ಸಮಾಧಾನ್ ಮಂಟೆ ಹತ್ಯೆಯಾದ ಕಾನ್ಸ್ಟೆಬಲ್. ಮೀರಜ್ ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಮಾಧಾನ್, ಕುಪ್ವಾಡದ ಬಾರ್ಗೆ ಹೋದಾಗ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂವರು ಅಪರಿಚಿತರೊಂದಿಗೆ ಜಗಳ ಮಾಡಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿ ಹೊರಗಡೆ ಹೋಗಿ ತನ್ನ ವಾಹನದಲ್ಲಿದ್ದ ಹರಿತವಾದ ಆಯುಧ ತಂದಿದ್ದಾನೆ. ಇತರ ಇಬ್ಬರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದ ಸಮಾಧಾನ್ ಮೇಲೆ ಆ ವ್ಯಕ್ತಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಎದೆ, ತಲೆ ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಿಂದ ಕುಸಿದು ಬಿದ್ದ ಸಮಾಧಾನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.