<p>ಅನಾಥಾಲಯದ ಹೆಸರಲ್ಲಿ ಲಕ್ಷಾಂತರ ರೂ. ‘ಲೂಟಿ’ ನಿಲ್ಲಿಸಲು ಉಗ್ರ ಕ್ರಮ</p>.<p>ಬೆಂಗಳೂರು, ಮಾರ್ಚ್ 29– ರಾಜ್ಯದಲ್ಲಿರುವ ಸುಮಾರು 232 ಅನಾಥಾಲಯಗಳ ಹೆಸರಿನಲ್ಲಿ ಪ್ರತಿವರ್ಷ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ‘ಲೂಟಿ’ಯಾಗುತ್ತಿರುವ ಅನಾಥ ಪರಿಸ್ಥಿತಿಯನ್ನು ಕಳವಳದಿಂದ ಗಮ ನಿಸಿರುವ ಸರ್ಕಾರ, ಈ ಅಪವ್ಯಯ ತಪ್ಪಿಸಲು ಉಗ್ರ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.</p>.<p>ಅನಾಥಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿನ ಸುಳ್ಳು ಸಂಖ್ಯೆ ನೀಡಿ ಸರ್ಕಾರದಿಂದ ಹಣ ಪಡೆಯುವುದು, ಅನುಕೂಲಸ್ಥ ಹುಡುಗರಾಗಿದ್ದರೂ ಅವರು ನಿರ್ಗತಿಕರೆಂದು ಸರ್ಟಿಫಿಕೇಟ್ ಪಡೆಯುವುದು, ಜೊತೆಗೆ ವಿದ್ಯಾರ್ಥಿ<br />ಗಳಿಂದಲೂ ಹಣ ವಸೂಲಿ ಮಾಡುವುದು, ಅನಾಥಾಲಯಗಳ ವ್ಯವಸ್ಥೆಯಲ್ಲಿ ಸರ್ಕಾರದ ಗಮನಕ್ಕೆ ಬಂದಿರುವ ಅವ್ಯವಹಾರಗಳಾಗಿವೆ.</p>.<p>ಅಡಿಗರ ‘ವರ್ಧಮಾನ’ ಅತ್ಯುತ್ತಮ ಗ್ರಂಥ: 3 ಸಾವಿರ ರೂ. ಬಹುಮಾನ</p>.<p>ಬೆಂಗಳೂರು, ಮಾರ್ಚ್ 29– ಗೋಪಾಲಕೃಷ್ಣ ಅಡಿಗರು ಬರೆದ ‘ವರ್ಧಮಾನ’ ಎಂಬ ಕವನ ಸಂಗ್ರಹವನ್ನು 1972ನೇ ಸಾಲಿನ ಅತ್ಯುತ್ತಮ ಕನ್ನಡ ಗ್ರಂಥ ಎಂದು ತೀರ್ಮಾನಿಸಿ ರಾಜ್ಯದ ಸಾಹಿತ್ಯ ಅಕಾಡೆಮಿ ಮೂರು ಸಹಸ್ರ ರೂಪಾಯಿ ಬಹುಮಾನ ನೀಡಿದೆ.</p>.<p>ಎಲ್.ಎಸ್.ಶೇಷಗಿರಿರಾಯರ ‘ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ’ಯು ವಿಮರ್ಶಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅನಾಥಾಲಯದ ಹೆಸರಲ್ಲಿ ಲಕ್ಷಾಂತರ ರೂ. ‘ಲೂಟಿ’ ನಿಲ್ಲಿಸಲು ಉಗ್ರ ಕ್ರಮ</p>.<p>ಬೆಂಗಳೂರು, ಮಾರ್ಚ್ 29– ರಾಜ್ಯದಲ್ಲಿರುವ ಸುಮಾರು 232 ಅನಾಥಾಲಯಗಳ ಹೆಸರಿನಲ್ಲಿ ಪ್ರತಿವರ್ಷ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ‘ಲೂಟಿ’ಯಾಗುತ್ತಿರುವ ಅನಾಥ ಪರಿಸ್ಥಿತಿಯನ್ನು ಕಳವಳದಿಂದ ಗಮ ನಿಸಿರುವ ಸರ್ಕಾರ, ಈ ಅಪವ್ಯಯ ತಪ್ಪಿಸಲು ಉಗ್ರ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.</p>.<p>ಅನಾಥಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿನ ಸುಳ್ಳು ಸಂಖ್ಯೆ ನೀಡಿ ಸರ್ಕಾರದಿಂದ ಹಣ ಪಡೆಯುವುದು, ಅನುಕೂಲಸ್ಥ ಹುಡುಗರಾಗಿದ್ದರೂ ಅವರು ನಿರ್ಗತಿಕರೆಂದು ಸರ್ಟಿಫಿಕೇಟ್ ಪಡೆಯುವುದು, ಜೊತೆಗೆ ವಿದ್ಯಾರ್ಥಿ<br />ಗಳಿಂದಲೂ ಹಣ ವಸೂಲಿ ಮಾಡುವುದು, ಅನಾಥಾಲಯಗಳ ವ್ಯವಸ್ಥೆಯಲ್ಲಿ ಸರ್ಕಾರದ ಗಮನಕ್ಕೆ ಬಂದಿರುವ ಅವ್ಯವಹಾರಗಳಾಗಿವೆ.</p>.<p>ಅಡಿಗರ ‘ವರ್ಧಮಾನ’ ಅತ್ಯುತ್ತಮ ಗ್ರಂಥ: 3 ಸಾವಿರ ರೂ. ಬಹುಮಾನ</p>.<p>ಬೆಂಗಳೂರು, ಮಾರ್ಚ್ 29– ಗೋಪಾಲಕೃಷ್ಣ ಅಡಿಗರು ಬರೆದ ‘ವರ್ಧಮಾನ’ ಎಂಬ ಕವನ ಸಂಗ್ರಹವನ್ನು 1972ನೇ ಸಾಲಿನ ಅತ್ಯುತ್ತಮ ಕನ್ನಡ ಗ್ರಂಥ ಎಂದು ತೀರ್ಮಾನಿಸಿ ರಾಜ್ಯದ ಸಾಹಿತ್ಯ ಅಕಾಡೆಮಿ ಮೂರು ಸಹಸ್ರ ರೂಪಾಯಿ ಬಹುಮಾನ ನೀಡಿದೆ.</p>.<p>ಎಲ್.ಎಸ್.ಶೇಷಗಿರಿರಾಯರ ‘ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ’ಯು ವಿಮರ್ಶಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>