ಅಜಯ್ ಕುಮಾರ್ ತಂದೆಯವರದ್ದು ಎನ್ನಲಾದ ವಿಡಿಯೊ ಒಂದು ಹರಿದಾಡಿದ್ದು, ತಮಗೆ ಪರಿಹಾರ ಬಂದಿಲ್ಲ ಎಂಬ ಹೇಳಿಕೆ ಅದರಲ್ಲಿ ಇತ್ತು. ಆ ವಿಡಿಯೊವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹುತಾತ್ಮ ಅಗ್ನಿವೀರರ ವಿಷಯದಲ್ಲಿ ಸಂಸತ್ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ, ಅದಕ್ಕೆ ಕ್ಷಮೆ ಕೇಳಬೇಕು ಎಂದೂ ಪೋಸ್ಟ್ ಮೂಲಕ ಆಗ್ರಹಿಸಿದ್ದರು. ಇದಕ್ಕೆ ಭಾರತೀಯ ಸೇನೆಯು ಪೋಸ್ಟ್ ಮೂಲಕವೇ ಪ್ರತಿಕ್ರಿಯೆ ನೀಡಿದೆ.