<p><strong>ನವದೆಹಲಿ, ಅ. 9–</strong> ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಚುನಾಯಿತ ಶಾಸಕರಿಂದ ಮಾತ್ರ ಆಯ್ಕೆ ಮಾಡಲು ಕಾಂಗ್ರೆಸ್ ವರಿಷ್ಠ ಮಂಡಳಿಯು ನಿರ್ಧರಿಸಿದ್ದು, ಇದರಿಂದ ವಿಧಾನಸಭೆಯ ಸದಸ್ಯರಲ್ಲದ ಬೇರೆ ಸ್ಪರ್ಧಾಕಾಂಕ್ಷಿಗಳ ಆಸೆಗೆ ಬಹುತೇಕವಾಗಿ ತಣ್ಣೀರೆರಚಿದಂತಾಗಿದೆ.</p><p>ಮುಂದಿನ ದಿನಗಳಲ್ಲಿ ಯಾವುದೇ ಭಿನ್ನಮತಕ್ಕೆ ಅವಕಾಶ ಕೊಡದಿರುವಂತೆ ಮುನ್ನೆಚ್ಚರಿಕೆಯಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸದಿರಲು ಪಕ್ಷದ ವರಿಷ್ಠ ಮಂಡಳಿ ತೀರ್ಮಾನಿಸಿದೆ ಎನ್ನಲಾಗಿದೆ.</p><p><strong>ಸೋಲಿಗೆ ಸೂಕ್ಷ್ಮ ಅಂಶಗಳು ಕಾರಣ</strong></p><p><strong>ಬೆಂಗಳೂರು, ಅ. 9–</strong> ರಾಜ್ಯದಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದ ವಿರುದ್ಧ ವ್ಯಕ್ತವಾದ ಜನಾದೇಶದಿಂದಲೇ ಜನತಾದಳ (ಯು)– ಬಿಜೆಪಿ ಮೈತ್ರಿಕೂಟ ನೆಲಕಚ್ಚಿತು ಎಂಬುದು ಸರಿಯಲ್ಲ, ಚುನಾವಣೆ ಫಲಿತಾಂಶ ಏರುಪೇರಾಗುವುದಕ್ಕೆ ಅನೇಕ ಕಾರಣಗಳಿ ರುತ್ತವೆ ಎಂದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಮುಖಂಡ, ಸಚಿವ ರಾಮಕೃಷ್ಣ ಹೆಗಡೆ ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಅ. 9–</strong> ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಚುನಾಯಿತ ಶಾಸಕರಿಂದ ಮಾತ್ರ ಆಯ್ಕೆ ಮಾಡಲು ಕಾಂಗ್ರೆಸ್ ವರಿಷ್ಠ ಮಂಡಳಿಯು ನಿರ್ಧರಿಸಿದ್ದು, ಇದರಿಂದ ವಿಧಾನಸಭೆಯ ಸದಸ್ಯರಲ್ಲದ ಬೇರೆ ಸ್ಪರ್ಧಾಕಾಂಕ್ಷಿಗಳ ಆಸೆಗೆ ಬಹುತೇಕವಾಗಿ ತಣ್ಣೀರೆರಚಿದಂತಾಗಿದೆ.</p><p>ಮುಂದಿನ ದಿನಗಳಲ್ಲಿ ಯಾವುದೇ ಭಿನ್ನಮತಕ್ಕೆ ಅವಕಾಶ ಕೊಡದಿರುವಂತೆ ಮುನ್ನೆಚ್ಚರಿಕೆಯಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸದಿರಲು ಪಕ್ಷದ ವರಿಷ್ಠ ಮಂಡಳಿ ತೀರ್ಮಾನಿಸಿದೆ ಎನ್ನಲಾಗಿದೆ.</p><p><strong>ಸೋಲಿಗೆ ಸೂಕ್ಷ್ಮ ಅಂಶಗಳು ಕಾರಣ</strong></p><p><strong>ಬೆಂಗಳೂರು, ಅ. 9–</strong> ರಾಜ್ಯದಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದ ವಿರುದ್ಧ ವ್ಯಕ್ತವಾದ ಜನಾದೇಶದಿಂದಲೇ ಜನತಾದಳ (ಯು)– ಬಿಜೆಪಿ ಮೈತ್ರಿಕೂಟ ನೆಲಕಚ್ಚಿತು ಎಂಬುದು ಸರಿಯಲ್ಲ, ಚುನಾವಣೆ ಫಲಿತಾಂಶ ಏರುಪೇರಾಗುವುದಕ್ಕೆ ಅನೇಕ ಕಾರಣಗಳಿ ರುತ್ತವೆ ಎಂದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಮುಖಂಡ, ಸಚಿವ ರಾಮಕೃಷ್ಣ ಹೆಗಡೆ ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>