<p>ಗಡಿ ಭದ್ರತಾ ಪಡೆಯವರಿಂದ ನಾಗಾ, ಮಣಿಪುರಿ ಮಹಿಳೆಯರ ಶೀಲಭಂಗ ಆರೋಪ: ತನಿಖೆಯ ಭರವಸೆ</p>.<p>ನವದೆಹಲಿ, ಏ. 18– ಗಡಿ ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಸಿಪಾಯಿಗಳು ಕಳೆದ ತಿಂಗಳು ಮತ್ತು ಈ ತಿಂಗಳ ಆದಿಯಲ್ಲಿ ನಾಗಾ ಹಾಗೂ ಮಣಿಪುರಿ ಮಹಿಳೆಯರ ಶೀಲಭಂಗ ಮಾಡಿದರೆಂಬ ಆಪಾದನೆಗಳ ಬಗ್ಗೆ ಕೂಲಂಕಷ ತನಿಖೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಉಮಾಶಂಕರ ದೀಕ್ಷಿತ್ ಅವರು ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.</p>.<p>ಇಂಥ ಅಕೃತ್ಯವನ್ನೆಸಗಿದವರ ವಿರುದ್ಧ ಆಪಾದನೆಗಳು ರುಜುವಾತಾದಲ್ಲಿ ಉಗ್ರ ಕ್ರಮ ಕೈಗೊಳ್ಳುವುದಾಗಿಯೂ ಸಚಿವರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸದಸ್ಯರಿಗೆ ಆಶ್ವಾಸನೆ ನೀಡಿದರು.</p>.<p>ಔಷಧಗಳಲ್ಲಿ ಕಲಬೆರಕೆ: ಉಗ್ರ ಕ್ರಮಕ್ಕೆ ರಾಜ್ಯಗಳಿಗೆ ಆದೇಶ</p>.<p>ನವದೆಹಲಿ, ಏ. 18– ಔಷಧ ಕಲಬೆರಕೆ ಅಪರಾಧ ಎಸಗುವವರಿಗೆ ಸಾಧ್ಯವಾದಷ್ಟೂ ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಕರಣ್ ಸಿಂಗ್ ಅವರು ರಾಜ್ಯಗಳ ಆರೋಗ್ಯ ಸಚಿವರಿಗೆ ಬರೆದಿರುವ ಒಂದು ಪತ್ರದಲ್ಲಿ ಕರೆ ಕೊಟ್ಟಿದ್ದಾರೆ.</p>.<p>ಔಷಧಿ ಮತ್ತು ಶೃಂಗಾರ ವಸ್ತುಗಳಿಗೆ ಸಂಬಂಧಿಸಿದ ಕಾನೂನನ್ನು ಸೂಕ್ತವಾಗಿ ತಿದ್ದುಪಡಿ ಮಾಡಲೂ ಕ್ರಮ ತೆಗೆದುಕೊಳ್ಳಲಾ ಗುತ್ತಿದೆ ಎಂದು ಇಂದು ಇಲ್ಲಿ ಪ್ರಕಟಿಸಿದ ಕರಣ್ ಸಿಂಗ್ರ ಪತ್ರದಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಡಿ ಭದ್ರತಾ ಪಡೆಯವರಿಂದ ನಾಗಾ, ಮಣಿಪುರಿ ಮಹಿಳೆಯರ ಶೀಲಭಂಗ ಆರೋಪ: ತನಿಖೆಯ ಭರವಸೆ</p>.<p>ನವದೆಹಲಿ, ಏ. 18– ಗಡಿ ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಸಿಪಾಯಿಗಳು ಕಳೆದ ತಿಂಗಳು ಮತ್ತು ಈ ತಿಂಗಳ ಆದಿಯಲ್ಲಿ ನಾಗಾ ಹಾಗೂ ಮಣಿಪುರಿ ಮಹಿಳೆಯರ ಶೀಲಭಂಗ ಮಾಡಿದರೆಂಬ ಆಪಾದನೆಗಳ ಬಗ್ಗೆ ಕೂಲಂಕಷ ತನಿಖೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಉಮಾಶಂಕರ ದೀಕ್ಷಿತ್ ಅವರು ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.</p>.<p>ಇಂಥ ಅಕೃತ್ಯವನ್ನೆಸಗಿದವರ ವಿರುದ್ಧ ಆಪಾದನೆಗಳು ರುಜುವಾತಾದಲ್ಲಿ ಉಗ್ರ ಕ್ರಮ ಕೈಗೊಳ್ಳುವುದಾಗಿಯೂ ಸಚಿವರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸದಸ್ಯರಿಗೆ ಆಶ್ವಾಸನೆ ನೀಡಿದರು.</p>.<p>ಔಷಧಗಳಲ್ಲಿ ಕಲಬೆರಕೆ: ಉಗ್ರ ಕ್ರಮಕ್ಕೆ ರಾಜ್ಯಗಳಿಗೆ ಆದೇಶ</p>.<p>ನವದೆಹಲಿ, ಏ. 18– ಔಷಧ ಕಲಬೆರಕೆ ಅಪರಾಧ ಎಸಗುವವರಿಗೆ ಸಾಧ್ಯವಾದಷ್ಟೂ ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಕರಣ್ ಸಿಂಗ್ ಅವರು ರಾಜ್ಯಗಳ ಆರೋಗ್ಯ ಸಚಿವರಿಗೆ ಬರೆದಿರುವ ಒಂದು ಪತ್ರದಲ್ಲಿ ಕರೆ ಕೊಟ್ಟಿದ್ದಾರೆ.</p>.<p>ಔಷಧಿ ಮತ್ತು ಶೃಂಗಾರ ವಸ್ತುಗಳಿಗೆ ಸಂಬಂಧಿಸಿದ ಕಾನೂನನ್ನು ಸೂಕ್ತವಾಗಿ ತಿದ್ದುಪಡಿ ಮಾಡಲೂ ಕ್ರಮ ತೆಗೆದುಕೊಳ್ಳಲಾ ಗುತ್ತಿದೆ ಎಂದು ಇಂದು ಇಲ್ಲಿ ಪ್ರಕಟಿಸಿದ ಕರಣ್ ಸಿಂಗ್ರ ಪತ್ರದಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>