ಜನಪರ ಅಭಿವೃದ್ಧಿ ಪರ ಬಜೆಟ್ ಮಂಡಿಸಿದ್ದೇನೆ. ಪಾಲಿಕೆಗೆ ರಾಜ್ಯ ಸರ್ಕಾರದಿಂದ ₹ 100 ಕೋಟಿ ವಿಶೇಷ ಅನುದಾನ ಲಭಿಸಲಿದೆ. ಇದರಿಂದ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
-ದಿನೇಶ್ ಹಳ್ಳಿ, ಉಪ ಮೇಯರ್
₹ 500 ಕೋಟಿ ವಿಶೇಷ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪಾಲಿಕೆ ನಿಯೋಗದಿಂದ ಮನವಿ ಮಾಡಲಾಗಿತ್ತು. ಆದರೆ ಬಜೆಟ್ನಲ್ಲಿ ನಯಾ ಪೈಸೆ ಕೊಡದಿರುವುದು ಖಂಡನೀಯ. ಒತ್ತಡ ಹೇರಬೇಕಿದೆ
-ರಾಹುಲ್ ಜಾದವ್, ಬಿಜೆಪಿ ಸದಸ್ಯ
ಹೊಸ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ತಕರಾರು ಇಲ್ಲ. ಆದರೆ ಇಂದಿರಾ ಕ್ಯಾಂಟೀನ್ ಅನುಕೂಲಸ್ಥರ ಪಾಲಾಗುತ್ತಿದೆ. ಇದರ ದುರುಪಯೋಗ ತಡೆಯಲು ಆದ್ಯತೆ ನೀಡಬೇಕು
-ಪ್ರೇಮಾನಂದ ಬಿರಾದಾರ, ಬಿಜೆಪಿ ಸದಸ್ಯ
ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ಕೊಡಲು ಈಗಾಗಲೇ ಮೂರು ಬಾರಿ ಟೆಂಡರ್ ಆದರೂ ನನೆಗುದಿಗೆ ಬಿದ್ದಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು