ಶ್ರೀ ಈ ಚಿತ್ರದ ನಾಯಕ. ಪ್ರಣತಿ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಪ್ರಕಾಶ್ ತುಮಿನಾಡು, ದೀಪಕ್ ರೈ, ದಾನಪ್ಪ, ಗೋವಿಂದೇ ಗೌಡ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ‘ಈ ಚಿತ್ರದಲ್ಲಿ ಕಥೆ ಹಾಗೂ ರಂಗಾಯಣ ರಘು ಅವರ ಪಾತ್ರಕ್ಕೆ ಅದರದೇ ಆದ ತೂಕವಿದೆ. ಅವರಿಗೆ ಕಥೆ ಹೇಳಿದಾಕ್ಷಣ, ಅವರ ಧಿರಿಸು ಹೇಗಿರಬೇಕು ಎಂದು ಅವರೇ ಡಿಸೈನ್ ಮಾಡಿಕೊಂಡರು. ಮೂರು ಪಂಚೆ, ಮೂರು ಶರ್ಟು, ಕೋಟು ಮತ್ತು 2 ಪೇಟ ಇಟ್ಟುಕೊಂಡಿರುವ ಸಾದಾಸೀದಾ ಮನುಷ್ಯ. ಇಡೀ ಸಿನಿಮಾದಲ್ಲಿ ಒಂದೇ ಚಪ್ಪಲಿ ಬಳಸಿದ್ದಾರೆ. ಅವರ ಪಾತ್ರದ ಬಗ್ಗೆ ಮತ್ತಷ್ಟು ವಿಶೇಷತೆಗಳಿವೆ’ ಎನ್ನುತ್ತಾರೆ ರಘು.