ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಇಂದು ಈ ರಾಶಿಯವರಿಗೆ ಯಶಸ್ಸು ಹುಡುಕಿಕೊಂಡು ಬರುವುದು
Published 18 ಅಕ್ಟೋಬರ್ 2024, 0:12 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅವಿವಾಹಿತರ ಮನಸ್ಸಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಈ ದಿನ ಪ್ರಾಪ್ತಿ. ಕೌಟುಂಬಿಕವಾಗಿ ನೆಲೆ ನಿಂತಿದ್ದರಿಂದ ಮನಸ್ಸಿಗೆ ಸಮಾಧಾನ. ಮನಸ್ಸಿಗೆ ಮುದ ನೀಡುವಂಥ ಸಂಗತಿಗಳು ಜರುಗುತ್ತವೆ.
ವೃಷಭ
ವೃತ್ತಿಯಲ್ಲಿ ಅಧಿಕಾರಿಗಳು ಕಾರ್ಯಸಾಧನೆಯನ್ನು ಗುರುತಿಸಿ ಹಾಗೂ ಕೆಲಸಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿಯಮವನ್ನು ಸಡಿಲಗೊಳಿಸುವರು. ಹೆಚ್ಚಿನ ಸೌಲಭ್ಯ ಒದಗಿಸಿ ಕೊಡುವರು.
ಮಿಥುನ
ಬಂದಿರುವ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ಯೋಚಿಸಿ ಉಪಯೋಗಿಸಿಕೊಂಡರೆ ಪೂರ್ಣ ಪ್ರಮಾಣದ ಲಾಭಾಂಶ ಅನುಭವಕ್ಕೆ ಬರುವುದು. ನಿಲುವನ್ನು ತೀರ್ಮಾನಿಸುವುದು ಉತ್ತಮ.
ಕರ್ಕಾಟಕ
ದ್ವಿಸ್ವಭಾವದ ನಡವಳಿಕೆಯನ್ನು ಕೊಂಚ ಹಿಡಿತದಲ್ಲಿಟ್ಟುಕೊಂಡರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವುದು ತಪ್ಪುವುದು. ಮೋಸಗಳು ನಡೆಯಬಹುದಾದ ಪಾಲುದಾರಿಕೆಯಿಂದ ಹೊರಬರುವ ಚಿಂತನೆ ಸೂಕ್ತ.
ಸಿಂಹ
ಸ್ವಲ್ಪ ಪ್ರಯತ್ನಕ್ಕೂ ಹೆಚ್ಚಿನ ಫಲ ಪ್ರಾಪ್ತಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಬೇಕಾಗಬಹುದು. ಸಮಸ್ಯೆ ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
ಕನ್ಯಾ
ಗೃಹಾಲಂಕಾರ ವಸ್ತುಗಳ ಅಥವಾ ಪೀಠೋಪಕರಣಗಳ ವ್ಯಾಪಾರದಿಂದ ಅಧಿಕ ಲಾಭ. ಪರಿಶ್ರಮಕ್ಕೆ ತಕ್ಕಂಥ ಫಲ ದೊರೆಯುವುದು ತುಸು ಕಷ್ಟವಾಗುವುದು
ತುಲಾ
ನರರೋಗ ತಜ್ಞರಿಗೆ ಹೊಸ ಅನುಭವಗಳೊಂದಿಗೆ ವಿದೇಶ ಪ್ರಯಾಣದ ಸಾಧ್ಯತೆ. ವೃತ್ತಿ ನಡೆಸಲು ಅವಕಾಶ ಸಿಗಲಿದೆ. ಕೆಲಸದ ಒತ್ತಡದಿಂದ ದಿನಾಂತ್ಯದಲ್ಲಿ ಶಿರೋವೇದನೆ, ಬೆನ್ನುನೋವು ಕಾಣಿಸಿಕೊಳ್ಳಬಹುದು.
ವೃಶ್ಚಿಕ
ಪಾಲುದಾರಿಕೆಯಲ್ಲಿ ಉತ್ತಮ ಲಾಭ. ಆರ್ಥಿಕ ಪರಿಸ್ಥಿತಿಯಿಂದಾಗಿ ಮುಂದುವರಿಯಲು ಮತ್ತು ಕಾರ್ಯ ಕ್ಷೇತ್ರವನ್ನು ವಿಸ್ತರಿಸಲು ಪೂರಕವಾಗುವುದು. ಬಂಧುಗಳೊಡನೆ ಸುಖ ಭೋಜನ ನಡೆಯಬಹುದು.
ಧನು
ಆದಾಯಕ್ಕಿಂತ ಜಾಸ್ತಿ ಅನಿವಾರ್ಯತೆಯ ಖರ್ಚುಗಳು ಎದುರಾಗಬಹುದು. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ. ಹೊಸ ಯೋಜನೆಗಳ ತಯಾರಿ ಕೆಲಸಗಳಿಗೆ ಒಳ್ಳೆಯ ಸಮಯ. ಸರಕು ಸಾಗಾಟದಿಂದ ಲಾಭ
ಮಕರ
ಬದುಕಿನ ಕವಲುದಾರಿಯಲ್ಲಿರುವ ದೇವತಾನುಗ್ರಹದಿಂದ ಸರಿಯಾದ ಮಾರ್ಗದರ್ಶನ ಸಿಗುವುದು. ಯಶಸ್ಸು ಹುಡುಕಿಕೊಂಡು ಬರುವುದರಿಂದ ಸಂತಸವಾಗಲಿದೆ. ಆದಾಯ ಉತ್ತಮ ಸ್ಥಿತಿಯಲ್ಲಿರುತ್ತದೆ.
ಕುಂಭ
ಕೌಟುಂಬಿಕ ನೆಮ್ಮದಿ ಸಮೃದ್ಧವಾಗಿದ್ದರೂ ಅಣ್ಣ ತಮ್ಮಂದಿರ ನಡುವೆ ಸಣ್ಣ-ಪುಟ್ಟ ಮಾನಸಿಕ ಕಿರಿಕಿರಿಗಳು ತಪ್ಪದು. ಮಕ್ಕಳಿಂದ ಅಹಿತಕರ ಕಾರ್ಯಗಳು ನಡೆದು ಮಾನಸಿಕ ಚಿಂತೆ ಉಂಟಾಗಬಹುದು.
ಮೀನ
ಮುಂದಿನ ಯೋಜನೆಗಳ ಕುರಿತು ಪರಿಣತರ ಜತೆ ಚರ್ಚೆಯನ್ನು ನಡೆಸಿ. ಹಂತ–ಹಂತವಾಗಿ ವಿವಾದಗಳ ನಿವಾರಣೆ ಆಗಲಿವೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅಪಾರ ಉತ್ಸಾಹ ಮೂಡುವುದು.
ADVERTISEMENT
ADVERTISEMENT