<p><strong>ಪಾಕ್ಗೆ ಯುದ್ಧ ವಿಮಾನ ಘಟಕ: ಫ್ರೆಂಚ್ ರಾಯಭಾರಿಗೆ ಭಾರತದ ಕಳವಳ ರವಾನೆ</strong></p><p>ನವದೆಹಲಿ, ಜ. 7– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಫ್ರಾನ್ಸ್ ಒಪ್ಪಂದ ಮಾಡಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂದು ಫ್ರೆಂಚ್ ರಾಯಭಾರಿ ಜರ್ಗೆನ್ಸೆನ್ ಅವರನ್ನು ವಿದೇಶಾಂಗ ಕಚೇರಿಗೆ ಕರೆಸಿಕೊಂಡು, ಆ ವರದಿಗಳ ಬಗೆಗೆ ಭಾರತ ತನ್ನ ಕಳವಳವನ್ನು ವ್ಯಕ್ತಪಡಿಸಿತು. </p><p>ಮಿರೇಜ್ ಯುದ್ಧ ವಿಮಾನಗಳ ಉತ್ಪಾದನೆಗೆ ಪಾಕಿಸ್ತಾನದಲ್ಲಿ ಕಾರ್ಖಾನೆ ನಿರ್ಮಿಸಲು ನೆರವಾಗಲು ಫ್ರಾನ್ಸ್ ನಿರ್ಧರಿಸಿದೆ ಎಂಬ ವಿಷಯವನ್ನು, ವಿದೇಶಾಂಗ ವ್ಯವಹಾರ ಸಚಿವ ಖಾತೆ ಕಾರ್ಯದರ್ಶಿ ವಿ.ಸಿ. ತ್ರಿವೇದಿ ಅವರು ಫ್ರೆಂಚ್ ರಾಯಭಾರಿ ಜೊತೆ ನಡೆಸಿದ ಮಾತುಕತೆಯಲ್ಲಿ ಪ್ರಸ್ತಾಪಿಸಲಾಯಿತು. </p><p><strong>ಬೆಂಗಳೂರು–ಮೈಸೂರು ಬ್ರಾಡ್ಗೇಜ್ ಮಾರ್ಗ ಪರಿಶೀಲನೆಯಲ್ಲಿ</strong></p><p>ಮದರಾಸ್, ಜ. 7– ಬೆಂಗಳೂರು–ಮೈಸೂರು ರೈಲು ಮಾರ್ಗವನ್ನು ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತಿಸುವ ಸಲಹೆಯನ್ನು ರೈಲ್ವೆಯು ಪರಿಶೀಲಿಸುತ್ತಿದೆ ಎಂದು ರೈಲ್ವೆ ಮಂತ್ರಿ ಎಲ್. ಎನ್. ಮಿಶ್ರಾ ಹೇಳಿದರು. </p><p>ರೈಲ್ವೆ ಬಳಕೆದಾರರ ವಲಯ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಈ ಯೋಜನೆ ಬಗ್ಗೆ ಈಗಾಗಲೇ ಸಮೀಕ್ಷೆ ನಡೆದಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಕ್ಗೆ ಯುದ್ಧ ವಿಮಾನ ಘಟಕ: ಫ್ರೆಂಚ್ ರಾಯಭಾರಿಗೆ ಭಾರತದ ಕಳವಳ ರವಾನೆ</strong></p><p>ನವದೆಹಲಿ, ಜ. 7– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಲು ಫ್ರಾನ್ಸ್ ಒಪ್ಪಂದ ಮಾಡಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂದು ಫ್ರೆಂಚ್ ರಾಯಭಾರಿ ಜರ್ಗೆನ್ಸೆನ್ ಅವರನ್ನು ವಿದೇಶಾಂಗ ಕಚೇರಿಗೆ ಕರೆಸಿಕೊಂಡು, ಆ ವರದಿಗಳ ಬಗೆಗೆ ಭಾರತ ತನ್ನ ಕಳವಳವನ್ನು ವ್ಯಕ್ತಪಡಿಸಿತು. </p><p>ಮಿರೇಜ್ ಯುದ್ಧ ವಿಮಾನಗಳ ಉತ್ಪಾದನೆಗೆ ಪಾಕಿಸ್ತಾನದಲ್ಲಿ ಕಾರ್ಖಾನೆ ನಿರ್ಮಿಸಲು ನೆರವಾಗಲು ಫ್ರಾನ್ಸ್ ನಿರ್ಧರಿಸಿದೆ ಎಂಬ ವಿಷಯವನ್ನು, ವಿದೇಶಾಂಗ ವ್ಯವಹಾರ ಸಚಿವ ಖಾತೆ ಕಾರ್ಯದರ್ಶಿ ವಿ.ಸಿ. ತ್ರಿವೇದಿ ಅವರು ಫ್ರೆಂಚ್ ರಾಯಭಾರಿ ಜೊತೆ ನಡೆಸಿದ ಮಾತುಕತೆಯಲ್ಲಿ ಪ್ರಸ್ತಾಪಿಸಲಾಯಿತು. </p><p><strong>ಬೆಂಗಳೂರು–ಮೈಸೂರು ಬ್ರಾಡ್ಗೇಜ್ ಮಾರ್ಗ ಪರಿಶೀಲನೆಯಲ್ಲಿ</strong></p><p>ಮದರಾಸ್, ಜ. 7– ಬೆಂಗಳೂರು–ಮೈಸೂರು ರೈಲು ಮಾರ್ಗವನ್ನು ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತಿಸುವ ಸಲಹೆಯನ್ನು ರೈಲ್ವೆಯು ಪರಿಶೀಲಿಸುತ್ತಿದೆ ಎಂದು ರೈಲ್ವೆ ಮಂತ್ರಿ ಎಲ್. ಎನ್. ಮಿಶ್ರಾ ಹೇಳಿದರು. </p><p>ರೈಲ್ವೆ ಬಳಕೆದಾರರ ವಲಯ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಈ ಯೋಜನೆ ಬಗ್ಗೆ ಈಗಾಗಲೇ ಸಮೀಕ್ಷೆ ನಡೆದಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>