<p><strong>ಗುರುವಾರ 18–7–1974</strong></p><p>ವೇತನಶ್ರೇಣಿ ಪುನರ್ವಿಮರ್ಶೆಗೆ ಆಯೋಗ ರಚಿಸಲು ಕರ್ನಾಟಕ ಸರ್ಕಾರದ ನಿರ್ಧಾರ</p><p>ಬೆಂಗಳೂರು, ಜುಲೈ 17– ರಾಜ್ಯ ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆಗಳು ಹಾಗೂ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ಸಿಬ್ಬಂದಿಯ ವೇತನಶ್ರೇಣಿ ಪುನರ್ವಿಮರ್ಶೆಗೆ ಆಯೋಗವೊಂದನ್ನು ನೇಮಿಸಲು ಕರ್ನಾಟಕ ಸಚಿವ ಸಂಪುಟ ಇಂದು ನಿರ್ಧರಿಸಿತು.</p><p>ಕೆಲವು ದಿನಗಳಲ್ಲಿಯೇ ರಚಿತವಾಗುವ ಈ ಆಯೋಗವು ರಾಜ್ಯದ ಆರ್ಥಿಕ ಸೌಕರ್ಯದ ಚೌಕಟ್ಟಿನಲ್ಲಿ, ಯಾವ ರೀತಿಯಲ್ಲಿ ವೇತನಶ್ರೇಣಿ ಪುನರ್ವಿಮರ್ಶೆಯಾಗಬೇಕು<br>ಎಂಬುದರ ಬಗ್ಗೆ ವ್ಯಾಪಕ ಹಾಗೂ ಆಳವಾದ ಸಮೀಕ್ಷೆ ನಡೆಸುವುದು ಎಂದು ಅರ್ಥ ಹಾಗೂ ವಾರ್ತಾ ಮಂತ್ರಿ ಶ್ರೀ ಎಂ.ವೈ. ಘೋರ್ಪಡೆ ಅವರು ವರದಿಗಾರರಿಗೆ ತಿಳಿಸಿದರು.</p><p><strong>ವೈದ್ಯರೂ ವಕೀಲರೂ ತೆರಿಗೆಗಳ್ಳರೇ!</strong></p><p>ನವದೆಹಲಿ, ಜುಲೈ 17– ದೇಶದಲ್ಲಿರುವ ವೃತ್ತಿನಿರತ ವೈದ್ಯರಲ್ಲಿ ಕೇವಲ ಶೇ 50ರಷ್ಟು ಮಂದಿ ಆದಾಯ ತೆರಿಗೆ ಸಲ್ಲಿಸುತ್ತಿದ್ದಾರೆಂದು ಹಣಕಾಸು ಖಾತೆ ಸ್ಟೇಟ್ ಸಚಿವ ಕೆ.ಆರ್.ಗಣೇಶ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.</p><p>ವಕೀಲರೂ ಸೇರಿದಂತೆ ವೃತ್ತಿನಿರತರಲ್ಲಿ, ಸ್ವಯಂ ಉದ್ಯೋಗಿಗಳಲ್ಲಿ ತೆರಿಗೆಗಳ್ಳತನದ ಪ್ರಮಾಣ ಹೆಚ್ಚಾಗಿಯೇ ಇದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.</p><p>ಈ ವರ್ಗದವರಲ್ಲಿ ತೆರಿಗೆ ತಪ್ಪಿಸಿ<br>ಕೊಳ್ಳುವವರ ಸಮೀಕ್ಷೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವರು ಇಂದು ತಿಳಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುವಾರ 18–7–1974</strong></p><p>ವೇತನಶ್ರೇಣಿ ಪುನರ್ವಿಮರ್ಶೆಗೆ ಆಯೋಗ ರಚಿಸಲು ಕರ್ನಾಟಕ ಸರ್ಕಾರದ ನಿರ್ಧಾರ</p><p>ಬೆಂಗಳೂರು, ಜುಲೈ 17– ರಾಜ್ಯ ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆಗಳು ಹಾಗೂ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ಸಿಬ್ಬಂದಿಯ ವೇತನಶ್ರೇಣಿ ಪುನರ್ವಿಮರ್ಶೆಗೆ ಆಯೋಗವೊಂದನ್ನು ನೇಮಿಸಲು ಕರ್ನಾಟಕ ಸಚಿವ ಸಂಪುಟ ಇಂದು ನಿರ್ಧರಿಸಿತು.</p><p>ಕೆಲವು ದಿನಗಳಲ್ಲಿಯೇ ರಚಿತವಾಗುವ ಈ ಆಯೋಗವು ರಾಜ್ಯದ ಆರ್ಥಿಕ ಸೌಕರ್ಯದ ಚೌಕಟ್ಟಿನಲ್ಲಿ, ಯಾವ ರೀತಿಯಲ್ಲಿ ವೇತನಶ್ರೇಣಿ ಪುನರ್ವಿಮರ್ಶೆಯಾಗಬೇಕು<br>ಎಂಬುದರ ಬಗ್ಗೆ ವ್ಯಾಪಕ ಹಾಗೂ ಆಳವಾದ ಸಮೀಕ್ಷೆ ನಡೆಸುವುದು ಎಂದು ಅರ್ಥ ಹಾಗೂ ವಾರ್ತಾ ಮಂತ್ರಿ ಶ್ರೀ ಎಂ.ವೈ. ಘೋರ್ಪಡೆ ಅವರು ವರದಿಗಾರರಿಗೆ ತಿಳಿಸಿದರು.</p><p><strong>ವೈದ್ಯರೂ ವಕೀಲರೂ ತೆರಿಗೆಗಳ್ಳರೇ!</strong></p><p>ನವದೆಹಲಿ, ಜುಲೈ 17– ದೇಶದಲ್ಲಿರುವ ವೃತ್ತಿನಿರತ ವೈದ್ಯರಲ್ಲಿ ಕೇವಲ ಶೇ 50ರಷ್ಟು ಮಂದಿ ಆದಾಯ ತೆರಿಗೆ ಸಲ್ಲಿಸುತ್ತಿದ್ದಾರೆಂದು ಹಣಕಾಸು ಖಾತೆ ಸ್ಟೇಟ್ ಸಚಿವ ಕೆ.ಆರ್.ಗಣೇಶ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.</p><p>ವಕೀಲರೂ ಸೇರಿದಂತೆ ವೃತ್ತಿನಿರತರಲ್ಲಿ, ಸ್ವಯಂ ಉದ್ಯೋಗಿಗಳಲ್ಲಿ ತೆರಿಗೆಗಳ್ಳತನದ ಪ್ರಮಾಣ ಹೆಚ್ಚಾಗಿಯೇ ಇದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.</p><p>ಈ ವರ್ಗದವರಲ್ಲಿ ತೆರಿಗೆ ತಪ್ಪಿಸಿ<br>ಕೊಳ್ಳುವವರ ಸಮೀಕ್ಷೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಸೂಚಿಸಲಾಗಿದೆ ಎಂದು ಸಚಿವರು ಇಂದು ತಿಳಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>