<p><strong>ಆಲಮಟ್ಟಿ</strong>: ಆಲಮಟ್ಟಿ ಸುತ್ತಮುತ್ತಲಿನ ಪರಿಸರದಲ್ಲಿ ಮುನ್ನೂರಕ್ಕೂ ಅಧಿಕ ಕಾರ್ಮಿಕರ ಸುಮಾರು ಎರಡು ದಶಕಗಳ ಪ್ರಾಮಾಣಿಕ ಶ್ರಮದ ಕಾರಣ ನಾನಾ ಉದ್ಯಾನಗಳು ಅರಳುವುದರ ಜತೆ ಹಸರೀಕರಣಕ್ಕೆ ಕಾರಣವಾಗಿವೆ ಎಂದು ಕೆಬಿಜೆೆಎನ್ಎಲ್ ಅರಣ್ಯ ವಿಭಾಗದ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ಹೇಳಿದರು.</p>.<p>ಅಲಮಟ್ಟಿಯ ಸಸ್ಯ ಪಾಲನಾ ನರ್ಸರಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ದಿನದ 24 ಗಂಟೆಯೂ ವಿವಿಧ ರೀತಿಯ ಕಾರ್ಮಿಕರ ಶ್ರಮ, ಕೆಲಸದ ಪರಿಣಾಮ ನಾವು ಸುಖವಾಗಿದ್ದೇವೆ. 20ನೇ ಶತಮಾನದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಭಾವದಿಂದಾಗಿ ಭಾರತದಲ್ಲಿಯೂ ಈ ದಿನಾಚರಣೆ ಆಚರಿಸಲಾಗುತ್ತದೆ ಎಂದು ಕಾರ್ಮಿಕ ದಿನದ ಇತಿಹಾಸ, ಬೆಳವಣಿಗೆ, ಅದರ ಹಿನ್ನಲೆ ಕುರಿತು ವಿವರಿಸಿದರು.</p>.<p>ಆರ್.ಎಂ.ಜಿ.ಎಫ್.ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ದಿನವನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಾತ್ಮ ಗಾಂಧೀಜಿಯವರು 1918ರಲ್ಲಿ ಅಹಮದಾಬಾದ್ ಹತ್ತಿ ಗಿರಣಿ ಮಾಲೀಕರ ವಿರುದ್ಧ ಸತ್ಯಾಗ್ರಹ ಶುರುಮಾಡಿ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿದರು ಎಂದು ಹೇಳಿದರು.</p>.<p>ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸತೀಶ ಗಲಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಕಾರ್ಮಿಕ ಮುಖಂಡರಾದ ವಿರೂಪಾಕ್ಷಿ ಮಾದರ, ಬಸವರಾಜ್ ಗುಡಿಮನಿ, ದ್ಯಾಮಣ್ಣ ಬಿರಾದಾರ, ಭೀಮಶಿ ನಾಯಕ, ಯಶೋಧಾ ಗಾರೇಗೋಳ, ಗಸ್ತು ಅರಣ್ಯ ಪಾಲಕರಾದ ಅಶೋಕ ಕಾಳೆ, ನಾಗಪ್ಪ ಹಯ್ಯಾಳಪ್ಪ, ಪ್ರವೀಣಕುಮಾರ ಹಚ್ಯಾಳಕರ , ಈರಯ್ಯ ಹಳ್ಳಿಮಠ ಮತ್ತೀತರರು ಇದ್ದರು.</p>.<p>ಪ್ರವಾಸಿಗರಿಗೆ ನಿರಾಶೆ: ಕಾರ್ಮಿಕರ ದಿನಾಚರಣೆ ಅಂಗವಾಗಿ ಆಲಮಟ್ಟಿಯ ಎಲ್ಲಾ ಉದ್ಯಾನಗಳನ್ನು ಬುಧವಾರ ಬಂದ್ ಮಾಡಲಾಗಿತ್ತು. ಈ ಬಗ್ಗೆ ಪೂರ್ವಮಾಹಿತಿಯಿಲ್ಲದೆ ದೂರದಿಂದ ನಾನಾ ಕಡೆಯಿಂದ ಬಂದಿದ್ದ ಪ್ರವಾಸಿಗರು ನಿರಾಶೆ ಅನುಭವಿಸಿದರು. ಈಗ ಬೇಸಿಗೆಯ ರಜೆಯ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಲಮಟ್ಟಿಗೆ ಭೇಟಿ ನೀಡುತ್ತಿದ್ದಾರೆ.<br> .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ</strong>: ಆಲಮಟ್ಟಿ ಸುತ್ತಮುತ್ತಲಿನ ಪರಿಸರದಲ್ಲಿ ಮುನ್ನೂರಕ್ಕೂ ಅಧಿಕ ಕಾರ್ಮಿಕರ ಸುಮಾರು ಎರಡು ದಶಕಗಳ ಪ್ರಾಮಾಣಿಕ ಶ್ರಮದ ಕಾರಣ ನಾನಾ ಉದ್ಯಾನಗಳು ಅರಳುವುದರ ಜತೆ ಹಸರೀಕರಣಕ್ಕೆ ಕಾರಣವಾಗಿವೆ ಎಂದು ಕೆಬಿಜೆೆಎನ್ಎಲ್ ಅರಣ್ಯ ವಿಭಾಗದ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ಹೇಳಿದರು.</p>.<p>ಅಲಮಟ್ಟಿಯ ಸಸ್ಯ ಪಾಲನಾ ನರ್ಸರಿಯಲ್ಲಿ ಬುಧವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ದಿನದ 24 ಗಂಟೆಯೂ ವಿವಿಧ ರೀತಿಯ ಕಾರ್ಮಿಕರ ಶ್ರಮ, ಕೆಲಸದ ಪರಿಣಾಮ ನಾವು ಸುಖವಾಗಿದ್ದೇವೆ. 20ನೇ ಶತಮಾನದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಭಾವದಿಂದಾಗಿ ಭಾರತದಲ್ಲಿಯೂ ಈ ದಿನಾಚರಣೆ ಆಚರಿಸಲಾಗುತ್ತದೆ ಎಂದು ಕಾರ್ಮಿಕ ದಿನದ ಇತಿಹಾಸ, ಬೆಳವಣಿಗೆ, ಅದರ ಹಿನ್ನಲೆ ಕುರಿತು ವಿವರಿಸಿದರು.</p>.<p>ಆರ್.ಎಂ.ಜಿ.ಎಫ್.ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ದಿನವನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಾತ್ಮ ಗಾಂಧೀಜಿಯವರು 1918ರಲ್ಲಿ ಅಹಮದಾಬಾದ್ ಹತ್ತಿ ಗಿರಣಿ ಮಾಲೀಕರ ವಿರುದ್ಧ ಸತ್ಯಾಗ್ರಹ ಶುರುಮಾಡಿ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿದರು ಎಂದು ಹೇಳಿದರು.</p>.<p>ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸತೀಶ ಗಲಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಕಾರ್ಮಿಕ ಮುಖಂಡರಾದ ವಿರೂಪಾಕ್ಷಿ ಮಾದರ, ಬಸವರಾಜ್ ಗುಡಿಮನಿ, ದ್ಯಾಮಣ್ಣ ಬಿರಾದಾರ, ಭೀಮಶಿ ನಾಯಕ, ಯಶೋಧಾ ಗಾರೇಗೋಳ, ಗಸ್ತು ಅರಣ್ಯ ಪಾಲಕರಾದ ಅಶೋಕ ಕಾಳೆ, ನಾಗಪ್ಪ ಹಯ್ಯಾಳಪ್ಪ, ಪ್ರವೀಣಕುಮಾರ ಹಚ್ಯಾಳಕರ , ಈರಯ್ಯ ಹಳ್ಳಿಮಠ ಮತ್ತೀತರರು ಇದ್ದರು.</p>.<p>ಪ್ರವಾಸಿಗರಿಗೆ ನಿರಾಶೆ: ಕಾರ್ಮಿಕರ ದಿನಾಚರಣೆ ಅಂಗವಾಗಿ ಆಲಮಟ್ಟಿಯ ಎಲ್ಲಾ ಉದ್ಯಾನಗಳನ್ನು ಬುಧವಾರ ಬಂದ್ ಮಾಡಲಾಗಿತ್ತು. ಈ ಬಗ್ಗೆ ಪೂರ್ವಮಾಹಿತಿಯಿಲ್ಲದೆ ದೂರದಿಂದ ನಾನಾ ಕಡೆಯಿಂದ ಬಂದಿದ್ದ ಪ್ರವಾಸಿಗರು ನಿರಾಶೆ ಅನುಭವಿಸಿದರು. ಈಗ ಬೇಸಿಗೆಯ ರಜೆಯ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಲಮಟ್ಟಿಗೆ ಭೇಟಿ ನೀಡುತ್ತಿದ್ದಾರೆ.<br> .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>