<p><strong>ಅಮೃತಸರ</strong>: ‘ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ಮಾರಕಕ್ಕೆ ರಾಣಿ 2ನೇಎಲಿಜಬೆತ್ ಅವರ ಭೇಟಿ, ಆ ಘಟನೆಗೆ ಕ್ಷಮೆ ಕೇಳುವುದಕ್ಕಿಂತಲೂ ಮಿಗಿಲಾದುದು’ ಎಂದು ಜಲಿಯನ್ ವಾಲಾಬಾಗ್ ಟ್ರಸ್ಟ್ ಕಾರ್ಯದರ್ಶಿ ಸುಕುಮಾರ್ ಮುಖರ್ಜಿ ಹೇಳಿದರು.</p>.<p>ರಾಣಿ ಅವರು 1997ರಲ್ಲಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. ಆಗ ರಾಣಿ ತನ್ನ ದೇಶದ ಪರ ಕ್ಷಮೆ ಕೇಳಬಹುದು ಎಂದು ಹೆಚ್ಚಿನವರು ಆಶಿಸಿದ್ದರು. ಆದರೆ, ಹಾಗಾಗಲಿಲ್ಲ. ಬ್ರಿಟಿಷ್ ಸೇನಾಧಿಕಾರಿ ಆದೇಶದಂತೆ 1919ರಲ್ಲಿ ಹತ್ಯಾಕಾಂಡ ನಡೆದಿತ್ತು.</p>.<p><strong>ಇದನ್ನೂ ಓದಿ:</strong><a href="https://www.prajavani.net/world-news/royal-mourning-to-last-until-seven-days-after-queens-funeral-970679.html" itemprop="url" target="_blank">ರಾಣಿ 2ನೇ ಎಲಿಜಬೆತ್ ಗೌರವಾರ್ಥ ಶೋಕಾಚರಣೆ; ಚಾರ್ಲ್ಸ್ ಮುಂದಿನ ರಾಜ </a></p>.<p><strong>ಕೊಹಿನೂರ್ ವಜ್ರ ಮರಳಿಸಿ:</strong> ರಾಣಿ ಎಲಿಜಬೆತ್ ನಿಧನದ ಹಿಂದೆಯೇ ಸದ್ಯ, ಬ್ರಿಟನ್ನ ರಾಜಮನೆತನದಲ್ಲಿ ಇರುವ ಅಮೂಲ್ಯ 105 ಕ್ಯಾರಟ್ನ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸಬೇಕು ಎಂಬ ಅಭಿಯಾನ ಟ್ವಿಟರ್ನಲ್ಲಿ ಆರಂಭವಾಗಿದೆ.</p>.<p>ಈ ವಜ್ರ 14ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಪತ್ತೆಯಾಗಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿ ಅವರ ಸುಪರ್ದಿಗೆ ಹೋಗಿತ್ತು. ಇದು ತಮಗೆ ಸೇರಬೇಕು ಎಂದು ಭಾರತ ಸೇರಿ ನಾಲ್ಕು ದೇಶಗಳು ಪ್ರತಿಪಾದಿಸುತ್ತಿವೆ. ಟ್ವಿಟರ್ನಲ್ಲಿ ಈ ಚರ್ಚೆ ಆರಂಭವಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/queen-elizabeth-was-a-life-well-lived-says-charles-in-his-maiden-address-as-king-970791.html" itemprop="url" target="_blank">ತಾಯಿ ರೀತಿ ನಾನೂ ದೇಶ ಸೇವೆ ಮಾಡುವೆ: ಐತಿಹಾಸಿಕ ಭಾಷಣದಲ್ಲಿ ರಾಜ ಚಾರ್ಲ್ಸ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮೃತಸರ</strong>: ‘ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ಮಾರಕಕ್ಕೆ ರಾಣಿ 2ನೇಎಲಿಜಬೆತ್ ಅವರ ಭೇಟಿ, ಆ ಘಟನೆಗೆ ಕ್ಷಮೆ ಕೇಳುವುದಕ್ಕಿಂತಲೂ ಮಿಗಿಲಾದುದು’ ಎಂದು ಜಲಿಯನ್ ವಾಲಾಬಾಗ್ ಟ್ರಸ್ಟ್ ಕಾರ್ಯದರ್ಶಿ ಸುಕುಮಾರ್ ಮುಖರ್ಜಿ ಹೇಳಿದರು.</p>.<p>ರಾಣಿ ಅವರು 1997ರಲ್ಲಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. ಆಗ ರಾಣಿ ತನ್ನ ದೇಶದ ಪರ ಕ್ಷಮೆ ಕೇಳಬಹುದು ಎಂದು ಹೆಚ್ಚಿನವರು ಆಶಿಸಿದ್ದರು. ಆದರೆ, ಹಾಗಾಗಲಿಲ್ಲ. ಬ್ರಿಟಿಷ್ ಸೇನಾಧಿಕಾರಿ ಆದೇಶದಂತೆ 1919ರಲ್ಲಿ ಹತ್ಯಾಕಾಂಡ ನಡೆದಿತ್ತು.</p>.<p><strong>ಇದನ್ನೂ ಓದಿ:</strong><a href="https://www.prajavani.net/world-news/royal-mourning-to-last-until-seven-days-after-queens-funeral-970679.html" itemprop="url" target="_blank">ರಾಣಿ 2ನೇ ಎಲಿಜಬೆತ್ ಗೌರವಾರ್ಥ ಶೋಕಾಚರಣೆ; ಚಾರ್ಲ್ಸ್ ಮುಂದಿನ ರಾಜ </a></p>.<p><strong>ಕೊಹಿನೂರ್ ವಜ್ರ ಮರಳಿಸಿ:</strong> ರಾಣಿ ಎಲಿಜಬೆತ್ ನಿಧನದ ಹಿಂದೆಯೇ ಸದ್ಯ, ಬ್ರಿಟನ್ನ ರಾಜಮನೆತನದಲ್ಲಿ ಇರುವ ಅಮೂಲ್ಯ 105 ಕ್ಯಾರಟ್ನ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸಬೇಕು ಎಂಬ ಅಭಿಯಾನ ಟ್ವಿಟರ್ನಲ್ಲಿ ಆರಂಭವಾಗಿದೆ.</p>.<p>ಈ ವಜ್ರ 14ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಪತ್ತೆಯಾಗಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿ ಅವರ ಸುಪರ್ದಿಗೆ ಹೋಗಿತ್ತು. ಇದು ತಮಗೆ ಸೇರಬೇಕು ಎಂದು ಭಾರತ ಸೇರಿ ನಾಲ್ಕು ದೇಶಗಳು ಪ್ರತಿಪಾದಿಸುತ್ತಿವೆ. ಟ್ವಿಟರ್ನಲ್ಲಿ ಈ ಚರ್ಚೆ ಆರಂಭವಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/queen-elizabeth-was-a-life-well-lived-says-charles-in-his-maiden-address-as-king-970791.html" itemprop="url" target="_blank">ತಾಯಿ ರೀತಿ ನಾನೂ ದೇಶ ಸೇವೆ ಮಾಡುವೆ: ಐತಿಹಾಸಿಕ ಭಾಷಣದಲ್ಲಿ ರಾಜ ಚಾರ್ಲ್ಸ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>