ಈ ಹಿಂದೆ ಆಗಸ್ಟ್ 22ರಂದು ವೈದ್ಯಕೀಯ ವಿದ್ಯಾರ್ಥಿಯ ಸಾವಿನ ಬಳಿಕ ದೂರು ದಾಖಲಿಸಿಕೊಳ್ಳುವುದಕ್ಕೆ ವಿಳಂಬ ಮಾಡಿದ ಕೋಲ್ಕತ್ತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಇದು ಮನಸ್ಸನ್ನು ಕದಡುವ ಘಟನೆ ಎಂದು ಹೇಳಿತ್ತು. ಅಲ್ಲದೆ ಘಟನೆಗಳ ಅನುಕ್ರಮ ಮತ್ತು ಅದರ ಕಾರ್ಯವಿಧಾನದ ಔಪಚಾರಿಕತೆಗಳ ಸಮಯವನ್ನು ಪ್ರಶ್ನಿಸಿತ್ತು.
ಮಹಿಳಾ ವೈದ್ಯರ ಹಾಗೂ ಆರೋಗ್ಯಕರ್ತರ ಭದ್ರತೆಗೆ ಪಾಲಿಸಬೇಕಾದ ಶಿಷ್ಟಾಚಾರ ಕ್ರಮಗಳ ರೂಪಿಸಲು 10 ಸದಸ್ಯರ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಅನ್ನೂ ಸುಪ್ರೀಂ ಕೋರ್ಟ್ ರಚಿಸಿತ್ತು.