ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯವಿದೆ
Published 1 ಏಪ್ರಿಲ್ 2024, 0:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ಕಾಣಲಿದೆ. ಈ ದಿನ ಯಾವುದೇ ರೀತಿಯ ವ್ಯಾವಹಾರಿಕ ಜವಬ್ದಾರಿಯನ್ನು ವಹಿಸಿಕೊಳ್ಳಬೇಡಿ. ಕುತೂಹಲಕಾರಿ ವಿಷಯಗಳನ್ನು ತಿಳಿದು ಅಚ್ಚರಿಗೊಳ್ಳುವಿರಿ.
01 ಏಪ್ರಿಲ್ 2024, 00:19 IST
ವೃಷಭ
ನೀವು ಯೋಚಿಸುವ ಪ್ರತಿಯೊಂದು ಕೆಲಸ-ಕಾರ್ಯಗಳು ವಿಳಂಬ ರೀತಿಯಲ್ಲಿ ನಡೆದರೂ ಮುಂದೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ವಾಹನ ಮಾರಾಟಗಾರರಿಗೆ ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯ ಇರಲಿದೆ.
01 ಏಪ್ರಿಲ್ 2024, 00:19 IST
ಮಿಥುನ
ಮನೆಯಲ್ಲಿ ನಿಮಗೆ ಎದುರಾಗುವ ಅನಿವಾರ್ಯವಾದ ಹೊಂದಾಣಿಕೆಯನ್ನು ಸುಲಭವಾಗಿ ಮಾಡಿಕೊಳ್ಳುವಿರಿ. ನಿರುದ್ಯೋಗಿಗಳಿಗೆ ಈ ದಿನ ಸಾಮಾಜಿಕ ಬದುಕಿನಲ್ಲಿ ಒಂದು ಹೊಸ ತಿರುವು ಮೂಡುತ್ತದೆ.
01 ಏಪ್ರಿಲ್ 2024, 00:19 IST
ಕರ್ಕಾಟಕ
ಕೆಲವೊಂದು ಜವಬ್ದಾರಿಯುತವಾದ ಊರಿನ ಕಾರ್ಯಗಳು ನಿಮ್ಮ ಮುಂದಾಳತ್ವದಲ್ಲಿ ನಡೆಯಲಿದೆ. ಸೋದರ ಮಾವನ ಆರೋಗ್ಯ ಉತ್ತಮಗೊಳ್ಳುವುದು. ಸಂಗೀತಗಾರರಿಗೆ ಮತ್ತು ನರ್ತಕರಿಗೆ ಇಂದು ವಿಶೇಷ ದಿನ.
01 ಏಪ್ರಿಲ್ 2024, 00:19 IST
ಸಿಂಹ
ಕಾರ್ಯರಂಗದಲ್ಲಿ ಮುನ್ನಡೆಗೆ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಇರುತ್ತದೆ ಆದ್ದರಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳುವುದರಿಂದ ಕೆಲಸ ಕಾರ್ಯಗಳು ಯಾವುದೇ ಅಡೆಚಣೆಗಳಿಲ್ಲದೆ ಸಾಗುವವು.
01 ಏಪ್ರಿಲ್ 2024, 00:19 IST
ಕನ್ಯಾ
ನಿಮ್ಮ ಸ್ವಯಂ ಸಾಮರ್ಥ್ಯದ ಬಗ್ಗೆ ಹೆಚ್ಚಿನ ವಿಶ್ವಾಸವಿರಲಿ. ಅದರಿಂದಾಗಿ ಮಾನಸಿಕ ವ್ಯಥೆಗಳು ನಿವಾರಣೆಯಾಗುತ್ತದೆ. ಸಮಾಜದಲ್ಲಿ ಮತ್ತು ವೈಯಕ್ತಿಕವಾಗಿ ನೀವು ಅಪೇಕ್ಷಿಸಿದ ಪ್ರಗತಿಯನ್ನು ಇಂದು ಸಾಧಿಸುವಿರಿ.
01 ಏಪ್ರಿಲ್ 2024, 00:19 IST
ತುಲಾ
ಸ್ವತಂತ್ರ ಮನೋಭಾವದಿಂದ ಹೊರಬಂದು ಆತ್ಮೀಯರ ಸಲಹೆಗಳಿಗೆ ಹೊಂದಿಕೊಳ್ಳುವಿರಿ. ಭೂಸಂಬಂಧ ವ್ಯವಹಾರದಲ್ಲಿ ಅಧಿಕ ಆದಾಯವು ಕಂಡುಬರುವುದು. ನವಗ್ರಹ ಪೂಜೆಯಿಂದ ಶುಭ ವಾರ್ತೆ ಪಡೆಯುವಿರಿ.
01 ಏಪ್ರಿಲ್ 2024, 00:19 IST
ವೃಶ್ಚಿಕ
ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಚಾಕಚಕ್ಯತೆಯನ್ನು ತೋರಿದರೆ ಯಶಸ್ಸು. ಸತತ ಪ್ರಯತ್ನದಿಂದ ಪರಸ್ಥಳದಲ್ಲಿ ವೃತ್ತಿಪರವಾಗಿ ಹೆಸರು, ಕೀರ್ತಿಯನ್ನು ಸಂಪಾದಿಸಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯವಿದೆ.
01 ಏಪ್ರಿಲ್ 2024, 00:19 IST
ಧನು
ಓಂ ಗುರುಭ್ಯೋ ನಮಃ ಎಂದು ಹೇಳಿ ದಿನ ಪ್ರಾರಂಭಿಸಿದರೆ ಮನಸ್ಸಿಗೆ ನೆಮ್ಮದಿ ಜೊತೆಗೆ ಜಯಸಿಗುವುದು. ಹಣಕಾಸಿನ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರ ಕಾಣಲಿದೆ. ಯೋಗಾಭ್ಯಾಸದಿಂದ ಅರೋಗ್ಯವೃದ್ಧಿ.
01 ಏಪ್ರಿಲ್ 2024, 00:19 IST
ಮಕರ
ಶನಿಯು ತಿರುಗಾಟವನ್ನು ಮಾಡಿಸುವುದರಿಂದ ಆರೋಗ್ಯದ ಬಗ್ಗೆ ಗಮನಹರಿಸುವುದು ಅನಿವಾರ್ಯವಾಗುತ್ತದೆ. ನಿಮ್ಮ ಬುದ್ಧಿವಂತಿಕೆ ಹಾಗೂ ಯೋಜನೆಗಳು ನಿಮ್ಮ ಸಂವಹನವನ್ನು ಸುಲಭಗೊಳಿಸುತ್ತದೆ.
01 ಏಪ್ರಿಲ್ 2024, 00:19 IST
ಕುಂಭ
ಇಂದು ನೀವು ಮಾಡುವ ಯಾವುದೇ ಬದಲಾವಣೆಯಾದರೂ ಅವು ಧನಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ. ಏನಕ್ಕೂ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಿ. ಶ್ರೀ ವಿಷ್ಣುವಿನ ಸಹಸ್ರನಾಮವನ್ನು ಪಠಿಸಿರಿ.
01 ಏಪ್ರಿಲ್ 2024, 00:19 IST
ಮೀನ
ನ್ಯಾಯಾಲಯದ ಕೆಲಸದಲ್ಲಿ ಕೆಲವು ಅಡೆತಡೆಗಳು ಎದುರಾದರೂ ಸತ್ಯಕ್ಕೆ ಜಯವಿದೆ ಎನ್ನುವುದರಿಂದ ನೀವೇನೂ ಚಿಂತಿಸಬೇಕಾದ ಅಗತ್ಯವಿಲ್ಲ. ವಿದ್ಯಾರ್ಥಿಗಳ ಹತ್ತಾರು ದಿನಗಳ ಪರಿಶ್ರಮ ಸಾರ್ಥಕವಾಗಲಿದೆ.
01 ಏಪ್ರಿಲ್ 2024, 00:19 IST