ಕೇಜ್ರಿವಾಲ್ರನ್ನು ಉದ್ದೇಶಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ‘ಹಲೋ ದೆಹಲಿ, ಕಾಶ್ಮೀರಿ ಹಿಂದೂಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ನಾನು ಸಿಕ್ಕುಬಿದ್ದಿದ್ದೇನೆ. ಈ ಬಗ್ಗೆ ಹಲವಾರು ಸಂದರ್ಶನಗಳನ್ನು ನೀಡಿದ ನಂತರವೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈಗ ನನಗಿರುವುದು ಒಂದೇ ದಾರಿ. ನಾನು ಬಲಿಪಶುವಾಗಿದ್ದೇನೆಂದು ತೋರಿಸಿಕೊಳ್ಳುವುದು. ಬಿಜೆಪಿ ನನ್ನನ್ನು ಕೊಲ್ಲಲು ಬಯಸಿದೆ ಎಂದು ಹೇಳಿಕೊಳ್ಳುವುದು. ದಯವಿಟ್ಟು ಈ ಸಂದೇಶವನ್ನು ಹರಡಲು ಸಹಾಯ ಮಾಡಿ. ಇಂತಿ ನಿಮ್ಮ ಪ್ರಚಾರ ಮಂತ್ರಿ(ಅರವಿಂದ್ ಕೇಜ್ರಿವಾಲ್)’ ಎಂದು ಗೇಲಿ ಮಾಡಿದ್ದಾರೆ.