<p><strong>ಮತ್ತೆ ಆರ್ಥಿಕ ಹಿಂಜರಿತ: ಉಕ್ಕು ನಿಯಂತ್ರಣ ರದ್ದಾಗುವ ಪರಿಸ್ಥಿತಿ</strong></p><p>ಬೆಂಗಳೂರು, ಅ. 21– ಕೇವಲ ಒಂದು ದಶಕದ ಹಿಂದೆ ದೇಶವನ್ನು ಕಾಡಿದ ಆರ್ಥಿಕ ಹಿಂಜರಿತದ ಸಮಸ್ಯೆ ಮತ್ತೆ ಸದ್ಯದಲ್ಲೇ ಮರುಕಳಿಸುವ ಭೀತಿ ಇದೆ. ಅದರ ಮುನ್ಸೂಚನೆ ಈಗಾಗಲೇ ವ್ಯಕ್ತವಾಗಿದ್ದು, ಅಧಿಕ ಬೇಡಿಕೆ ಇದ್ದ ಉಕ್ಕನ್ನು ಅನೇಕ ಸಂಸ್ಥೆಗಳು ಸಾಗಿಸದೆ ಗೋಡೌನ್ಗಳಲ್ಲಿ ಅದು ಬೀಳಬೇಕಾದ ಪರಿಸ್ಥಿತಿ ಬಂದಿದೆ.</p><p>ಈ ವಿಚಾರವನ್ನು ಭಾರತದ ಕಬ್ಬಿಣ ಮತ್ತು ಉಕ್ಕು ನಿಯಂತ್ರಣಾಧಿಕಾರಿ ಘೋಷ್ ಅವರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಫೆಡರೇಷನ್ನಿನ ಆಶ್ರಯದಲ್ಲಿ ಇಂದು ನಡೆದ ಹೊಸ ಉಕ್ಕು ನೀತಿಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ತಿಳಿಸಿದರು.</p><p>1964– 65ರಲ್ಲಿ ಇದ್ದಂತೆ, ಉಕ್ಕಿನ ಮೇಲಿನ ನಿಯಂತ್ರಣವನ್ನು ರದ್ದು ಮಾಡುವ ಪ್ರಸಂಗ ಬರಬಹುದೆಂದು ಹೇಳಿದರು.</p><p><strong>ಭದ್ರಾವತಿ ಉಕ್ಕು ಕಾರ್ಖಾನೆಗೆ 2 ಕೋಟಿ ರೂ. ಲಾಭ</strong></p><p>ಬೆಂಗಳೂರು, ಅ. 21– ರಾಜ್ಯ ಸರ್ಕಾರದ ಮಾಲೀಕತ್ವದ ಭದ್ರಾವತಿ ಉಕ್ಕಿನ ಕಾರ್ಖಾನೆ ಈ ವರ್ಷ ಎರಡು ಕೋಟಿ ರೂ. ಲಾಭ ಗಳಿಸಿದೆ ಎಂದು ಕೈಗಾರಿಕೆ ಸಚಿವ ಎಸ್.ಎಂ.ಕೃಷ್ಣ ಅವರು ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮತ್ತೆ ಆರ್ಥಿಕ ಹಿಂಜರಿತ: ಉಕ್ಕು ನಿಯಂತ್ರಣ ರದ್ದಾಗುವ ಪರಿಸ್ಥಿತಿ</strong></p><p>ಬೆಂಗಳೂರು, ಅ. 21– ಕೇವಲ ಒಂದು ದಶಕದ ಹಿಂದೆ ದೇಶವನ್ನು ಕಾಡಿದ ಆರ್ಥಿಕ ಹಿಂಜರಿತದ ಸಮಸ್ಯೆ ಮತ್ತೆ ಸದ್ಯದಲ್ಲೇ ಮರುಕಳಿಸುವ ಭೀತಿ ಇದೆ. ಅದರ ಮುನ್ಸೂಚನೆ ಈಗಾಗಲೇ ವ್ಯಕ್ತವಾಗಿದ್ದು, ಅಧಿಕ ಬೇಡಿಕೆ ಇದ್ದ ಉಕ್ಕನ್ನು ಅನೇಕ ಸಂಸ್ಥೆಗಳು ಸಾಗಿಸದೆ ಗೋಡೌನ್ಗಳಲ್ಲಿ ಅದು ಬೀಳಬೇಕಾದ ಪರಿಸ್ಥಿತಿ ಬಂದಿದೆ.</p><p>ಈ ವಿಚಾರವನ್ನು ಭಾರತದ ಕಬ್ಬಿಣ ಮತ್ತು ಉಕ್ಕು ನಿಯಂತ್ರಣಾಧಿಕಾರಿ ಘೋಷ್ ಅವರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಫೆಡರೇಷನ್ನಿನ ಆಶ್ರಯದಲ್ಲಿ ಇಂದು ನಡೆದ ಹೊಸ ಉಕ್ಕು ನೀತಿಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ತಿಳಿಸಿದರು.</p><p>1964– 65ರಲ್ಲಿ ಇದ್ದಂತೆ, ಉಕ್ಕಿನ ಮೇಲಿನ ನಿಯಂತ್ರಣವನ್ನು ರದ್ದು ಮಾಡುವ ಪ್ರಸಂಗ ಬರಬಹುದೆಂದು ಹೇಳಿದರು.</p><p><strong>ಭದ್ರಾವತಿ ಉಕ್ಕು ಕಾರ್ಖಾನೆಗೆ 2 ಕೋಟಿ ರೂ. ಲಾಭ</strong></p><p>ಬೆಂಗಳೂರು, ಅ. 21– ರಾಜ್ಯ ಸರ್ಕಾರದ ಮಾಲೀಕತ್ವದ ಭದ್ರಾವತಿ ಉಕ್ಕಿನ ಕಾರ್ಖಾನೆ ಈ ವರ್ಷ ಎರಡು ಕೋಟಿ ರೂ. ಲಾಭ ಗಳಿಸಿದೆ ಎಂದು ಕೈಗಾರಿಕೆ ಸಚಿವ ಎಸ್.ಎಂ.ಕೃಷ್ಣ ಅವರು ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>