ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವಿದೇಶ ಅಥವಾ ದೂರ ಸಂಚಾರದ ಯೋಗವಿದೆ
Published 14 ಸೆಪ್ಟೆಂಬರ್ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೂತನ ಸಂಸ್ಥೆಯೊಂದರಲ್ಲಿ ಉತ್ತಮ ಉದ್ಯೋಗ ಪಡೆದುಕೊಳ್ಳಲು ಯೋಚಿಸುವಿರಿ. ದಿನಗೂಲಿ ಕೆಲಸವನ್ನು ಮಾಡುವವರಿಗೆ ಈ ದಿನ ಸ್ವಲ್ಪ ಅಸ್ಥಿರತೆ ಕಾಡಬಹುದು. ಚರ್ಮದ ವಸ್ತು ವ್ಯಾಪಾರಿಗಳಿಗೆ ಲಾಭದಾಯಕ ದಿನ.
ವೃಷಭ
ಸಾಂಸಾರಿಕವಾಗಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗುವುದೇ ಉತ್ತಮ. ಪರರಿಗೆ ಸಹಾಯ ಮಾಡುವ ಮನೋಭಾವದಿಂದ ಮುನ್ನಡೆ ಇರುವುದು. ವಿದೇಶ ಅಥವಾ ದೂರ ಸಂಚಾರದ ಯೋಗವಿದೆ.
ಮಿಥುನ
ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಜೊತೆಗೆ ಉನ್ನತ ಜವಾಬ್ದಾರಿ ಸ್ಥಾನಕ್ಕೆ ವರ್ಗವಣೆಯಾಗುವುದು. ಆತ್ಮಾಭಿಮಾನಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನೆಡೆದುಕೊಳ್ಳಿರಿ. ಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ.
ಕರ್ಕಾಟಕ
ಅಂದುಕೊಂಡಿರುವ ಕೆಲಸಗಳು ನೆರವೇರಿವುದರಿಂದ ನೆಮ್ಮದಿ ಇರುವುದು. ಈ ದಿನ ಕೊಟ್ಟ ಹಣ ಹಿಂದುರುಗುವುದು ಕಷ್ಟಸಾಧ್ಯ. ಆದ್ದರಿಂದ ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ.
ಸಿಂಹ
ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಂತಸ ಹಾಗೂ ಸಮಾಧಾನ ತರಲಿದೆ. ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರುವುದು.
ಕನ್ಯಾ
ನಿಮ್ಮ ಕೈ ತಪ್ಪಿ ಹೋಗಿದ್ದ ಕೆಲವು ಕೆಲಸಗಳು ಹಿರಿಯರೊಬ್ಬರ ಸಹಾಯದಿಂದ ಪುನಃ ನಿಮಗೆ ದೊರೆಯಲಿದೆ. ದಿನಾಂತ್ಯದಲ್ಲಿ ಆಭರಣಗಳು ಅಥವಾ ಕಲಾವಸ್ತುಗಳನ್ನು ಖರೀದಿಸುವ ಮನಸ್ಸಾಗಲಿದೆ.
ತುಲಾ
ಹೊಸ ಉದ್ಯೋಗ ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡುವಾಗ ವಕೀಲರ ಸಲಹೆ ಪಡೆಯುವುದು ಒಳ್ಳೆಯದು. ಮಕ್ಕಳ ಭವಿಷ್ಯದ ಕುರಿತಾಗಿ ಗಂಭೀರ ಚಿಂತನೆ ನೆಡೆಸುವಿರಿ.
ವೃಶ್ಚಿಕ
ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯ. ಬಂಧುಗಳ ಮಾತು ಮನಸ್ಸನ್ನು ಗಾಯ ಮಾಡಲಿದೆ. ಮನಸ್ಸು ನಿರಾಸಕ್ತಿಯ ಭಾವನೆಯಿಂದ ಕೂಡಿರುವಂತಾಗಲಿದೆ.
ಧನು
ಇನ್ನೊಬ್ಬರ ಕೆಲಸದ ಬಗ್ಗೆ ಟೀಕೆ-ಟಿಪ್ಪಣಿ ನೀಡುವುದು ಸರಿಯಲ್ಲ. ಹಣಕಾಸಿನ ಸಂಸ್ಥೆಗೆ ಪಾಲುದಾರರಾಗುವ ಸಾಧ್ಯತೆ ಇದೆ. ಋಣಗಳು ಪರಿಹಾರವಾಗಿ ನೆಮ್ಮದಿ ಮೂಡುವುದು.
ಮಕರ
ಕಲಾವಿದರಿಗೆ ಚಿತ್ರರಂಗದಲ್ಲಿ ಅದರಲ್ಲೂ ಹಾಸ್ಯಗಾರನಾಗಿ ಉತ್ತಮ ಅವಕಾಶಗಳು ಸಿಗುವುವು. ಹಲವು ಖರ್ಚು ವೆಚ್ಚಗಳನ್ನು ಮಾಡಬೇಕಾದರೂ ಆದಾಯದ ಹೊಸ ಮೂಲದಿಂದ ಹೆಚ್ಚಿನ ಲಾಭ ಬರುವುದು.
ಕುಂಭ
ಒಣಪ್ರತಿಷ್ಠೆಯಿಂದಾಗಿ ಸಂಬಂಧಗಳು ಕಡಿದುಕೊಳ್ಳಬೇಡಿ. ಜಾಹೀರಾತು ಏಜೆನ್ಸಿಯಲ್ಲಿರುವವರಿಗೆ ಬಹಳಷ್ಟು ಏಳಿಗೆ ಹಾಗೂ ಪ್ರಚಾರ ತರುವ ಸೂಕ್ತ ವಿಚಾರದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ.
ಮೀನ
ನ್ಯಾಯಾಲಯದಲ್ಲಿದ್ದ ಪ್ರಕರಣ ಇತ್ಯರ್ಥವಾಗಿ ಮನಸ್ಸಿಗೆ ಸಮಾಧಾನ ಸಿಗಲಿದೆ. ಆಸ್ತಿ ಕೊಳ್ಳುವ ವಿಷಯದಲ್ಲಿ ಹೆಂಡತಿಯೊಂದಿಗೆ ಮಾತುಕತೆ ನೆಡೆಸಿ. ಹಳೇಯ ಸಿಹಿ ಘಟನೆಗಳನ್ನು ಮೆಲಕು ಹಾಕುವಿರಿ.
ADVERTISEMENT
ADVERTISEMENT