<p><strong>ಮಸ್ಕಿ</strong>: ಸಾಮ್ರಾಟ್ ಅಶೋಕನ ಶಿಲಾಶಾಸನ ಪತ್ತೆಯಾದ 120 ವರ್ಷಗಳ ನಂತರ ಶಾಸನದ ಅನತಿ ದೂರದಲ್ಲಿರುವ ನಿಷೇಧಿತ ಪ್ರದೇಶ ‘ಸುಳಿದಿಬ್ಬ’ದ ಉತ್ಖನನಕ್ಕೆ ಇದೀಗ ತಮಿಳುನಾಡು ಸರ್ಕಾರ ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.</p>.<p>ಪುರಾತತ್ವ ಇಲಾಖೆ ಅಧೀನದಲ್ಲಿರುವ ಪಟ್ಟಣದ ಮುದಗಲ್ ರಸ್ತೆಯಲ್ಲಿನ ‘ಸುಳಿದಿಬ್ಬ’ದಲ್ಲಿ ಈಚೆಗೆ ಚೋಳರ ಕಾಲದ ಶಾಸನ ಪತ್ತೆಯಾದ ನಂತರ ತಮಿಳುನಾಡು ಸರ್ಕಾರವು ಮಸ್ಕಿಯಲ್ಲಿ ಉತ್ಖನನ ನಡೆಸುವ ಮಹತ್ವದ ನಿರ್ಣಯ ಕೈಗೊಂಡು ಅದಕ್ಕೆ ಅಗತ್ವವಿರುವ ಹಣ ಮೀಸಲಿಟ್ಟಿದೆ.</p>.<p>‘ಚೋಳ ಅರಸರು ಮೂಲತಃ ತಮಿಳುನಾಡಿಗೆ ಸೇರಿದ್ದವರು. ಮಸ್ಕಿ ಹಳೆಯ ಊರು ಈಗಿನ ಹಳೆಯ ಕ್ಯಾತನಟ್ಟಿ ಎಂಬಲ್ಲಿ ಯುದ್ಧ ಮಾಡಿರಬಹುದು ಎಂಬ ಉಲ್ಲೇಖದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಉತ್ಖನನ ನಡೆಸಿ ಚೋಳ ಅರಸರ ಮೂಲ ಕಂಡು ಹಿಡಿಯುವುದು ತಮಿಳುನಾಡು ಸರ್ಕಾರದ ಮೂಲ ಉದ್ದೇಶವಾಗಿದೆ’ ಎಂದು ಇತಿಹಾಸ ತಜ್ಞ ಚನ್ನಬಸ್ಸಪ್ಪ ಮಲ್ಮಂದಿನ್ನಿ ಅಭಿಪ್ರಾಯಪಡುತ್ತಾರೆ.</p>.<p>‘ಕನ್ನಡ ನಾಡಿದ ಅರಸರೊಂದಿಗೆ ಪಲ್ಲವರು ಮತ್ತು ಚೋಳರು ನಿರಂತರವಾಗಿ ಯುದ್ಧ ಮಾಡಿದ ಸಾಕಷ್ಟು ವಿವರಗಳು ತಮಿಳು ಶಾಸನಗಳಲ್ಲಿ ದೊರೆಯುತ್ತದೆ. ‘ಸುಳಿ ದಿಬ್ಬ’ದಲ್ಲಿ ದೊರೆತ ಚೋಳರ ಕಾಲದ ಶಾಸನ ಇನ್ನಷ್ಟು ಪೂರಕ ಮಾಹಿತಿ ಒದಗಿಸಿದೆ’ ಎಂದು ಸಂಶೋಧಕ ಚನ್ನಬಸ್ಸಯ್ಯ ಹಿರೇಮಠ ಮಸ್ಕಿ ಹೇಳುತ್ತಾರೆ.</p>.<div><blockquote>ಚೋಳರ ಶಾಸನ ದೊರೆತ ಸ್ಥಳದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಪುರಾತತ್ವ ಇಲಾಖೆ ತಜ್ಞರು ಜಂಟಿಯಾಗಿ ಉತ್ಖನನ ನಡೆಸಬೇಕು. ಜಂಟಿ ಅಧ್ಯಯನದಿಂದ ಇನ್ನಷ್ಟು ಅಂಶಗಳು ಹೊರ ಬರಲಿದೆ. </blockquote><span class="attribution">ಚನ್ನಬಸ್ಸಯ್ಯ ಹಿರೇಮಠ, ಇತಿಹಾಸ ಸಂಶೋಧಕ ರಾಯಚೂರು</span></div>.<div><blockquote>ರಾಜ್ಯ ಪುರಾತತ್ವ ಇಲಾಖೆಗೆ ಹಲವಾರು ಭಾರಿ ಮನವಿ ಮಾಡಲಾಗಿದೆ. ಆದರೆ ತಮಿಳುನಾಡು ಸರ್ಕಾರ ಉತ್ಖನನಕ್ಕೆ ತೋರಿಸಿದ ಆಸಕ್ತಿಯನ್ನು ರಾಜ್ಯ ಸರ್ಕಾರ ತೋರಿಸುತ್ತಿಲ್ಲ. </blockquote><span class="attribution">ಚನ್ನಬಸ್ಸಪ್ಪ ಮಲ್ಕಂದಿನ್ನಿ, ಚೋಳರ ಶಾಸನ ಪತ್ತೆ ಮಾಡಿದ ಸಂಶೋಧಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ</strong>: ಸಾಮ್ರಾಟ್ ಅಶೋಕನ ಶಿಲಾಶಾಸನ ಪತ್ತೆಯಾದ 120 ವರ್ಷಗಳ ನಂತರ ಶಾಸನದ ಅನತಿ ದೂರದಲ್ಲಿರುವ ನಿಷೇಧಿತ ಪ್ರದೇಶ ‘ಸುಳಿದಿಬ್ಬ’ದ ಉತ್ಖನನಕ್ಕೆ ಇದೀಗ ತಮಿಳುನಾಡು ಸರ್ಕಾರ ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.</p>.<p>ಪುರಾತತ್ವ ಇಲಾಖೆ ಅಧೀನದಲ್ಲಿರುವ ಪಟ್ಟಣದ ಮುದಗಲ್ ರಸ್ತೆಯಲ್ಲಿನ ‘ಸುಳಿದಿಬ್ಬ’ದಲ್ಲಿ ಈಚೆಗೆ ಚೋಳರ ಕಾಲದ ಶಾಸನ ಪತ್ತೆಯಾದ ನಂತರ ತಮಿಳುನಾಡು ಸರ್ಕಾರವು ಮಸ್ಕಿಯಲ್ಲಿ ಉತ್ಖನನ ನಡೆಸುವ ಮಹತ್ವದ ನಿರ್ಣಯ ಕೈಗೊಂಡು ಅದಕ್ಕೆ ಅಗತ್ವವಿರುವ ಹಣ ಮೀಸಲಿಟ್ಟಿದೆ.</p>.<p>‘ಚೋಳ ಅರಸರು ಮೂಲತಃ ತಮಿಳುನಾಡಿಗೆ ಸೇರಿದ್ದವರು. ಮಸ್ಕಿ ಹಳೆಯ ಊರು ಈಗಿನ ಹಳೆಯ ಕ್ಯಾತನಟ್ಟಿ ಎಂಬಲ್ಲಿ ಯುದ್ಧ ಮಾಡಿರಬಹುದು ಎಂಬ ಉಲ್ಲೇಖದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಉತ್ಖನನ ನಡೆಸಿ ಚೋಳ ಅರಸರ ಮೂಲ ಕಂಡು ಹಿಡಿಯುವುದು ತಮಿಳುನಾಡು ಸರ್ಕಾರದ ಮೂಲ ಉದ್ದೇಶವಾಗಿದೆ’ ಎಂದು ಇತಿಹಾಸ ತಜ್ಞ ಚನ್ನಬಸ್ಸಪ್ಪ ಮಲ್ಮಂದಿನ್ನಿ ಅಭಿಪ್ರಾಯಪಡುತ್ತಾರೆ.</p>.<p>‘ಕನ್ನಡ ನಾಡಿದ ಅರಸರೊಂದಿಗೆ ಪಲ್ಲವರು ಮತ್ತು ಚೋಳರು ನಿರಂತರವಾಗಿ ಯುದ್ಧ ಮಾಡಿದ ಸಾಕಷ್ಟು ವಿವರಗಳು ತಮಿಳು ಶಾಸನಗಳಲ್ಲಿ ದೊರೆಯುತ್ತದೆ. ‘ಸುಳಿ ದಿಬ್ಬ’ದಲ್ಲಿ ದೊರೆತ ಚೋಳರ ಕಾಲದ ಶಾಸನ ಇನ್ನಷ್ಟು ಪೂರಕ ಮಾಹಿತಿ ಒದಗಿಸಿದೆ’ ಎಂದು ಸಂಶೋಧಕ ಚನ್ನಬಸ್ಸಯ್ಯ ಹಿರೇಮಠ ಮಸ್ಕಿ ಹೇಳುತ್ತಾರೆ.</p>.<div><blockquote>ಚೋಳರ ಶಾಸನ ದೊರೆತ ಸ್ಥಳದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಪುರಾತತ್ವ ಇಲಾಖೆ ತಜ್ಞರು ಜಂಟಿಯಾಗಿ ಉತ್ಖನನ ನಡೆಸಬೇಕು. ಜಂಟಿ ಅಧ್ಯಯನದಿಂದ ಇನ್ನಷ್ಟು ಅಂಶಗಳು ಹೊರ ಬರಲಿದೆ. </blockquote><span class="attribution">ಚನ್ನಬಸ್ಸಯ್ಯ ಹಿರೇಮಠ, ಇತಿಹಾಸ ಸಂಶೋಧಕ ರಾಯಚೂರು</span></div>.<div><blockquote>ರಾಜ್ಯ ಪುರಾತತ್ವ ಇಲಾಖೆಗೆ ಹಲವಾರು ಭಾರಿ ಮನವಿ ಮಾಡಲಾಗಿದೆ. ಆದರೆ ತಮಿಳುನಾಡು ಸರ್ಕಾರ ಉತ್ಖನನಕ್ಕೆ ತೋರಿಸಿದ ಆಸಕ್ತಿಯನ್ನು ರಾಜ್ಯ ಸರ್ಕಾರ ತೋರಿಸುತ್ತಿಲ್ಲ. </blockquote><span class="attribution">ಚನ್ನಬಸ್ಸಪ್ಪ ಮಲ್ಕಂದಿನ್ನಿ, ಚೋಳರ ಶಾಸನ ಪತ್ತೆ ಮಾಡಿದ ಸಂಶೋಧಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>