<p><strong>ರಾಂಪುರ:</strong> ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯುಸೆಕ್ ನೀರು ಹರಿಬಿಡುತ್ತಿರುವುದರಿಂದ ಜಲಾಶಯದ ಕೆಳಗಿನ ಭಾಗದ ನದಿ ತೀರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಲು ಪ್ರಾರಂಭಿಸಿದೆ.</p>.<p>ಗುರುವಾರ ಸಂಜೆ ಮ್ಯಾಗೇರಿ, ಮಂಕಣಿ, ಬೊಮ್ಮಣಗಿ, ಡೊಮನಾಳ ಗ್ರಾಮಗಳತ್ತ ನೀರು ಹರಿಯಲು ಪ್ರಾರಂಭಿಸಿದ್ದು, ಜಮೀನುಗಳಲ್ಲಿರುವ ಕಬ್ಬು, ತೊಗರಿ, ಹೆಸರು, ಹತ್ತಿ, ಸೂರ್ಯಕಾಂತಿ ಬೆಳೆಗಳಲ್ಲಿ ನೀರು ನಿಂತಿದೆ. ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಲ್ಲಿ ಹಿನ್ನೀರು ಇನ್ನಷ್ಟು ವ್ಯಾಪಿಸಿ ಈ ಗ್ರಾಮಗಳತ್ತ ನೀರು ನುಗ್ಗುವ ಸಂಭವವಿದೆ.</p>.<p>ರಾಂಪುರ ಉಪ ತಹಶೀಲ್ದಾರ್ ನೀಲೇಶ ಕರಡಿ, ಗ್ರಾಮ ಲೆಕ್ಕಾಧಿಕಾರಿ, ನೋಡಲ್ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಪಿಡಿಒ ಶುಕ್ರವಾರ ಬೆಳಗಿನಿಂದಲೂ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನದಿಗಳತ್ತ ಜನರು ತೆರಳದಿರುವಂತೆ ಪ್ರತಿ ಗ್ರಾಮದಲ್ಲೂ ಡಂಗೂರ ಸಾರಿಸಿದ್ದಾರೆ.</p>.<p>ಆಲಮಟ್ಟಿ ಜಲಾಶಯದಿಂದ ನೀರು ಹೊರಬಿಡುವ ಪ್ರಮಾಣ ಹೆಚ್ಚಾದಲ್ಲಿ ಮ್ಯಾಗೇರಿ, ಬೊಮ್ಮಣಗಿ, ಡೊಮನಾಳ, ಮಂಕಣಿ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಪುರ:</strong> ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯುಸೆಕ್ ನೀರು ಹರಿಬಿಡುತ್ತಿರುವುದರಿಂದ ಜಲಾಶಯದ ಕೆಳಗಿನ ಭಾಗದ ನದಿ ತೀರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಲು ಪ್ರಾರಂಭಿಸಿದೆ.</p>.<p>ಗುರುವಾರ ಸಂಜೆ ಮ್ಯಾಗೇರಿ, ಮಂಕಣಿ, ಬೊಮ್ಮಣಗಿ, ಡೊಮನಾಳ ಗ್ರಾಮಗಳತ್ತ ನೀರು ಹರಿಯಲು ಪ್ರಾರಂಭಿಸಿದ್ದು, ಜಮೀನುಗಳಲ್ಲಿರುವ ಕಬ್ಬು, ತೊಗರಿ, ಹೆಸರು, ಹತ್ತಿ, ಸೂರ್ಯಕಾಂತಿ ಬೆಳೆಗಳಲ್ಲಿ ನೀರು ನಿಂತಿದೆ. ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಲ್ಲಿ ಹಿನ್ನೀರು ಇನ್ನಷ್ಟು ವ್ಯಾಪಿಸಿ ಈ ಗ್ರಾಮಗಳತ್ತ ನೀರು ನುಗ್ಗುವ ಸಂಭವವಿದೆ.</p>.<p>ರಾಂಪುರ ಉಪ ತಹಶೀಲ್ದಾರ್ ನೀಲೇಶ ಕರಡಿ, ಗ್ರಾಮ ಲೆಕ್ಕಾಧಿಕಾರಿ, ನೋಡಲ್ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಪಿಡಿಒ ಶುಕ್ರವಾರ ಬೆಳಗಿನಿಂದಲೂ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನದಿಗಳತ್ತ ಜನರು ತೆರಳದಿರುವಂತೆ ಪ್ರತಿ ಗ್ರಾಮದಲ್ಲೂ ಡಂಗೂರ ಸಾರಿಸಿದ್ದಾರೆ.</p>.<p>ಆಲಮಟ್ಟಿ ಜಲಾಶಯದಿಂದ ನೀರು ಹೊರಬಿಡುವ ಪ್ರಮಾಣ ಹೆಚ್ಚಾದಲ್ಲಿ ಮ್ಯಾಗೇರಿ, ಬೊಮ್ಮಣಗಿ, ಡೊಮನಾಳ, ಮಂಕಣಿ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>