ಸೋಮವಾರ, 21 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮನಸ್ಸು ಉಲ್ಲಾಸಿತವಾಗಿರುವುದು
Published 21 ಅಕ್ಟೋಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಐ.ಟಿ.ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ಕಂಡುಬರಲಿದೆ. ಮನೆಯ ಒಳಗೆ ಹಾಗೂ ಹೊರಗೆ ಹೇಗೆ ವರ್ತಿಸುವಿರಿ ಎಂಬುದು ಉತ್ತಮ ಬದುಕಿಗೆ ಕಾರಣವಾಗುತ್ತದೆ.
ವೃಷಭ
ಸರಿಯಾಗಿ ಆಲೋಚಿಸಿದ ಬಳಿಕವಷ್ಟೇ ಯಾವುದೇ ಕೆಲಸವನ್ನು ಆರಂಭಿಸುವುದು ಒಳ್ಳೆಯದು. ಹೊಸ ಜವಾಬ್ದಾರಿಯೊಂದನ್ನು ನಿಭಾಯಿಸಬೇಕಾಗುವುದು. ದೂರ ಪ್ರಯಾಣವನ್ನು ರಾಹುಕಾಲದ ನಂತರದ ಆರಂಭಿಸಿ.
ಮಿಥುನ
ನಿಮ್ಮ ಕೈಕೆಳಗಿನ ನೌಕರರ ನೆರವು ಅಗತ್ಯವೆನಿಸಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮನಸ್ಸು ಉಲ್ಲಾಸಿತವಾಗಿರುವುದು. ದೇಹದ ಉಷ್ಣಾಂಶ ಹೆಚ್ಚಳವಾಗುವ ಲಕ್ಷಣಗಳಿವೆ.
ಕರ್ಕಾಟಕ
ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಚರ್ಚಿಸುವುದು ಒಳ್ಳೆಯದು. ಲೇವಾದೇವಿ ವ್ಯವಹಾರಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಕೆಲಸಗಳಲ್ಲಿ ಯಶಸನ್ನು ಪಡೆಯುವಿರಿ.
ಸಿಂಹ
ನಿವೃತ್ತಿ ಬಳಿಕ ಜೀವನದಲ್ಲಿ ನೆಲೆ ಕಂಡ ಸಂತೃಪ್ತಿ ಭಾವ ಮೂಡಲಿದೆ. ಸಹೋದ್ಯೋಗಿಗಳ ಮಾತಿಗೆ ಗೌರವ ಕೊಡುವುದು ಉತ್ತಮ. ಸಂಜೆಯೊಳಗೆ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ.
ಕನ್ಯಾ
ಸಹೋದ್ಯೋಗಿಗಳಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಬೇಡಿ. ಕೋರ್ಟ್ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಸಮಯ. ಮದುವೆ ವಿಚಾರವಾಗಿ ನಿಮ್ಮ ನಿರ್ಧಾರವನ್ನು ಹಿರಿಯರಿಗೆ ಸ್ಪಷ್ಟವಾಗಿ ತಿಳಿಸಿರಿ.
ತುಲಾ
ವೈದ್ಯಕೀಯ ಖರ್ಚಿನ ಹಣವನ್ನು ವಿಮಾ ಸಂಸ್ಥೆಯಿಂದ ಪಡೆದುಕೊಳ್ಳುವಂತಾಗುವುದು. ಕೌಟುಂಬಿಕ ಕಲಹದಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಕಚೇರಿಯಲ್ಲಿ ಸಹೋದ್ಯೋಗಿಗಳು ಕಿರುಕುಳ ನೀಡಬಹುದು.
ವೃಶ್ಚಿಕ
ಸತ್ಯನಾರಾಯಣ ಸ್ವಾಮಿಯ ಆರಾಧನೆಯಿಂದ ಜಟಿಲ ಸಮಸ್ಯೆಗಳು ಕೂಡ ಸುಲಭವಾಗಿ ಬಗೆಹರಿಯಲಿವೆ. ದುರಾಲೋಚನೆಗಳನ್ನು ಬದಲಿಸಿಕೊಳ್ಳಲು ಸೂಕ್ತ ಸಮಯ ಇದಾಗಿದೆ. ಹಣದ ಹರಿವು ಸರಾಗವಾಗಿರಲಿದೆ.
ಧನು
ಹೊಸ ಕಾರ್ಯ ಆರಂಭಿಸುವ ಮುನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು ಒಳಿತು. ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿಯಿಂದ ಹೊರಬನ್ನಿ.
ಮಕರ
ನಿರೀಕ್ಷಿತ ಸ್ಥಾನಮಾನಗಳು ಪ್ರಾಪ್ತಿಯಾಗಲಿವೆ. ಸಂಸಾರದಲ್ಲಿ ಸುಖ ಕಂಡುಬರಲಿದೆ. ದೀರ್ಘ ಪ್ರಯಾಣದಿಂದ ದೇಹಾಯಾಸ ಆಗುವುದು. ಬಂಗಾರ ವ್ಯಾಪಾರಿಗಳು ತಾಳ್ಮೆಯನ್ನು ಕಳೆದುಕೊಳ್ಳಬೇಡಿ.
ಕುಂಭ
ಕೆಲಸ ಆರಂಭಕ್ಕೆ ಮುನ್ನ ಆಳವಾಗಿ ಯೋಚಿಸದೇ ಮುಂದುವರೆಯುವುದು ಸರಿಯಲ್ಲ. ಸಂತಾನ ಅಪೇಕ್ಷಿಗಳಿಗೆ ಶುಭ ಸಮಾಚಾರ ಕೇಳಿಬರಲಿದೆ. ಗೃಹೋಪಕರಣಗಳ ಖರೀದಿಗೆ ಶುಭದಿನ.
ಮೀನ
ಮಕ್ಕಳ ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಿ ನೆಮ್ಮದಿ ಉಂಟಾಗಲಿದೆ. ಬರಬೇಕಾದ ಹಣ ಕೈ ಸೇರಲು ಹೆಚ್ಚಿನ ಪ್ರಯತ್ನ ಅಗತ್ಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಂತಹ ಫಲ ಸಿಗದಿರಬಹುದು. ಗಣಪತಿಯನ್ನು ಆರಾಧಿಸಿ.
ADVERTISEMENT
ADVERTISEMENT