ರೆಸಾರ್ಟ್ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿರಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಅವರು, ‘ಭಾನುವಾರ ರಾತ್ರಿ ಶಿರಾ ನಗರ ವ್ಯಾಪ್ತಿಯಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಜ್ಯೋತಿನಗರ ಮತ್ತು ಪಟ್ಟನಾಯಕನಹಳ್ಳಿ ಗ್ರಾಮದ 8 ಮಂದಿ ದುರ್ಮರಣ ಹೊಂದಿದ್ದಾರೆ. ಆದ್ದರಿಂದ, ಪಕ್ಷದ ವರಿಷ್ಠರ ಅನುಮತಿ ಮೇರೆಗೆ ಮೃತ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದೇನೆ. ರಾತ್ರಿ ಮತ್ತೆ ರೆಸಾರ್ಟ್ಗೆ ವಾಪಸ್ ಬರುವೆ’ ಎಂದು ತಿಳಿಸಿದರು.