ಮೌನಕ್ಕೆ ಶರಣಾದ ಕಾರ್ಯಕರ್ತೆಯರು
ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತೆಯರು ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದವರು ಪೆನ್ಡ್ರೈವ್ ಹಂಚಿಕೆ ಪ್ರಕರಣದ ನಂತರ ತಲೆಯೆತ್ತಿ ಓಡಾಡಲಾರದಷ್ಟು ಮುದುಡಿದ್ದಾರೆ. ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಬಂದಿಯಾಗಿರುವ ಕಾರ್ಯಕರ್ತಯರ ಮನದ ಮಾತು ಆಲಿಸಲು ‘ಪ್ರಜಾವಾಣಿ’ ತಂಡ ಭೇಟಿ ನೀಡಿದಾಗ, ‘ದಯವಿಟ್ಟು ನಮ್ಮನ್ನು ಕಲಕಬೇಡಿ, ಹಳದಿ ಕನ್ನಡಕ ತೊಟ್ಟವರ ನೋಟ, ಸಾಮಾಜಿಕ ಜಾಲತಾಣಗಳ ಟ್ರೋಲ್, ನಿತ್ಯ ನಮ್ಮನ್ನು ಇರಿದು ಕೊಲ್ಲುತ್ತಿವೆ’ ಎಂದವರೇ ಹಲವರು.