<p><strong>ಭೂಸುಧಾರಣೆ ವಿಧೇಯಕಕ್ಕೆ ಇನ್ನೊಂದು ವಾರದಲ್ಲಿ ರಾಷ್ಟ್ರಪತಿ ಸಹಿ?</strong></p><p><strong>ಬೆಂಗಳೂರು, ಜ. 21–</strong> ಗೇಣಿದಾರರು ಮತ್ತು ಭೂಹೀನ ರೈತರು, ಕಳೆದ ಎಂಟು ತಿಂಗಳುಗಳಿಂದ ಬಕಪಕ್ಷಿಗಳಂತೆ ಕಾದಿರುವ ಕರ್ನಾಟಕದ ಭೂಸುಧಾರಣಾ ವಿಧೇಯಕವು ಇನ್ನೊಂದು ವಾರದಲ್ಲಿ ರಾಷ್ಟ್ರಪತಿಯವರ ಸಹಿ ಪಡೆದುಬರಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.</p><p>ವಿಧೇಯಕವು ಕಳೆದ ವಾರ ಕೇಂದ್ರ ಕಾನೂನು ಇಲಾಖೆಯಿಂದ ಗೃಹ ಇಲಾಖೆಗೆ ಹೋಗಿದ್ದು, ಅಲ್ಲಿಯೂ ಪರಿಶೀಲನೆ ಅಂತಿಮ ಘಟ್ಟದಲ್ಲಿದೆ. ಇನ್ನೊಂದು ವಾರದಲ್ಲಿ ಇದೆಲ್ಲ ಮುಗಿದು, ರಾಷ್ಟ್ರಪತಿಯವರ ಒಪ್ಪಿಗೆ ವಿಧೇಯಕಕ್ಕೆ ದೊರಕಲಿದೆ ಎಂದು ಸರ್ಕಾರಿ ವಕ್ತಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p><p>***</p><p><strong>ಕೊಲ್ಲಿಬೆಟ್ಟ ಅಣೆ ನಿರ್ಮಾಣಕ್ಕೆ ತಮಿಳುನಾಡಿಗೆ ಕೇಂದ್ರ ಅನುಮತಿ ನಿರಾಕರಣೆ</strong></p><p><strong>ಮದ್ರಾಸ್, ಜ. 21–</strong> ಕಾವೇರಿ ಜಲ ವಿವಾದ ಇನ್ನೂ ಇತ್ಯರ್ಥವಾಗಬೇಕಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಯೋಜನೆಗೂ ಅನುಮತಿ ನೀಡಲಾಗದು ಎಂದು ಕೇಂದ್ರ ಸರ್ಕಾರವು ತಮಿಳುನಾಡಿಗೆ ತಿಳಿಸಿದೆ ಎಂದು ಕಾಮಗಾರಿ ಸಚಿವ ಪಿ.ಯು. ಷಣ್ಮುಗಂ ಅವರು ಇಂದು ರಾಜ್ಯ ವಿಧಾನಸಭೆಗೆ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.</p><p>ತಮಿಳುನಾಡು ಸರ್ಕಾರವು ಕೊಲ್ಲಿ ಬೆಟ್ಟ ಜಲಾಶಯ ಯೋಜನೆ ನಿರ್ಮಾಣಕ್ಕಾಗಿ ಕೇಂದ್ರ ಜಲ ಮತ್ತು ವಿದ್ಯುತ್ ಆಯೋಗಕ್ಕೆ ಬರೆದು ತಾಂತ್ರಿಕ ಅನುಮತಿ ಕೋರಿದಾಗ ಕೇಂದ್ರವು ಈ ರೀತಿಯ ಉತ್ತರ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೂಸುಧಾರಣೆ ವಿಧೇಯಕಕ್ಕೆ ಇನ್ನೊಂದು ವಾರದಲ್ಲಿ ರಾಷ್ಟ್ರಪತಿ ಸಹಿ?</strong></p><p><strong>ಬೆಂಗಳೂರು, ಜ. 21–</strong> ಗೇಣಿದಾರರು ಮತ್ತು ಭೂಹೀನ ರೈತರು, ಕಳೆದ ಎಂಟು ತಿಂಗಳುಗಳಿಂದ ಬಕಪಕ್ಷಿಗಳಂತೆ ಕಾದಿರುವ ಕರ್ನಾಟಕದ ಭೂಸುಧಾರಣಾ ವಿಧೇಯಕವು ಇನ್ನೊಂದು ವಾರದಲ್ಲಿ ರಾಷ್ಟ್ರಪತಿಯವರ ಸಹಿ ಪಡೆದುಬರಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.</p><p>ವಿಧೇಯಕವು ಕಳೆದ ವಾರ ಕೇಂದ್ರ ಕಾನೂನು ಇಲಾಖೆಯಿಂದ ಗೃಹ ಇಲಾಖೆಗೆ ಹೋಗಿದ್ದು, ಅಲ್ಲಿಯೂ ಪರಿಶೀಲನೆ ಅಂತಿಮ ಘಟ್ಟದಲ್ಲಿದೆ. ಇನ್ನೊಂದು ವಾರದಲ್ಲಿ ಇದೆಲ್ಲ ಮುಗಿದು, ರಾಷ್ಟ್ರಪತಿಯವರ ಒಪ್ಪಿಗೆ ವಿಧೇಯಕಕ್ಕೆ ದೊರಕಲಿದೆ ಎಂದು ಸರ್ಕಾರಿ ವಕ್ತಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p><p>***</p><p><strong>ಕೊಲ್ಲಿಬೆಟ್ಟ ಅಣೆ ನಿರ್ಮಾಣಕ್ಕೆ ತಮಿಳುನಾಡಿಗೆ ಕೇಂದ್ರ ಅನುಮತಿ ನಿರಾಕರಣೆ</strong></p><p><strong>ಮದ್ರಾಸ್, ಜ. 21–</strong> ಕಾವೇರಿ ಜಲ ವಿವಾದ ಇನ್ನೂ ಇತ್ಯರ್ಥವಾಗಬೇಕಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಯೋಜನೆಗೂ ಅನುಮತಿ ನೀಡಲಾಗದು ಎಂದು ಕೇಂದ್ರ ಸರ್ಕಾರವು ತಮಿಳುನಾಡಿಗೆ ತಿಳಿಸಿದೆ ಎಂದು ಕಾಮಗಾರಿ ಸಚಿವ ಪಿ.ಯು. ಷಣ್ಮುಗಂ ಅವರು ಇಂದು ರಾಜ್ಯ ವಿಧಾನಸಭೆಗೆ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.</p><p>ತಮಿಳುನಾಡು ಸರ್ಕಾರವು ಕೊಲ್ಲಿ ಬೆಟ್ಟ ಜಲಾಶಯ ಯೋಜನೆ ನಿರ್ಮಾಣಕ್ಕಾಗಿ ಕೇಂದ್ರ ಜಲ ಮತ್ತು ವಿದ್ಯುತ್ ಆಯೋಗಕ್ಕೆ ಬರೆದು ತಾಂತ್ರಿಕ ಅನುಮತಿ ಕೋರಿದಾಗ ಕೇಂದ್ರವು ಈ ರೀತಿಯ ಉತ್ತರ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>