ಶನಿವಾರ ಬೆಳಿಗ್ಗೆ 8.50 ರ ಎಸ್ಎಂವಿಟಿ ಬೆಂಗಳೂರು– ಕಾಮಾಕ್ಯ (ರೈಲು ಸಂಖ್ಯೆ: 12551) ಎ.ಸಿ ಎಕ್ಸ್ಪ್ರೆಸ್ ರೈಲು ಧರ್ಮಾವರಂ, ವಿಜಯವಾಡ ಮಾರ್ಗವಾಗಿ ಚಲಿಸಲಿದೆ.ಇದರಿಂದಾಗಿ ಜೋಳರಪೆಟ್ಟೈ, ಕಟ್ಪಾಡಿ, ಪೆರಂಬೂರು ಹಾಗೂ ಗೂಡೂರು ನಿಲ್ದಾಣಗಳು ಬಿಟ್ಟು ಹೋಗಲಿವೆ.
ಬೆಳಿಗ್ಗೆ 9.15ಕ್ಕೆ ಹೊರಡುವ ಎಸ್ಎಂವಿಟಿ ಬೆಂಗಳೂರು–ದಾನಾಪುರ ಸಂಗಮಿತ್ರ ಎಕ್ಸ್ಪ್ರೆಸ್ (ರೈಲು ಸಂಖ್ಯೆ:12295) ರೈಲು, ಧರ್ಮಾವರಂ, ಕಾಜೀಪೇಟ್ ಮಾರ್ಗವಾಗಿ ಪ್ರಯಾಣಿಸಲಿದೆ. ಕೆ.ಆರ್. ಪುರ, ಬಂಗಾರಪೇಟೆ, ಕುಪ್ಪಂ, ಜೋಳರಪೆಟ್ಟೈ, ಕಟ್ಪಾಡಿ, ಆರಕೋಣಂ, ಪೆರಂಬೂರ್, ಗೂಡೂರ್, ನೆಲ್ಲೂರು, ಒಂಗೋಲ್, ವಿಜಯವಾಡ ಹಾಗೂ ವಾರಂಗಲ್ ನಿಲ್ದಾಣಗಳು ತಪ್ಪಲಿವೆ.