ಗುರುವಾರ, 17 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರ ಸಂಕಷ್ಟದ ಪರಿಸ್ಥಿತಿಗೆ ತಂದೆಯವರಿಂದ ನೆರವು ಸಿಗಲಿದೆ
Published 16 ಅಕ್ಟೋಬರ್ 2024, 22:47 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದಕ್ಷರಾಗಿಯೂ ದಾಕ್ಷಿಣ್ಯ ಸ್ವಭಾವದವರಾದ ನಿಮಗೆ ಅಗೌರವ, ನಷ್ಟದಂತಹ ಪರಿಸ್ಥಿತಿ ಎದುರಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಸೂಕ್ತ ಸ್ಥಾನಮಾನ ಲಭ್ಯ. ಹೊಸ ಬಟ್ಟೆ ಖರೀದಿಸುವ ಯೋಗವಿರುವುದು.
ವೃಷಭ
ಹಳೆಯ ಕಹಿ ಘಟನೆಗಳಿಂದ , ಬಡತನದಿಂದ ಕಲಿತ ಪಾಠಗಳು ಉಪಯೋಗಕ್ಕೆ ಬರಲಿವೆ. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರ್ಕಾರದಿಂದ ಪ್ರಶಸ್ತಿ ಮತ್ತು ಬಹುಮಾನ ದೊರೆಯಲಿದೆ.
ಮಿಥುನ
ನೂತನ ಸ್ವತ್ತು ಖರೀದಿಯ ವ್ಯವಹಾರಗಳಲ್ಲಿ ಸಮರ್ಥನೀಯ ತೀರ್ಮಾನವನ್ನು ಕೈಗೊಳ್ಳುವುದು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸು ಸಾಧಿಸಲು ಕಷ್ಟವಾಗುವುದು.
ಕರ್ಕಾಟಕ
ಕುಟುಂಬದ ಸತ್ಕಾರ್ಯಗಳಲ್ಲಿ ಬಂಧುಗಳ ಜವಾಬ್ದಾರಿ ಕಡಿಮೆ ಆಗಲಿದೆ. ಕುಟುಂಬದ ಹಿಂದಿನ ವಿಚಾರ ತಿಳಿಯಲು ದಾಯಾದಿಗಳಿಂದ ಅನುಕೂಲವಿದೆ. ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಮೂಡುವುದು.
ಸಿಂಹ
ಸಮಸ್ಯೆಯಿಂದ ಹೊರಬರಲು ಯಾವುದೇ ರೀತಿಯ ಮುಚ್ಚುಮರೆ ಇಲ್ಲದೇ ಇರುವುದು ಒಂದೇ ದಾರಿ. ಎಲ್ಲರೊಂದಿಗೆ ಸಹಕಾರ ಭಾವನೆಯಿಂದ ಮುಂದುವರಿಯಿರಿ. ಸಂಕಷ್ಟದ ಪರಿಸ್ಥಿತಿಗೆ ತಂದೆಯವರಿಂದ ನೆರವು ಸಿಗಲಿದೆ.
ಕನ್ಯಾ
ಬಂಧು ಜನರಿಗೆ ಅಥವಾ ಸಹಾಯ ಅಪೇಕ್ಷಿಗಳಿಗೆ ಸಹಾಯ ಹಸ್ತ ತೋರುವುದು ದೇವರು ಮೆಚ್ಚುವ ಕೆಲಸವೆಂದು ತಿಳಿದುಬರಲಿದೆ. ದಾಂಪತ್ಯದಲ್ಲಿ ಸಂಶಯದ ವಾತಾವರಣ ಇದ್ದು ಅಸಮಾಧಾನ ಮೂಡುವುದು.
ತುಲಾ
ವ್ಯವಹಾರದಲ್ಲೂ, ಸಂಬಂಧದಲ್ಲೂ ಧನಾತ್ಮಕ ಮನೋಭಾವವೇ ಸೋಲುಗಳಿಗೆ ಕಾರಣವೆಂಬುವುದನ್ನು ಮರೆಯದಿರಿ. ಸಂಸಾರದ ಹೊಣೆಗಾರಿಕೆ ಕಾರಣದಿಂದ ಆದಾಯ ವೆಚ್ಚಗಳು ಸರಿ ಸಮವಾಗಿರುವುದು.
ವೃಶ್ಚಿಕ
ಹೂವಿನ ವ್ಯಾಪಾರಿಗಳಿಗೆ ಲಾಭವಿರುವುದರಿಂದ ಜೀವನ ನಡೆಸುವುದು ಕಷ್ಟವೆನಿಸದು. ಅಬಕಾರಿ ಗುತ್ತಿಗೆದಾರರಿಗೆ ಸ್ವಲ್ಪ ಮಟ್ಟದಲ್ಲಿ ಆದಾಯ ಹೆಚ್ಚುವುದು. ಸಿಹಿ ತಿನಿಸುಗಳ ತಯಾರಕರಿಗೆ ಲಾಭದ ದಿನ.
ಧನು
ಬಹಳ ದಿನಗಳ ನಂತರ ಮನೆಗೆ ಹಿರಿಯ ಸಹೋದರರ ಆಗಮನ ಸಂತೋಷ ಉಂಟುಮಾಡುವುದು. ಅರ್ಹತೆಗೆ ತಕ್ಕಂಥ ಸ್ಥಾನಮಾನ ಲಭಿಸುವವರೆಗೆ ತಾಳ್ಮೆಯಿಂದ ಇರುವುದು ಉತ್ತಮ.
ಮಕರ
ತಲುಪಬೇಕಾದ ಗುರಿಯನ್ನು ತಲುಪಬೇಕಾಗಿದ್ದಲ್ಲಿ ತುಸು ಹೆಚ್ಚೇ ಪರಿಶ್ರಮ ಪಡಬೇಕಾದೀತು. ಹೊಸ ಮನೆಯ ಕೆಲಸಗಳು ಮುಕ್ತಾಯ ಹಂತ ತಲುಪುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು.
ಕುಂಭ
ವೃಥಾ ತಿರುಗಾಟದಿಂದ ಧನಹಾನಿಯಾದರೂ, ಬಂಧುಗಳ ಜತೆಯಲ್ಲಿನ ಸಂಭ್ರಮ ಸಿಗಲಿದೆ. ಕೈಮಗ್ಗದ ವಸ್ತುಗಳ ವ್ಯಾಪಾರಿಗಳಿಗೆ ವಿದೇಶದಿಂದ ಪ್ರಾಮುಖ್ಯತೆ ಸಿಗುತ್ತದೆ. ನಂಬಿಕೆಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ.
ಮೀನ
ಸಮಾಜ ಸೇವೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಿರುವವರಿಗೆ ಪ್ರಚಾರ ಸಿಗುವುದು. ಮೇಲಧಿಕಾರಿಗಳಿಂದ ಅಚ್ಚರಿಯ ಸಂಗತಿಯೊಂದು ಕೇಳಿ ಬರಲಿದೆ. ಮಾನಸಿಕವಾಗಿ ಹೆಚ್ಚು ಧೃಢರಾಗಿರುವಿರಿ.
ADVERTISEMENT
ADVERTISEMENT