ಮೇಲ್ನೋಟಕ್ಕೆ ದಾಯಾದಿ ಕಲಹ, ಆಸ್ತಿ ಜಗಳ, ಮತ್ಸರ, ಅಧಿಕಾರ ದಾಹದ ಕಥೆ ಎನಿಸಿದರೂ ಪ್ರತಿ ಪಾತ್ರವೂ ನೀಡುವ ಹೊಳಹುಗಳು ಅನನ್ಯ. ಹಾಗಾಗಿ ಸರ್ವ ಕಾಲಕ್ಕೂ ‘ಮಹಾಭಾರತ’ದ ಮನನ ಇಷ್ಟವೆನಿಸುತ್ತದೆ. ಇಂಥ ಮಹಾಕಾವ್ಯವನ್ನು ಒಂದು ದಿಕ್ಕಿನಿಂದ ಕಂಡರೆ ಕೇಂದ್ರಬಿಂದು ಎನಿಸುವ ದ್ರೌಪದಿ ಪಾತ್ರದ ಹುಟ್ಟು, ಅವಳ ರೋಷಾಗ್ನಿಯ ಭಾವ, ಅವಮಾನ, ಸಂಕಟ ಎಲ್ಲವನ್ನೂ ಹಿಡಿದಿಡುವ ಪ್ರಯತ್ನವಾಗಿ ಈ ಪುಸ್ತಕ ಕಾಣುತ್ತದೆ.