<p><strong>ಷರತ್ತಿಲ್ಲದ ಮಾತುಕತೆಗೆ ರಾಷ್ಟ್ರಪತಿ ಗಿರಿ ಬೆಂಬಲ; ವೇತನ ತಡೆಗೆ ವಿರೋಧ</strong></p>.<p>ನವದೆಹಲಿ, ಮೇ 15– ರೈಲ್ವೆ ಮುಷ್ಕರ ಅಂತ್ಯ ಕುರಿತು ಉಭಯ ಪಕ್ಷಗಳೂ ಯಾವುದೇ ಪೂರ್ವಭಾವಿ ಷರತ್ತು ಹಾಕದೇ ಮಾತುಕತೆಗಳನ್ನು ಪುನರಾರಂಭಿಸುವುದಕ್ಕೆ ರಾಷ್ಟ್ರಪತಿ ಗಿರಿ ಅವರು ಬೆಂಬಲ ಸೂಚಿಸಿದ್ದಾರೆ.</p>.<p>ಪ್ರಧಾನಿ ಇಂದಿರಾಗಾಂಧಿ ಅವರ ಜೊತೆ ರೈಲ್ವೆ ಮುಷ್ಕರದಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಇಂದು ಚರ್ಚಿಸಿದ ರಾಷ್ಟ್ರಪತಿ ವಿ.ವಿ. ಗಿರಿ ಅವರು ಯಾವುದೇ ಕಹಿ ಭಾವನೆ ನೌಕರರಲ್ಲಿ ಉಳಿಯದಂತೆ ವಿವಾದ ಇತ್ಯರ್ಥಗೊಳಿಸಬೇಕಾದ ಅಗತ್ಯವನ್ನು ಒತ್ತಿಹೇಳಿದರು ಎನ್ನಲಾಗಿದೆ.</p>.<p>ವೇತನ ನೀಡಿಕೆ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಕಳೆದ ತಿಂಗಳ ವೇತನ ನೀಡಿಕೆಯನ್ನು ಮುಂದೂಡಿದ್ದು ತಪ್ಪು ಎಂದು ಗಿರಿ ಅವರು ಸ್ಪಷ್ಟವಾಗಿ ಹೇಳಿದರು.</p>.<p>ಪ್ರಧಾನಿ ಇಂದಿರಾಗಾಂಧಿ, ಕೇಂದ್ರ ಸಚಿವರಾದ ಜಗಜೀವನರಾಂ ಹಾಗೂ ಫಕ್ರುದ್ದೀನ್ ಅಲಿ ಅಹಮದ್ ಅವರು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಚರ್ಚಿಸಿದರು.</p>.<p><strong>ಭಾರತ ಬಂದ್ ಭಾಗಶಃ ಯಶಸ್ವಿ: ಮುಂಬೈ, ಮದ್ರಾಸ್ ಜೀವನ ಅಸ್ತವ್ಯಸ್ತ</strong></p>.<p>ನವದೆಹಲಿ, ಮೇ 15– ವಿರೋಧ ಪಕ್ಷಗಳು ಮತ್ತು ವಿವಿಧ ಕೇಂದ್ರ ಕಾರ್ಮಿಕ ಸಂಘಗಳು– ಐಎನ್ಟಿಯುಸಿ ಬಿಟ್ಟು –ಕರೆ ನೀಡಿದ್ದ ಭಾರತ್ ಬಂದ್ ಇಂದು ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತಾದರೂ ಇತರ ರಾಜ್ಯಗಳಲ್ಲಿ ಹೆಚ್ಚು ಪರಿಣಾಮ ಬೀರಲಿಲ್ಲ. ಒಂದು ದಿನದ ಈ ಬಂದ್ ಭಾಗಶಃ ಯಶಸ್ವಿಯಾಯಿತಷ್ಟೇ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಷರತ್ತಿಲ್ಲದ ಮಾತುಕತೆಗೆ ರಾಷ್ಟ್ರಪತಿ ಗಿರಿ ಬೆಂಬಲ; ವೇತನ ತಡೆಗೆ ವಿರೋಧ</strong></p>.<p>ನವದೆಹಲಿ, ಮೇ 15– ರೈಲ್ವೆ ಮುಷ್ಕರ ಅಂತ್ಯ ಕುರಿತು ಉಭಯ ಪಕ್ಷಗಳೂ ಯಾವುದೇ ಪೂರ್ವಭಾವಿ ಷರತ್ತು ಹಾಕದೇ ಮಾತುಕತೆಗಳನ್ನು ಪುನರಾರಂಭಿಸುವುದಕ್ಕೆ ರಾಷ್ಟ್ರಪತಿ ಗಿರಿ ಅವರು ಬೆಂಬಲ ಸೂಚಿಸಿದ್ದಾರೆ.</p>.<p>ಪ್ರಧಾನಿ ಇಂದಿರಾಗಾಂಧಿ ಅವರ ಜೊತೆ ರೈಲ್ವೆ ಮುಷ್ಕರದಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಇಂದು ಚರ್ಚಿಸಿದ ರಾಷ್ಟ್ರಪತಿ ವಿ.ವಿ. ಗಿರಿ ಅವರು ಯಾವುದೇ ಕಹಿ ಭಾವನೆ ನೌಕರರಲ್ಲಿ ಉಳಿಯದಂತೆ ವಿವಾದ ಇತ್ಯರ್ಥಗೊಳಿಸಬೇಕಾದ ಅಗತ್ಯವನ್ನು ಒತ್ತಿಹೇಳಿದರು ಎನ್ನಲಾಗಿದೆ.</p>.<p>ವೇತನ ನೀಡಿಕೆ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಕಳೆದ ತಿಂಗಳ ವೇತನ ನೀಡಿಕೆಯನ್ನು ಮುಂದೂಡಿದ್ದು ತಪ್ಪು ಎಂದು ಗಿರಿ ಅವರು ಸ್ಪಷ್ಟವಾಗಿ ಹೇಳಿದರು.</p>.<p>ಪ್ರಧಾನಿ ಇಂದಿರಾಗಾಂಧಿ, ಕೇಂದ್ರ ಸಚಿವರಾದ ಜಗಜೀವನರಾಂ ಹಾಗೂ ಫಕ್ರುದ್ದೀನ್ ಅಲಿ ಅಹಮದ್ ಅವರು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಚರ್ಚಿಸಿದರು.</p>.<p><strong>ಭಾರತ ಬಂದ್ ಭಾಗಶಃ ಯಶಸ್ವಿ: ಮುಂಬೈ, ಮದ್ರಾಸ್ ಜೀವನ ಅಸ್ತವ್ಯಸ್ತ</strong></p>.<p>ನವದೆಹಲಿ, ಮೇ 15– ವಿರೋಧ ಪಕ್ಷಗಳು ಮತ್ತು ವಿವಿಧ ಕೇಂದ್ರ ಕಾರ್ಮಿಕ ಸಂಘಗಳು– ಐಎನ್ಟಿಯುಸಿ ಬಿಟ್ಟು –ಕರೆ ನೀಡಿದ್ದ ಭಾರತ್ ಬಂದ್ ಇಂದು ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತಾದರೂ ಇತರ ರಾಜ್ಯಗಳಲ್ಲಿ ಹೆಚ್ಚು ಪರಿಣಾಮ ಬೀರಲಿಲ್ಲ. ಒಂದು ದಿನದ ಈ ಬಂದ್ ಭಾಗಶಃ ಯಶಸ್ವಿಯಾಯಿತಷ್ಟೇ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>