲುಗಳ ಸಾಮೂಹಿಕ ಕೂಗು ಕೇಳಿಬರುತ್ತವೆ. ಸಣ್ಣದೊಂದು ಶಬ್ದವಾದರೂ ಬೆಚ್ಚಿ ಬಿದ್ದು ಚೆಂಗನೆ ಹಾರಿ ಮರಗಳ ಕೊಂಬೆ ಮೇಲೆ ಕುಳಿತುಕೊಳ್ಳುತ್ತವೆ. ಮಠದ ಆವರಣದಲ್ಲಿ ಕಾಳುಕಡಿ ಹಸನುಗೊಳಿಸಿದ ನಂತರ ಅಲ್ಲಲ್ಲಿ ಬಿದ್ದ ಕಾಳುಗಳನ್ನು ತಿನ್ನುತ್ತವೆ.</p>.<p>ನವಿಲುಗಳಿಗೆ ಇಲ್ಲಿ ಯಾರ ಉಪದ್ರವವೂ ಇಲ್ಲ. ಹುಳ ಹುಪ್ಪಡಿಗಳನ್ನು ಹೆಕ್ಕಿ ತಿನ್ನುವುದರಿಂದ ಬೆಳೆಗಳಿಗೆ ಕೀಟಬಾಧೆ ಇಲ್ಲದಂತಾಗಿದೆ. 80ರ ದಶಕದಲ್ಲಿ ಬೆರಳೆಣಿಕೆಯಷ್ಟಿದ್ದ ನವಿಲುಗಳ ಸಂತತಿ ವರ್ಷದಿಂದ ವರ್ಷಕ್ಕೆ ವೃದ್ದಿಯಾಗುತ್ತಿದೆ. ಇಂಚಗೇರಿ ಭಾಗದಲ್ಲಿರುವ ಗುಡ್ಡಗಳ ಸಾಲು, ಮಠದ ಪ್ರಶಾಂತವಾದ ಆವರಣ ನವಿಲುಗಳ ವಾಸಕ್ಕೆ ಪ್ರಶಸ್ತವಾಗಿದೆ.</p>.<p>ಅದೇಷ್ಟೋ ನವಿಲುಗಳು ಇಲ್ಲಿ ಸಂತಾನಭಿವೃದ್ಧಿಯಾದ ನಂತರ ಭೀಮಾ ಹಾಗೂ ಕೃಷ್ಣಾ ನದಿ ತೀರದ ಅನೇಕ ಹಳ್ಳಿಗಳಿಗೆ ಮತ್ತು ನೆರೆ ಮಹಾರಾಷ್ಟ್ರಕ್ಕೆ ಒಲಸೆ ಹೋಗಿರುವುದುಂಟು.</p>.<p>ಈ ನವಿಲುಗಳ ತಾಣ ನೋಡಲೂ ಮಳೆಗಾಲ ಮತ್ತು ಚಳಿಗಾಲ ಸೂಕ್ತ ಸಮಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>