<p>ವಯೋಲಿನ್ ವಾದನ ಚತುರ ವಿದ್ವಾನ್ ಬಸವನಗುಡಿ ಜಿ.ನಾಗರಾಜ್ ಅವರ 80ನೇ ಜನ್ಮದಿನೋತ್ಸವ-ಸಂಸ್ಮರಣೆ ಪ್ರಯುಕ್ತ ವಿಶೇಷ ಸಂಗೀತ ಕಛೇರಿಯನ್ನು ಜುಲೈ 14ರಂದು ಭಾನುವಾರ ಆಯೋಜಿಸಲಾಗಿದೆ.</p><p>ಆವಾಹನ ಕಲ್ಚರಲ್ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿದ್ದು, ವಿದ್ವಾನ್ ಬಿ.ಯು. ಗಣೇಶ್ ಪ್ರಸಾದ್ ಮತ್ತು ವಿದ್ವಾನ್ ಬಿ.ಕೆ.ರಘು ಅವರಿಂದ ದ್ವಂದ್ವ ವಯೋಲಿನ್ ವಾದನವಿರಲಿದೆ. ವಿದ್ವಾನ್ ಅಮೃತ್ ಎನ್. ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಜಿ.ಓಂಕಾರ್ ಘಟಂನಲ್ಲಿ ಸಹಕರಿಸುವರು.</p><p>ಬಳಿಕ ಯದುಗಿರಿ ಮಠದ ಯತಿರಾಜ ನಾರಾಯಣ ರಾಮಾನುಜ ಜೀಯಾರ್ ಸ್ವಾಮೀಜಿ ಹಾಗೂ ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.</p><p>80ನೇ ವರ್ಷಕ್ಕೆ ಕಾಲಿರಿಸಿರುವ ಮೃದಂಗ ವಿದ್ವಾನ್ ಎಂ.ವಾಸುದೇವ ರಾವ್ ಹಾಗೂ ಸಂಗೀತ ಕ್ಷೇತ್ರದಲ್ಲಿ 80 ವರ್ಷ ಸೇವೆ ಸಲ್ಲಿಸಿರುವ ವಿದ್ವಾನ್ ಎ.ವಿ.ಆನಂದ್ ಅವರಿಗೆ ಗುರುವಂದನೆ ಹಮ್ಮಿಕೊಳ್ಳಲಾಗಿದೆ. ಸಂಗೀತಾಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ಟ್ರಸ್ಟ್ನ ಅಮೃತ್ ಎನ್. ಮತ್ತು ಸಂಧ್ಯಾ ತಿಳಿಸಿದ್ದಾರೆ</p><p><strong>ಕಾರ್ಯಕ್ರಮ ನಡೆಯುವ ಸ್ಥಳ:</strong> ಕನ್ನಡ ಸಾಹಿತ್ಯ ಪರಿಷತ್, ಬೆಳಿಗ್ಗೆ 9.45ರಿಂದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಯೋಲಿನ್ ವಾದನ ಚತುರ ವಿದ್ವಾನ್ ಬಸವನಗುಡಿ ಜಿ.ನಾಗರಾಜ್ ಅವರ 80ನೇ ಜನ್ಮದಿನೋತ್ಸವ-ಸಂಸ್ಮರಣೆ ಪ್ರಯುಕ್ತ ವಿಶೇಷ ಸಂಗೀತ ಕಛೇರಿಯನ್ನು ಜುಲೈ 14ರಂದು ಭಾನುವಾರ ಆಯೋಜಿಸಲಾಗಿದೆ.</p><p>ಆವಾಹನ ಕಲ್ಚರಲ್ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿದ್ದು, ವಿದ್ವಾನ್ ಬಿ.ಯು. ಗಣೇಶ್ ಪ್ರಸಾದ್ ಮತ್ತು ವಿದ್ವಾನ್ ಬಿ.ಕೆ.ರಘು ಅವರಿಂದ ದ್ವಂದ್ವ ವಯೋಲಿನ್ ವಾದನವಿರಲಿದೆ. ವಿದ್ವಾನ್ ಅಮೃತ್ ಎನ್. ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಜಿ.ಓಂಕಾರ್ ಘಟಂನಲ್ಲಿ ಸಹಕರಿಸುವರು.</p><p>ಬಳಿಕ ಯದುಗಿರಿ ಮಠದ ಯತಿರಾಜ ನಾರಾಯಣ ರಾಮಾನುಜ ಜೀಯಾರ್ ಸ್ವಾಮೀಜಿ ಹಾಗೂ ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.</p><p>80ನೇ ವರ್ಷಕ್ಕೆ ಕಾಲಿರಿಸಿರುವ ಮೃದಂಗ ವಿದ್ವಾನ್ ಎಂ.ವಾಸುದೇವ ರಾವ್ ಹಾಗೂ ಸಂಗೀತ ಕ್ಷೇತ್ರದಲ್ಲಿ 80 ವರ್ಷ ಸೇವೆ ಸಲ್ಲಿಸಿರುವ ವಿದ್ವಾನ್ ಎ.ವಿ.ಆನಂದ್ ಅವರಿಗೆ ಗುರುವಂದನೆ ಹಮ್ಮಿಕೊಳ್ಳಲಾಗಿದೆ. ಸಂಗೀತಾಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ಟ್ರಸ್ಟ್ನ ಅಮೃತ್ ಎನ್. ಮತ್ತು ಸಂಧ್ಯಾ ತಿಳಿಸಿದ್ದಾರೆ</p><p><strong>ಕಾರ್ಯಕ್ರಮ ನಡೆಯುವ ಸ್ಥಳ:</strong> ಕನ್ನಡ ಸಾಹಿತ್ಯ ಪರಿಷತ್, ಬೆಳಿಗ್ಗೆ 9.45ರಿಂದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>