ಆಗ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದ ತಾಯಿ ಮಹಾದೇವಿ ಅವರಿಗೆ ಮಹೇಶ್ ಸಂಬಂಧಿ ಹೊನ್ನೂರಸ್ವಾಮಿ ಎಂಬುವರು ಈ ವಿಷಯ ತಿಳಿಸಿದ್ದರು. ನಂತರ ಮಹಾದೇವಿ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ‘ಘಟನೆ ಯಾರಿಗೂ ತಿಳಿಯದ ಕಾರಣ ಹೆಣ ಸುಟ್ಟು ಹಾಕೋಣ’ ಎಂದು ಹೊನ್ನೂರಸ್ವಾಮಿ ಹೇಳಿ, ನಂತರ ಸುಟ್ಟು ಹಾಕಿದ್ದರು. ಬಾಲಕ ಮಹೇಶ್ ಬಂದೂಕನ್ನು ಬೆಟ್ಟಕ್ಕೆ ತಂದಿದನ್ನು ಅಲ್ಲಿ ಕುರಿ ಕಾಯುತ್ತಿದ್ದ ಭರತ್ ಮತ್ತು ಪ್ರಜ್ವಲ್ ಎಂಬುವರು ನೋಡಿದ್ದಾರೆ ಎಂದು ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.