ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಖಾಘಾತ: ಲಕ್ಷಣಗಳು, ಪ್ರಥಮ ಚಿಕಿತ್ಸೆ, ಮುಂಜಾಗ್ರತೆ... ಇಲ್ಲಿದೆ ಮಾಹಿತಿ

Published 3 ಮೇ 2024, 7:23 IST
Last Updated 3 ಮೇ 2024, 7:23 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ದಿನದ 24 ಗಂಟೆಯೂ ಕನಿಷ್ಠ 28-43 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗುತ್ತಿದೆ.

ಇದರ ಪರಿಣಾಮ ಬಿಸಿಗಾಳಿ ಬೀಸುತ್ತಿದ್ದು, ಬೇಸಿಗೆಯ ಝಳ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಶಾಖಾಘಾತವಾಗುವ ಸಾಧ್ಯತೆ ಇರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಶಾಖಾಘಾತದ ಲಕ್ಷಣಗಳಿವು

  • ಅರೆ ಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು

  • ತಲೆ ಸುತ್ತುವಿಕೆ, ತಲೆನೋವು,

  • ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ

  • ಮಕ್ಕಳಲ್ಲಿ ಆಹಾರ ಸೇವಿಸಲು ನಿರಾಕರಿಸುವುದು

  • ಆಲಸ್ಯ, ಗಾಬರಿಗೊಳ್ಳುವುದು, ಆತಂಕ, ಸಿಡಿಮಿಡಿಗೊಳ್ಳುವುದು

  • ಬಾಯಿ ಒಣಗುವಿಕೆ, ಚರ್ಮವು ಬಿಸಿಯಾಗುವುದು,

ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಪ್ರಥಮ ಚಿಕಿತ್ಸೆ

  • ಬಿಸಿಲಿನ ಝಳದಿಂದ ಸುಸ್ತಾಗಿ ಬಿದ್ದರೆ ಕೂಡಲೇ ತುರ್ತು ಚಿಕಿತ್ಸೆ ನೀಡಬೇಕು.

  • ಸುಸ್ತಾದ ವ್ಯಕ್ತಿಯನ್ನು ನೆರಳಿನಲ್ಲಿ ಕುರಿಸಿ ವ್ಯಕ್ತಿಯ ವಸ್ತ್ರ ಸಡಿಲಗೊಳಿಸಬೇಕು.

  • ಪುಸ್ತಕ, ಪೇಪರ್, ಮತ್ತಿತರ ವಸ್ತುಗಳಿಂದ ಗಾಳಿ ಬೀಸಬೇಕು.

  • ಓಆರ್‌ಎಸ್ ಪುಡಿಯ ನೀರು ಕುಡಿಸುವುದು

  • ಅಂಗಾತ ಮಲಗಿಸಿ ನೀರಿನಿಂದ ಬಟ್ಟೆಯನ್ನು ಒದ್ದೆ ಮಾಡಿಕೊಂಡು ಶರೀರವನ್ನು ಒರೆಸಬೇಕು.

ನಂತರ ವೈದ್ಯರನ್ನು ಸಂಪರ್ಕಿಸಬೇಕು ಎಂದು ಇಲಾಖೆ ಮಾಹಿತಿ ನೀಡಿದೆ.

ಮುಂಜಾಗ್ರತೆ...

  • ಹೆಚ್ಚು ಬಿಸಿಲಿಗೆ ಮೈ ಒಡ್ಡಬಾರದು.

  • ಬಿಸಿಲ ಧಗೆ ಹೆಚ್ಚಾಗಿರುವ ಸಮಯದಲ್ಲಿ ಹೊರಾಂಗಣ ಕೆಲಸಗಳನ್ನು ಮಾಡಬಾರದು

  • ದೇಹದ ತಾಪಮಾನವನ್ನು ಕಡಿಮೆ ಮಾಡಲು ಪ್ರತಿ ದಿನ ಕನಿಷ್ಠ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು.

  • ಚರ್ಮ ಹೆಚ್ಚು ಬಿಸಿಯಾಗಿದ್ದರೆ ಒದ್ದೆ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಬೇಕು.

  • ಓಆರ್‌ಎಸ್ ಪುಡಿಯನ್ನು ಮನೆಯಲ್ಲಿ ಇರಿಸಿಕೊಳ್ಳುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT