<p><strong>ಹಣದುಬ್ಬರ, ಕಪ್ಪುಹಣ ತಡೆಗೆ ಇನ್ನೂ ಹಲವು ಕ್ರಮ: ಚವಾಣ್</strong></p>.<p>ನವದೆಹಲಿ, ಜುಲೈ 21– ಹಣದುಬ್ಬರ ಮತ್ತು ಕಪ್ಪುಹಣ ತಡೆಗಟ್ಟಲು ಇನ್ನೂ ಕೆಲವು ಉಗ್ರಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಮಂತ್ರಿ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ಸೂಚಿಸಿದರು.</p>.<p>ಎ.ಐ.ಸಿ.ಸಿ. ಅಧಿವೇಶನದಲ್ಲಿ ಆರ್ಥಿಕ ನೀತಿ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಚವಾಣ್ ಅವರು ಹಣದುಬ್ಬರ ಹಾಗೂ ಕಪ್ಪು ಹಣದ ತಡೆಗೆ ಸರಕಾರ ಸಮಗ್ರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತವೆ. ಅದರೆ ಸಮಗ್ರ ಕಾರ್ಯಕ್ರಮಗಳನ್ನು ತತ್ಕ್ಷಣವೇ ಹೊರಗೆಡುವುದಿಲ್ಲ’ ಎಂದರು. </p>.<p><strong>‘ಭಾರತೀಯ ಲೋಕದಳ’</strong></p>.<p>ನವದೆಹಲಿ, ಜುಲೈ 21– ಭಾರತೀಯ ಲೋಕದಳ, ವಿರೋಧಪಕ್ಷಗಳ ವಿಲೀನದಿಂದ ಉದಯಿಸಲಿರುವ ಹೊಸಪಕ್ಷವಿದು.</p>.<p>ಭಾರತೀಯ ಕ್ರಾಂತಿದಳದ ಅಧ್ಯಕ್ಷ ಚರಣ್ಸಿಂಗ್ ಅವರು ಈ ನಿರ್ಧಾರವನ್ನು ಇಂದು ಇಲ್ಲಿ ಪ್ರಕಟಿಸಿದರು.</p>.<p>ಈ ಹೊಸಪಕ್ಷದ ಉದ್ಘಾಟನೆಯು ಆಗಸ್ಟ್ 14ರಂದು ರಾಜಧಾನಿಯಲ್ಲಿ ನಡೆಯುವುದು ಎಂದೂ ಅವರು ಹೇಳಿದರು. ವಿಲೀನವಾಗಲಿರುವ ಏಳು ವಿರೋಧಪಕ್ಷಗಳ ನಾಯಕರ ಹೊಸ ಪಕ್ಷದ ಧ್ವಜ ಹಾಗೂ ಚುನಾವಣೆ ಸಂಕೇತಗಳನ್ನು ಆಂಗೀಕರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಣದುಬ್ಬರ, ಕಪ್ಪುಹಣ ತಡೆಗೆ ಇನ್ನೂ ಹಲವು ಕ್ರಮ: ಚವಾಣ್</strong></p>.<p>ನವದೆಹಲಿ, ಜುಲೈ 21– ಹಣದುಬ್ಬರ ಮತ್ತು ಕಪ್ಪುಹಣ ತಡೆಗಟ್ಟಲು ಇನ್ನೂ ಕೆಲವು ಉಗ್ರಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಮಂತ್ರಿ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ಸೂಚಿಸಿದರು.</p>.<p>ಎ.ಐ.ಸಿ.ಸಿ. ಅಧಿವೇಶನದಲ್ಲಿ ಆರ್ಥಿಕ ನೀತಿ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಚವಾಣ್ ಅವರು ಹಣದುಬ್ಬರ ಹಾಗೂ ಕಪ್ಪು ಹಣದ ತಡೆಗೆ ಸರಕಾರ ಸಮಗ್ರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತವೆ. ಅದರೆ ಸಮಗ್ರ ಕಾರ್ಯಕ್ರಮಗಳನ್ನು ತತ್ಕ್ಷಣವೇ ಹೊರಗೆಡುವುದಿಲ್ಲ’ ಎಂದರು. </p>.<p><strong>‘ಭಾರತೀಯ ಲೋಕದಳ’</strong></p>.<p>ನವದೆಹಲಿ, ಜುಲೈ 21– ಭಾರತೀಯ ಲೋಕದಳ, ವಿರೋಧಪಕ್ಷಗಳ ವಿಲೀನದಿಂದ ಉದಯಿಸಲಿರುವ ಹೊಸಪಕ್ಷವಿದು.</p>.<p>ಭಾರತೀಯ ಕ್ರಾಂತಿದಳದ ಅಧ್ಯಕ್ಷ ಚರಣ್ಸಿಂಗ್ ಅವರು ಈ ನಿರ್ಧಾರವನ್ನು ಇಂದು ಇಲ್ಲಿ ಪ್ರಕಟಿಸಿದರು.</p>.<p>ಈ ಹೊಸಪಕ್ಷದ ಉದ್ಘಾಟನೆಯು ಆಗಸ್ಟ್ 14ರಂದು ರಾಜಧಾನಿಯಲ್ಲಿ ನಡೆಯುವುದು ಎಂದೂ ಅವರು ಹೇಳಿದರು. ವಿಲೀನವಾಗಲಿರುವ ಏಳು ವಿರೋಧಪಕ್ಷಗಳ ನಾಯಕರ ಹೊಸ ಪಕ್ಷದ ಧ್ವಜ ಹಾಗೂ ಚುನಾವಣೆ ಸಂಕೇತಗಳನ್ನು ಆಂಗೀಕರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>