<p><strong>ರಾಜೀವ್ ಗಾಂಧಿ, ಕ್ವಟ್ರೋಚಿ, ಛಡ್ಡಾ ವಿರುದ್ಧ ಆರೋಪ ಪಟ್ಟಿ</strong></p><p>ನವದೆಹಲಿ, ಅ. 22 (ಪಿಟಿಐ): ಹನ್ನೆರಡು ವರ್ಷದ ಹಿಂದೆ ಇಡೀ ದೇಶವನ್ನೇ ತಲ್ಲಣಗೊಳಿಸಿದ ಬೋಫೋರ್ಸ್ ಫಿರಂಗಿ ವ್ಯವಹಾರದಲ್ಲಿ ರುಷುವತ್ತು ಪಡೆದ ಆರೋಪದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಭಾಗಿಯಾಗಿದ್ದಾರೆ ಎಂದು ಹಗರಣ ಕುರಿತು ತನಿಖೆ ನಡೆಸಿದ ಸಿಬಿಐ ಹೇಳಿದೆ.</p><p>ಆದರೆ ಇದೇ ಆರೋಪದ ಸಂಬಂಧ ಇಟಲಿ ಉದ್ಯಮಿ ಒಟಾವಿಯೋ ಕ್ವಟ್ರೋಚಿ, ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್, ಅನಿವಾಸಿ ಭಾರತೀಯ ಉದ್ಯಮಿ ವಿನ್ ಛಡ್ಡಾ ಹಾಗೂ ಮತ್ತಿಬ್ಬರ ವಿರುದ್ಧ ಇಂದು ನಿಯೋಜಿತ ಸಿಬಿಐ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.</p><p><strong>ಅತ್ಯುತ್ತಮ ರಸ್ತೆ: ಇನ್ನೂ ಮಾಯಾಮೃಗ</strong></p><p>ಬೆಂಗಳೂರು, ಅ. 22– ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳಲ್ಲಿ ಓಡಾಡುವ ನಗರದ ನಾಗರಿಕರ ಕನಸು ಈ ವರ್ಷದ ಅಂತ್ಯಕ್ಕೆ ನನಸಾಗುವ ಸಾಧ್ಯತೆಗಳು ಈಗ ದೂರವಾಗಿವೆ.</p><p>ಬಹುದಿನಗಳ ಈ ಮಹತ್ವದ ಯೋಜನೆ ಇನ್ನೂ ಕಾಗದದ ರೂಪದಲ್ಲಿಯೇ ಇದ್ದು ವಾಸ್ತವ ರೂಪ ಪಡೆಯಲು ಮತ್ತಷ್ಟು ದಿನ ಕಾಯುವಂತಾಗಿದೆ.</p><p>ಉದ್ದೇಶಿತ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಬಾಂಡ್ಗಳ ಮೂಲಕ ಸಂಗ್ರಹಿಸಿರುವ ಹಣ ಇದ್ದರೂ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ.</p><p>ಯೋಜನೆಯ ಫಲ ಈ ವರ್ಷದ ಅಂತ್ಯಕ್ಕೆ ನಗರದ ನಾಗರಿಕರಿಗೆ ದೊರೆಯಲಿವೆ ಎಂದು ಪಾಲಿಕೆ ಹತ್ತು ಹಲವು ಬಾರಿ ಪ್ರಕಟಿಸಿತ್ತು. ಆದರೆ ಈಗ ಪಾಲಿಕೆ ಹೇಳುವ ಪ್ರಕಾರ ‘ಸತತವಾಗಿ ಸುರಿದ ಮಳೆಯಿಂದಾಗಿ’ ಮತ್ತೆ ಕಾಮಗಾರಿಗಳು ಮುಂದಕ್ಕೆ ಹೋಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜೀವ್ ಗಾಂಧಿ, ಕ್ವಟ್ರೋಚಿ, ಛಡ್ಡಾ ವಿರುದ್ಧ ಆರೋಪ ಪಟ್ಟಿ</strong></p><p>ನವದೆಹಲಿ, ಅ. 22 (ಪಿಟಿಐ): ಹನ್ನೆರಡು ವರ್ಷದ ಹಿಂದೆ ಇಡೀ ದೇಶವನ್ನೇ ತಲ್ಲಣಗೊಳಿಸಿದ ಬೋಫೋರ್ಸ್ ಫಿರಂಗಿ ವ್ಯವಹಾರದಲ್ಲಿ ರುಷುವತ್ತು ಪಡೆದ ಆರೋಪದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಭಾಗಿಯಾಗಿದ್ದಾರೆ ಎಂದು ಹಗರಣ ಕುರಿತು ತನಿಖೆ ನಡೆಸಿದ ಸಿಬಿಐ ಹೇಳಿದೆ.</p><p>ಆದರೆ ಇದೇ ಆರೋಪದ ಸಂಬಂಧ ಇಟಲಿ ಉದ್ಯಮಿ ಒಟಾವಿಯೋ ಕ್ವಟ್ರೋಚಿ, ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್, ಅನಿವಾಸಿ ಭಾರತೀಯ ಉದ್ಯಮಿ ವಿನ್ ಛಡ್ಡಾ ಹಾಗೂ ಮತ್ತಿಬ್ಬರ ವಿರುದ್ಧ ಇಂದು ನಿಯೋಜಿತ ಸಿಬಿಐ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.</p><p><strong>ಅತ್ಯುತ್ತಮ ರಸ್ತೆ: ಇನ್ನೂ ಮಾಯಾಮೃಗ</strong></p><p>ಬೆಂಗಳೂರು, ಅ. 22– ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳಲ್ಲಿ ಓಡಾಡುವ ನಗರದ ನಾಗರಿಕರ ಕನಸು ಈ ವರ್ಷದ ಅಂತ್ಯಕ್ಕೆ ನನಸಾಗುವ ಸಾಧ್ಯತೆಗಳು ಈಗ ದೂರವಾಗಿವೆ.</p><p>ಬಹುದಿನಗಳ ಈ ಮಹತ್ವದ ಯೋಜನೆ ಇನ್ನೂ ಕಾಗದದ ರೂಪದಲ್ಲಿಯೇ ಇದ್ದು ವಾಸ್ತವ ರೂಪ ಪಡೆಯಲು ಮತ್ತಷ್ಟು ದಿನ ಕಾಯುವಂತಾಗಿದೆ.</p><p>ಉದ್ದೇಶಿತ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಬಾಂಡ್ಗಳ ಮೂಲಕ ಸಂಗ್ರಹಿಸಿರುವ ಹಣ ಇದ್ದರೂ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ.</p><p>ಯೋಜನೆಯ ಫಲ ಈ ವರ್ಷದ ಅಂತ್ಯಕ್ಕೆ ನಗರದ ನಾಗರಿಕರಿಗೆ ದೊರೆಯಲಿವೆ ಎಂದು ಪಾಲಿಕೆ ಹತ್ತು ಹಲವು ಬಾರಿ ಪ್ರಕಟಿಸಿತ್ತು. ಆದರೆ ಈಗ ಪಾಲಿಕೆ ಹೇಳುವ ಪ್ರಕಾರ ‘ಸತತವಾಗಿ ಸುರಿದ ಮಳೆಯಿಂದಾಗಿ’ ಮತ್ತೆ ಕಾಮಗಾರಿಗಳು ಮುಂದಕ್ಕೆ ಹೋಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>