<p><strong>ಪಟೇಲ್ ಬಣದ ದಳ ಜತೆ ಮೈತ್ರಿಗೆ ಬಿಜೆಪಿ ಒಲವು</strong></p>.<p>ನವದೆಹಲಿ, ಜುಲೈ 26– ಕರ್ನಾಟಕದಲ್ಲಿ ಬಿಜೆಪಿ, ಲೋಕಶಕ್ತಿ ಹಾಗೂ ಜನತಾದಳದ ಜೆ.ಎಚ್. ಪಟೇಲ್ ಬಣದ ಜತೆಗೆ ಮುಂಬರುವ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಅವರು ಅನುಕೂಲ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. </p>.<p>ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಸೋಲಿಸುವುದೇ ಮುಖ್ಯವಾಗಿರುವ ಬಗ್ಗೆ ಇಂದು ಕುಶಭಾವು ಜತೆ ಸಮತಾ ಪಕ್ಷದ ಜಾರ್ಜ್ ಫರ್ನಾಂಡಿಸ್, ಲೋಕಶಕ್ತಿಯ ರಾಮಕೃಷ್ಣ ಹೆಗಡೆ ಹಾಗೂ ಲೋಕಶಕ್ತಿಯ ಕಾರ್ಯಾಧ್ಯಕ್ಷ ಡಾ. ಜೀವರಾಜ ಆಳ್ವ ಅವರು ಮಾತುಕತೆ ನಡೆಸಿದರು.</p>.<p><strong>ಕಾರ್ಗಿಲ್: ಆಕ್ರಮಣಕಾರರಿಂದ ಮುಕ್ತ</strong></p>.<p>ನವದೆಹಲಿ, ಜುಲೈ 26 (ಪಿಟಿಐ)– ಎರಡೂವರೆ ತಿಂಗಳ ಕಾರ್ಯಾಚರಣೆ ನಂತರ ಕಾರ್ಗಿಲ್ ವಲಯದೊಳಕ್ಕೆ ನುಸುಳಿದ್ದ ಪಾಕಿಸ್ತಾನದ ಕಟ್ಟ ಕಡೆಯ ಅತಿಕ್ರಮಣದಾಕಾರರನ್ನು ಭಾರತೀಯ ಪಡೆಗಳು ಇಂದು ಹೊರದಬ್ಬಿದವಾದರೂ, ವಾಸ್ತವ ಹತೋಟಿ ರೇಖೆಯುದ್ದಕ್ಕೂ ಜಮಾಯಿಸಿರುವ ಎರಡೂ ರಾಷ್ಟ್ರಗಳ ಪಡೆಗಳ ನಡುವೆ ಭಾರಿ ಷೆಲ್ ದಾಳಿ ನಡೆಯಿತು.</p>.<p>ಇದರೊಂದಿಗೆ ಭಾರತೀಯ ಪಡೆಗಳು ಅಂತಿಮವಾಗಿ ವಾಸ್ತವ ಹತೋಟಿ ರಾಖೆಯಲ್ಲಿ ಯಥಾಸ್ಥಿತಿ ಕಾಪಾಡುವಲ್ಲಿ ಯಶಸ್ವಿಯಾಗಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟೇಲ್ ಬಣದ ದಳ ಜತೆ ಮೈತ್ರಿಗೆ ಬಿಜೆಪಿ ಒಲವು</strong></p>.<p>ನವದೆಹಲಿ, ಜುಲೈ 26– ಕರ್ನಾಟಕದಲ್ಲಿ ಬಿಜೆಪಿ, ಲೋಕಶಕ್ತಿ ಹಾಗೂ ಜನತಾದಳದ ಜೆ.ಎಚ್. ಪಟೇಲ್ ಬಣದ ಜತೆಗೆ ಮುಂಬರುವ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಅವರು ಅನುಕೂಲ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. </p>.<p>ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸನ್ನು ಸೋಲಿಸುವುದೇ ಮುಖ್ಯವಾಗಿರುವ ಬಗ್ಗೆ ಇಂದು ಕುಶಭಾವು ಜತೆ ಸಮತಾ ಪಕ್ಷದ ಜಾರ್ಜ್ ಫರ್ನಾಂಡಿಸ್, ಲೋಕಶಕ್ತಿಯ ರಾಮಕೃಷ್ಣ ಹೆಗಡೆ ಹಾಗೂ ಲೋಕಶಕ್ತಿಯ ಕಾರ್ಯಾಧ್ಯಕ್ಷ ಡಾ. ಜೀವರಾಜ ಆಳ್ವ ಅವರು ಮಾತುಕತೆ ನಡೆಸಿದರು.</p>.<p><strong>ಕಾರ್ಗಿಲ್: ಆಕ್ರಮಣಕಾರರಿಂದ ಮುಕ್ತ</strong></p>.<p>ನವದೆಹಲಿ, ಜುಲೈ 26 (ಪಿಟಿಐ)– ಎರಡೂವರೆ ತಿಂಗಳ ಕಾರ್ಯಾಚರಣೆ ನಂತರ ಕಾರ್ಗಿಲ್ ವಲಯದೊಳಕ್ಕೆ ನುಸುಳಿದ್ದ ಪಾಕಿಸ್ತಾನದ ಕಟ್ಟ ಕಡೆಯ ಅತಿಕ್ರಮಣದಾಕಾರರನ್ನು ಭಾರತೀಯ ಪಡೆಗಳು ಇಂದು ಹೊರದಬ್ಬಿದವಾದರೂ, ವಾಸ್ತವ ಹತೋಟಿ ರೇಖೆಯುದ್ದಕ್ಕೂ ಜಮಾಯಿಸಿರುವ ಎರಡೂ ರಾಷ್ಟ್ರಗಳ ಪಡೆಗಳ ನಡುವೆ ಭಾರಿ ಷೆಲ್ ದಾಳಿ ನಡೆಯಿತು.</p>.<p>ಇದರೊಂದಿಗೆ ಭಾರತೀಯ ಪಡೆಗಳು ಅಂತಿಮವಾಗಿ ವಾಸ್ತವ ಹತೋಟಿ ರಾಖೆಯಲ್ಲಿ ಯಥಾಸ್ಥಿತಿ ಕಾಪಾಡುವಲ್ಲಿ ಯಶಸ್ವಿಯಾಗಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>