ಸಿ ತಂಡಕ್ಕೆ ಋತುರಾಜ್ ಗಾಯಕವಾಡ, ಎ ತಂಡಕ್ಕೆ ಮಯಂಕ್ ಅಗರವಾಲ್, ಬಿ ತಂಡಕ್ಕೆ ಅಭಿಮನ್ಯು ಈಶ್ವರನ್ ಮತ್ತು ಡಿ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕರಾಗಿದ್ದಾರೆ. ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲೂ ಅಯ್ಯರ್ ವೈಫಲ್ಯ ಅನುಭವಿಸಿದ್ದು ಅಪಾರ ಒತ್ತಡದಲ್ಲಿದ್ದಾರೆ. ಅದರಿಂದಾಗಿಯೇ ಅವರನ್ನು ಬಾಂಗ್ಲಾ ಎದುರಿನ ಟೆಸ್ಟ್ ಸರಣಿಗೆ ಪರಿಗಣಿಸಲಿಲ್ಲ. ಅವರೊಂದಿಗೆ ಸಂಜು ಕೂಡ ಇದ್ದಾರೆ.