<p><strong>ನವದೆಹಲಿ</strong>: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮಂಗಳವಾರ ತನ್ನ ಅಭ್ಯರ್ಥಿಗಳ ಏಳನೇ ಪಟ್ಟಿ ಬಿಡುಗಡೆ ಮಾಡಿದ್ದು, ಛತ್ತೀಸ್ಗಢ ಮತ್ತು ತಮಿಳುನಾಡಿನ ಇನ್ನುಳಿದ ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಪ್ರಕಟಿಸಿದೆ. </p>.<p>ಛತ್ತೀಸ್ಗಢದಲ್ಲಿ ಸುರ್ಜುಗಾ ಕ್ಷೇತ್ರದಿಂದ ಶಶಿ ಸಿಂಗ್ ಮತ್ತು ರಾಯಗಢದಿಂದ ಮೇನಕಾ ದೇವಿ ಅವರನ್ನು ಕಣಕ್ಕಿಳಿಸಿದೆ. ಬಿಲಾಸಪುರದಿಂದ ದೇವೇಂದ್ರ ಯಾದವ್ ಮತ್ತು ಕನ್ಕೇರ್ನಿಂದ ಬೀರೇಶ್ ಠಾಕೂರ್ ಅವರಿಗೆ ಟಿಕೆಟ್ ನೀಡಿದೆ. ತಮಿಳುನಾಡಿನ ಮಯಿಲಾಡುತುರೈ ಕ್ಷೇತ್ರಕ್ಕೆ ಆರ್.ಸುಧಾ ಅವರ ಹೆಸರು ಪ್ರಕಟಿಸಿದೆ. </p>.<p><strong>ಬಿಜೆಪಿ ಅಭ್ಯರ್ಥಿ ಘೋಷಣೆ:</strong> ಬಿಜೆಪಿಯು ಮಂಗಳವಾರ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕೇಂದ್ರ ಸಚಿವ ರಾಜಕುಮಾರ್ ರಂಜನ್ ಸಿಂಗ್ (ಮಣಿಪುರ ಇನ್ನರ್ ಕ್ಷೇತ್ರ) ಸೇರಿದಂತೆ ಮೂರೂ ಕಡೆ ಹಾಲಿ ಸಂಸದರಿಗೆ ಕೊಕ್ ನೀಡಿದೆ. ರಂಜನ್ ಬದಲು ಬಸಂತ್ ಕುಮಾರ್ ಸಿಂಗ್ ಅವರಿಗೆ ಅವಕಾಶ ನೀಡಿದೆ. ರಾಜಸ್ಥಾನದ ಕರೌಲಿ–ಧೋಲಾಪುರ ಕ್ಷೇತ್ರದಿಂದ ಇಂದು ದೇವಿ ಜಾಟವ್ ಹಾಗೂ ದೌಸಾ ಕ್ಷೇತ್ರದಿಂದ ಕನ್ನಯ್ಯ ಲಾಲ್ ಮೀನಾ ಅವರನ್ನು ಕಣಕ್ಕಿಳಿಸಿದೆ. </p>.<p>ಬಿಜೆಪಿಯು ಇದುವರೆಗೆ ಒಟ್ಟು 401 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮಂಗಳವಾರ ತನ್ನ ಅಭ್ಯರ್ಥಿಗಳ ಏಳನೇ ಪಟ್ಟಿ ಬಿಡುಗಡೆ ಮಾಡಿದ್ದು, ಛತ್ತೀಸ್ಗಢ ಮತ್ತು ತಮಿಳುನಾಡಿನ ಇನ್ನುಳಿದ ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಪ್ರಕಟಿಸಿದೆ. </p>.<p>ಛತ್ತೀಸ್ಗಢದಲ್ಲಿ ಸುರ್ಜುಗಾ ಕ್ಷೇತ್ರದಿಂದ ಶಶಿ ಸಿಂಗ್ ಮತ್ತು ರಾಯಗಢದಿಂದ ಮೇನಕಾ ದೇವಿ ಅವರನ್ನು ಕಣಕ್ಕಿಳಿಸಿದೆ. ಬಿಲಾಸಪುರದಿಂದ ದೇವೇಂದ್ರ ಯಾದವ್ ಮತ್ತು ಕನ್ಕೇರ್ನಿಂದ ಬೀರೇಶ್ ಠಾಕೂರ್ ಅವರಿಗೆ ಟಿಕೆಟ್ ನೀಡಿದೆ. ತಮಿಳುನಾಡಿನ ಮಯಿಲಾಡುತುರೈ ಕ್ಷೇತ್ರಕ್ಕೆ ಆರ್.ಸುಧಾ ಅವರ ಹೆಸರು ಪ್ರಕಟಿಸಿದೆ. </p>.<p><strong>ಬಿಜೆಪಿ ಅಭ್ಯರ್ಥಿ ಘೋಷಣೆ:</strong> ಬಿಜೆಪಿಯು ಮಂಗಳವಾರ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕೇಂದ್ರ ಸಚಿವ ರಾಜಕುಮಾರ್ ರಂಜನ್ ಸಿಂಗ್ (ಮಣಿಪುರ ಇನ್ನರ್ ಕ್ಷೇತ್ರ) ಸೇರಿದಂತೆ ಮೂರೂ ಕಡೆ ಹಾಲಿ ಸಂಸದರಿಗೆ ಕೊಕ್ ನೀಡಿದೆ. ರಂಜನ್ ಬದಲು ಬಸಂತ್ ಕುಮಾರ್ ಸಿಂಗ್ ಅವರಿಗೆ ಅವಕಾಶ ನೀಡಿದೆ. ರಾಜಸ್ಥಾನದ ಕರೌಲಿ–ಧೋಲಾಪುರ ಕ್ಷೇತ್ರದಿಂದ ಇಂದು ದೇವಿ ಜಾಟವ್ ಹಾಗೂ ದೌಸಾ ಕ್ಷೇತ್ರದಿಂದ ಕನ್ನಯ್ಯ ಲಾಲ್ ಮೀನಾ ಅವರನ್ನು ಕಣಕ್ಕಿಳಿಸಿದೆ. </p>.<p>ಬಿಜೆಪಿಯು ಇದುವರೆಗೆ ಒಟ್ಟು 401 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>