<p><strong>ಲೆವಿ ಪಡೆವವರೆಗೆ ಅಕ್ರಮ ಸಂಗ್ರಹ ಬೇಡ: ವರ್ತಕರಿಗೆ ಸಚಿವರ ಮನವಿ</strong></p><p><strong>ಬೆಂಗಳೂರು, ಜ. 25</strong>– ಸರ್ಕಾರ ಉದ್ದೇಶಿಸಿರು ವಷ್ಟು ಲೆವಿ ಭತ್ತವನ್ನು ಪಡೆಯುವವರೆಗೆ ಭತ್ತವನ್ನು ಅಕ್ರಮವಾಗಿ ಶೇಖರಿಸಿಡಬಾರದೆಂದು ಆಹಾರ ಸಚಿವ ಕೆ.ಎಚ್.ಪಾಟೀಲರು ಇಂದು ರಾಜ್ಯದ ವರ್ತಕ ವೃಂದಕ್ಕೆ ಮನವಿ ಮಾಡಿದರು.</p><p>ತೆರೆದ ಮನಸ್ಸಿನಿಂದ ಹಾಗೂ ಅಷ್ಟೇ ಖಂಡತುಂಡವಾಗಿ ಮಾತನಾಡಿದ ಆಹಾರ ಸಚಿವರು, ಅಕ್ರಮವಾಗಿ ಸಂಗ್ರಹಿಸಿದರೆ ಸರ್ಕಾರದ ತೀವ್ರ ಕ್ರಮ ತಪ್ಪದೆಂದೂ ಎಚ್ಚರಿಕೆ ನೀಡಿದರು.</p><p>‘ನಿರಪರಾಧಿಗಳನ್ನು ಶಿಕ್ಷಿಸುವ ಇಚ್ಛೆ ನನಗಿಲ್ಲ. ಅಪರಾಧಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಯಕೆಯೂ ಇಲ್ಲ’ ಎಂದು ಸೂಚ್ಯವಾಗಿ ಹೇಳಿ, ಸರ್ಕಾರದೊಡನೆ ಸಹಕರಿಸಬೇಕು ಎಂದು ಕೋರಿದರು.</p><p>‘ಹಿಂದಿನದ್ದನ್ನು ಬಿಟ್ಟುಬಿಡಿ. ಹಿಂದಿನ ಬಾಬು ನಡೆಯೋದಿಲ್ಲ. ಮಗ ಸಿಕ್ಕಿದರೂ ಕೆ.ಎಚ್.ಪಾಟೀಲ್ ಬಿಡೋದಿಲ್ಲ’ ಎಂದು ಸ್ಪಷ್ಟಪಡಿಸಿದರು.</p><p>***</p><p><strong>ವಿ.ಕೆ.ಆರ್.ವಿ. ರಾವ್, ಡಿ.ವಿ.ಜಿ.ಗೆ ಪದ್ಮಭೂಷಣ</strong></p><p><strong>ನವದೆಹಲಿ, ಜ. 25–</strong> ಕನ್ನಡದ ಖ್ಯಾತ ಸಾಹಿತಿ ಡಾ. ಡಿ.ವಿ.ಗುಂಡಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.</p><p>ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರಿಗೂ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೆವಿ ಪಡೆವವರೆಗೆ ಅಕ್ರಮ ಸಂಗ್ರಹ ಬೇಡ: ವರ್ತಕರಿಗೆ ಸಚಿವರ ಮನವಿ</strong></p><p><strong>ಬೆಂಗಳೂರು, ಜ. 25</strong>– ಸರ್ಕಾರ ಉದ್ದೇಶಿಸಿರು ವಷ್ಟು ಲೆವಿ ಭತ್ತವನ್ನು ಪಡೆಯುವವರೆಗೆ ಭತ್ತವನ್ನು ಅಕ್ರಮವಾಗಿ ಶೇಖರಿಸಿಡಬಾರದೆಂದು ಆಹಾರ ಸಚಿವ ಕೆ.ಎಚ್.ಪಾಟೀಲರು ಇಂದು ರಾಜ್ಯದ ವರ್ತಕ ವೃಂದಕ್ಕೆ ಮನವಿ ಮಾಡಿದರು.</p><p>ತೆರೆದ ಮನಸ್ಸಿನಿಂದ ಹಾಗೂ ಅಷ್ಟೇ ಖಂಡತುಂಡವಾಗಿ ಮಾತನಾಡಿದ ಆಹಾರ ಸಚಿವರು, ಅಕ್ರಮವಾಗಿ ಸಂಗ್ರಹಿಸಿದರೆ ಸರ್ಕಾರದ ತೀವ್ರ ಕ್ರಮ ತಪ್ಪದೆಂದೂ ಎಚ್ಚರಿಕೆ ನೀಡಿದರು.</p><p>‘ನಿರಪರಾಧಿಗಳನ್ನು ಶಿಕ್ಷಿಸುವ ಇಚ್ಛೆ ನನಗಿಲ್ಲ. ಅಪರಾಧಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಯಕೆಯೂ ಇಲ್ಲ’ ಎಂದು ಸೂಚ್ಯವಾಗಿ ಹೇಳಿ, ಸರ್ಕಾರದೊಡನೆ ಸಹಕರಿಸಬೇಕು ಎಂದು ಕೋರಿದರು.</p><p>‘ಹಿಂದಿನದ್ದನ್ನು ಬಿಟ್ಟುಬಿಡಿ. ಹಿಂದಿನ ಬಾಬು ನಡೆಯೋದಿಲ್ಲ. ಮಗ ಸಿಕ್ಕಿದರೂ ಕೆ.ಎಚ್.ಪಾಟೀಲ್ ಬಿಡೋದಿಲ್ಲ’ ಎಂದು ಸ್ಪಷ್ಟಪಡಿಸಿದರು.</p><p>***</p><p><strong>ವಿ.ಕೆ.ಆರ್.ವಿ. ರಾವ್, ಡಿ.ವಿ.ಜಿ.ಗೆ ಪದ್ಮಭೂಷಣ</strong></p><p><strong>ನವದೆಹಲಿ, ಜ. 25–</strong> ಕನ್ನಡದ ಖ್ಯಾತ ಸಾಹಿತಿ ಡಾ. ಡಿ.ವಿ.ಗುಂಡಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.</p><p>ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರಿಗೂ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>