<p><strong>ಒಡೆದ ನಂತರವೂ ಕಾಂಗ್ರೆಸ್ ಜಡತ್ವ ಹೋಗಲಿಲ್ಲ</strong></p><p>ನವದೆಹಲಿ, ಜ. 4– ಕಾಂಗ್ರೆಸ್ 1969ರಲ್ಲಿ ಒಡೆದು ಎರಡು ಹೋಳಾಯಿತು. ಆನಂತರ ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಗೆ ನಿರಾಶೆಯುಂಟು ಮಾಡಿದೆ.</p><p>ಉಮಾ ವಾಸುದೇವ್ ಅವರಿಗೆ ಕಳೆದ ವರ್ಷ ಸೆ. 25ರಂದು ನೀಡಿದ ಸಂದರ್ಶನದಲ್ಲಿ ಇಂದಿರಾ ಗಾಂಧಿಯವರು ಈ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಶನವನ್ನು ಉಮಾ ವಾಸುದೇವ್ ಅವರು ರಚಿಸಿರುವ ಇಂದಿರಾ ಗಾಂಧಿಯವರ ಜೀವನಚರಿತ್ರೆ ಪುಸ್ತಕದ ಕೊನೆಯ ಅಧ್ಯಾಯವಾಗಿ<br>ಪ್ರಕಟಿಸಲಾಗಿದೆ.</p><p>ಕಾಂಗ್ರೆಸ್ ಪಕ್ಷ ಇನ್ನೂ ಸತ್ವರಹಿತವಾಗಿಯೇ ಕಾರ್ಯನಿರ್ವಹಿಸುತ್ತಿದೆ, ಅದರ ಜಡತ್ವ ಹೋಗಿಲ್ಲ ಎಂದು ಅವರು ತಿಳಿಸಿದ್ದಾರೆ.</p><p><strong>ಸಣ್ಣ ಪ್ರಮಾಣದ ಉದ್ಯಮಕ್ಕೆ ಪರಿಣಾಮಕಾರಿ ನೆರವು ನೀಡುವ ಕ್ರಮಕ್ಕೆ ಹೊಸ ಸ್ವರೂಪ</strong></p><p>ಬೆಂಗಳೂರು, ಜ. 4– ರಾಜ್ಯದ ಸಣ್ಣ ಪ್ರಮಾಣದ ಉದ್ಯಮಗಳಿಗೆ ಹೆಚ್ಚು<br>ಪರಿಣಾಮಕಾರಿಯಾಗಿ ನೆರವಾಗುವ ರೀತಿಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಕಾರ್ಪೊರೇಷನ್ನಿನ ಹೊಣೆಗಾರಿಕೆ ಮತ್ತು ಕಾರ್ಯಕ್ರಮಗಳನ್ನು ಪುನರ್ ರೂಪಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒಡೆದ ನಂತರವೂ ಕಾಂಗ್ರೆಸ್ ಜಡತ್ವ ಹೋಗಲಿಲ್ಲ</strong></p><p>ನವದೆಹಲಿ, ಜ. 4– ಕಾಂಗ್ರೆಸ್ 1969ರಲ್ಲಿ ಒಡೆದು ಎರಡು ಹೋಳಾಯಿತು. ಆನಂತರ ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಗೆ ನಿರಾಶೆಯುಂಟು ಮಾಡಿದೆ.</p><p>ಉಮಾ ವಾಸುದೇವ್ ಅವರಿಗೆ ಕಳೆದ ವರ್ಷ ಸೆ. 25ರಂದು ನೀಡಿದ ಸಂದರ್ಶನದಲ್ಲಿ ಇಂದಿರಾ ಗಾಂಧಿಯವರು ಈ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಶನವನ್ನು ಉಮಾ ವಾಸುದೇವ್ ಅವರು ರಚಿಸಿರುವ ಇಂದಿರಾ ಗಾಂಧಿಯವರ ಜೀವನಚರಿತ್ರೆ ಪುಸ್ತಕದ ಕೊನೆಯ ಅಧ್ಯಾಯವಾಗಿ<br>ಪ್ರಕಟಿಸಲಾಗಿದೆ.</p><p>ಕಾಂಗ್ರೆಸ್ ಪಕ್ಷ ಇನ್ನೂ ಸತ್ವರಹಿತವಾಗಿಯೇ ಕಾರ್ಯನಿರ್ವಹಿಸುತ್ತಿದೆ, ಅದರ ಜಡತ್ವ ಹೋಗಿಲ್ಲ ಎಂದು ಅವರು ತಿಳಿಸಿದ್ದಾರೆ.</p><p><strong>ಸಣ್ಣ ಪ್ರಮಾಣದ ಉದ್ಯಮಕ್ಕೆ ಪರಿಣಾಮಕಾರಿ ನೆರವು ನೀಡುವ ಕ್ರಮಕ್ಕೆ ಹೊಸ ಸ್ವರೂಪ</strong></p><p>ಬೆಂಗಳೂರು, ಜ. 4– ರಾಜ್ಯದ ಸಣ್ಣ ಪ್ರಮಾಣದ ಉದ್ಯಮಗಳಿಗೆ ಹೆಚ್ಚು<br>ಪರಿಣಾಮಕಾರಿಯಾಗಿ ನೆರವಾಗುವ ರೀತಿಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಕಾರ್ಪೊರೇಷನ್ನಿನ ಹೊಣೆಗಾರಿಕೆ ಮತ್ತು ಕಾರ್ಯಕ್ರಮಗಳನ್ನು ಪುನರ್ ರೂಪಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>