<p><strong>ಮೈಸೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ‘ದೌರ್ಜನ್ಯ’ ಕುರಿತು ವಿಚಾರಣೆ ಭರವಸೆ</strong></p><p><strong>ಬೆಂಗಳೂರು</strong>, ಮಾರ್ಚ್ 4– ಕೆಲವು ವಿದ್ಯಾರ್ಥಿಗಳ ಮೇಲೆ ಶನಿವಾರ ಮೈಸೂರಿನಲ್ಲಿ ಪೊಲೀಸರು ದೌರ್ಜನ್ಯ ನಡೆಸಿದರೆಂಬ ಆಪಾದನೆ ಬಗೆಗೆ ವಿಚಾರಣೆ ನಡೆಸುವ ಭರವಸೆಯನ್ನು ಲೋಕೋಪಯೋಗಿ ಸಚಿವ ಎಚ್.ಎಂ.ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ನೀಡಿದರು.</p><p>ಪ್ರಶ್ನೋತ್ತರವಾದ ಕೂಡಲೇ ಆ ಬಗ್ಗೆ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಚ್.ಡಿ.ದೇವೇಗೌಡ ಅವರು ‘ಸಾರ್ವಜನಿಕ ಸಭೆಯಲ್ಲಿ ವಿದ್ಯಾರ್ಥಿಗಳು ಕೆಲವರು ಚೀಟಿಯೊಂದನ್ನು ಕಳುಹಿಸಿ ಬದರಿನಾರಾಯಣ್ ಅವರನ್ನು ಮಂತ್ರಿ ಮಂಡಲದಿಂದ ತೆಗೆದುಹಾಕಿದ ಬಗೆಗೆ’ ವಿವರಣೆ ಕೇಳಿದುದಕ್ಕೆ ಪೊಲೀಸರು ಅವರ ಮೇಲೆ ಕ್ರಮ ತೆಗೆದುಕೊಂಡರೆಂದೂ, ಆ ಸಭೆಯಲ್ಲಿ ಬದರಿನಾರಾಯಣ್, ಮುಖ್ಯಮಂತ್ರಿ, ಅಜೀಜ್ ಸೇಠ್, ರಾಚಯ್ಯ ಅವರು ಉಪಸ್ಥಿತರಿದ್ದರೆಂದೂ ಹೇಳಿದರು.</p><p><strong>ಗೋಲಿಬಾರ್ ಇಬ್ಬರು ಬಾಲಕರ ಸಾವು</strong></p><p><strong>ಅಹಮದಾಬಾದ್</strong>, ಮಾರ್ಚ್ 4– ಇಲ್ಲಿನ ಖಾಡಿಯಾ ಕ್ರಾಸ್ ರಸ್ತೆ ಮತ್ತು ಧಾರಿಯಾಪುರ ಪ್ರದೇಶದಲ್ಲಿ ಪೊಲೀಸರು ಇಂದು ಗೋಲಿಬಾರ್ ಮಾಡಿದಾಗ ಇಬ್ಬರು ಬಾಲಕರು ಗಾಯಗೊಂಡು ನಂತರ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.</p><p>ದೊಂಬಿ ಎದ್ದಿದ್ದ ಕೆಲವರು, ಜನರು ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲೆಸೆದು ಬೆಂಕಿ ಹಚ್ಚಲು ಪ್ರಯತ್ನಿಸಿದಾಗ ಪೊಲೀಸರು, ಗೋಲಿಬಾರ್ ಮಾಡಿದರೆಂದು ಅಧಿಕೃತ ವಕ್ತಾರರೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ‘ದೌರ್ಜನ್ಯ’ ಕುರಿತು ವಿಚಾರಣೆ ಭರವಸೆ</strong></p><p><strong>ಬೆಂಗಳೂರು</strong>, ಮಾರ್ಚ್ 4– ಕೆಲವು ವಿದ್ಯಾರ್ಥಿಗಳ ಮೇಲೆ ಶನಿವಾರ ಮೈಸೂರಿನಲ್ಲಿ ಪೊಲೀಸರು ದೌರ್ಜನ್ಯ ನಡೆಸಿದರೆಂಬ ಆಪಾದನೆ ಬಗೆಗೆ ವಿಚಾರಣೆ ನಡೆಸುವ ಭರವಸೆಯನ್ನು ಲೋಕೋಪಯೋಗಿ ಸಚಿವ ಎಚ್.ಎಂ.ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ನೀಡಿದರು.</p><p>ಪ್ರಶ್ನೋತ್ತರವಾದ ಕೂಡಲೇ ಆ ಬಗ್ಗೆ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಚ್.ಡಿ.ದೇವೇಗೌಡ ಅವರು ‘ಸಾರ್ವಜನಿಕ ಸಭೆಯಲ್ಲಿ ವಿದ್ಯಾರ್ಥಿಗಳು ಕೆಲವರು ಚೀಟಿಯೊಂದನ್ನು ಕಳುಹಿಸಿ ಬದರಿನಾರಾಯಣ್ ಅವರನ್ನು ಮಂತ್ರಿ ಮಂಡಲದಿಂದ ತೆಗೆದುಹಾಕಿದ ಬಗೆಗೆ’ ವಿವರಣೆ ಕೇಳಿದುದಕ್ಕೆ ಪೊಲೀಸರು ಅವರ ಮೇಲೆ ಕ್ರಮ ತೆಗೆದುಕೊಂಡರೆಂದೂ, ಆ ಸಭೆಯಲ್ಲಿ ಬದರಿನಾರಾಯಣ್, ಮುಖ್ಯಮಂತ್ರಿ, ಅಜೀಜ್ ಸೇಠ್, ರಾಚಯ್ಯ ಅವರು ಉಪಸ್ಥಿತರಿದ್ದರೆಂದೂ ಹೇಳಿದರು.</p><p><strong>ಗೋಲಿಬಾರ್ ಇಬ್ಬರು ಬಾಲಕರ ಸಾವು</strong></p><p><strong>ಅಹಮದಾಬಾದ್</strong>, ಮಾರ್ಚ್ 4– ಇಲ್ಲಿನ ಖಾಡಿಯಾ ಕ್ರಾಸ್ ರಸ್ತೆ ಮತ್ತು ಧಾರಿಯಾಪುರ ಪ್ರದೇಶದಲ್ಲಿ ಪೊಲೀಸರು ಇಂದು ಗೋಲಿಬಾರ್ ಮಾಡಿದಾಗ ಇಬ್ಬರು ಬಾಲಕರು ಗಾಯಗೊಂಡು ನಂತರ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.</p><p>ದೊಂಬಿ ಎದ್ದಿದ್ದ ಕೆಲವರು, ಜನರು ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲೆಸೆದು ಬೆಂಕಿ ಹಚ್ಚಲು ಪ್ರಯತ್ನಿಸಿದಾಗ ಪೊಲೀಸರು, ಗೋಲಿಬಾರ್ ಮಾಡಿದರೆಂದು ಅಧಿಕೃತ ವಕ್ತಾರರೊಬ್ಬರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>