ಸಂಜೆ ಮಳೆ ಆರಂಭವಾದಾಗ ಸಂತೋಷ ಮೇತ್ರೆ ಅವರು ಮೇಯಿಸುತ್ತಿದ್ದ ಆಡು, ಕುರಿಗಳು ಮರದ ಕೆಳಗೆ ನಿಂತಿದ್ದವು. ಆ ಸಮಯದಲ್ಲಿ ಸಿಡಿಲು ಬಡಿದು 27 ಆಡು, 2 ಕುರಿ, 2 ಕುರಿ ಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದು ಆಡಿನ ಬೆಲೆ ಅಂದಾಜು ₹15 ಸಾವಿರ ಇದೆ. ಆಡು, ಕುರಿಗಳ ಸಾವಿನಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನನಗೆ ಸೂಕ್ತ ಪರಿಹಾರ ನೀಡಿ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಸಂತೋಷ ಮೇತ್ರೆ ಮನವಿ ಮಾಡಿದ್ದಾರೆ.