<p><strong>ಬೀಳಗಿ</strong>: ದೇವರ ವಿಗ್ರಹಗಳನ್ನೇ ಕದಿಯುತ್ತಿದ್ದ ಕಳ್ಳನನ್ನು ಬೀಳಗಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.</p>.<p>ಬೀಳಗಿ ಪೊಲೀಸರಿಂದ ನಡೆದ ಕಾರ್ಯಾಚರಣೆಯಲ್ಲಿ ಬಂಧಿತನಿಂದ ₹ 6.20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ. ಶಂಕರ ಬಾಳಾಸೊ ಗುರುವ (45) ಬಂಧಿತ ಆರೋಪಿ. ಈತ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬುಡ್ ಗ್ರಾಮದವನು ಎಂದು ತಿಳಿದು ಬಂದಿದೆ.</p>.<p>ಇತ್ತೀಚೆಗೆ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ದುರ್ಗಾದೇವಿಯ ದೇವಸ್ಥಾನದ ಗರ್ಭಗುಡಿಗೆ ಹಾಕಿದ ಕೀಲಿ ಮುರಿದು ದೇವಿಯ ಮೈ ಮೇಲೆ ಹಾಕಿದ್ದ ₹ 5,62,500 ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹ 57,500 ಮೌಲ್ಯದ 1 ಕೆ.ಜಿಗೂ ಹೆಚ್ಚಿನ ತೂಕದ ಬೆಳ್ಳಿಯ ಆಭರಣಗಳು, ಬಾಗಲಕೋಟೆ ತಾಲ್ಲೂಕಿನ ಹಳೆ ಸಿಂದಗಿಯಲ್ಲಿ₹ 70 ಸಾವಿರ ಬೆಲೆ ಬಾಳುವ ಬೆಳ್ಳಿಯ ಆಂಜನೇಯ ಮೂರ್ತಿಯನ್ನ ಕಳ್ಳತನಮಾಡಿದ್ದಾನೆ. </p>.<p>ಬಾಗಲಕೋಟೆ ಎಸ್.ಪಿ. ಜಯಪ್ರಕಾಶ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಪಂಪನಗೌಡ ಮಾರ್ಗದರ್ಶನದ ಮೇರೆಗೆ ಬೀಳಗಿ ಸಿಪಿಐ ಕೆ.ಟಿ. ಶೋಭಾ, ಪಿಎಸ್ಐ ಮಂಜುನಾಥ ತಿರಕನ್ನವರ ಹಾಗೂ ಪ್ರೀತಮ ನಾಯಕ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದಾಗ, ಕಾತರಕಿ-ಚಿಕ್ಕಾಲಗುಡಿಯ ಸರಹದ್ದಿನಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಆರೋಪಿಯನ್ನು ಎಎಸ್ಐ ಸಿದ್ದು ಹೊಕ್ರಾಣಿ, ಕಾನ್ಸ್ಟೆಬಲ್ ಬಾಬು ಹುಡೇದ ಠಾಣೆಗೆ ಕರೆತಂದು ವಿಚಾರಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.</p>.<p>ರವಿ ಶಿಂಧೆ, ಎಲ್.ಎಚ್. ಬಾಳಾಗೊಳ, ವಿ.ವಿ.ಕೊಲಂಬಿ, ಆನಂದ್ ತೇಲಿ, ಚನ್ನಪ್ಪ ತಳವಾರ, ಪುರು ಲಮಾಣಿ, ರಮೇಶ ನಾಯಕ, ರಮೇಶ ಹೊಸಮನಿ, ಮುತ್ತು ಹಾದಿಮನಿ ಕಳ್ಳನ ಬಂಧನದ ವೇಳೆ ಕಾರ್ಯನಿರ್ವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಳಗಿ</strong>: ದೇವರ ವಿಗ್ರಹಗಳನ್ನೇ ಕದಿಯುತ್ತಿದ್ದ ಕಳ್ಳನನ್ನು ಬೀಳಗಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.</p>.<p>ಬೀಳಗಿ ಪೊಲೀಸರಿಂದ ನಡೆದ ಕಾರ್ಯಾಚರಣೆಯಲ್ಲಿ ಬಂಧಿತನಿಂದ ₹ 6.20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ. ಶಂಕರ ಬಾಳಾಸೊ ಗುರುವ (45) ಬಂಧಿತ ಆರೋಪಿ. ಈತ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬುಡ್ ಗ್ರಾಮದವನು ಎಂದು ತಿಳಿದು ಬಂದಿದೆ.</p>.<p>ಇತ್ತೀಚೆಗೆ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ದುರ್ಗಾದೇವಿಯ ದೇವಸ್ಥಾನದ ಗರ್ಭಗುಡಿಗೆ ಹಾಕಿದ ಕೀಲಿ ಮುರಿದು ದೇವಿಯ ಮೈ ಮೇಲೆ ಹಾಕಿದ್ದ ₹ 5,62,500 ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹ 57,500 ಮೌಲ್ಯದ 1 ಕೆ.ಜಿಗೂ ಹೆಚ್ಚಿನ ತೂಕದ ಬೆಳ್ಳಿಯ ಆಭರಣಗಳು, ಬಾಗಲಕೋಟೆ ತಾಲ್ಲೂಕಿನ ಹಳೆ ಸಿಂದಗಿಯಲ್ಲಿ₹ 70 ಸಾವಿರ ಬೆಲೆ ಬಾಳುವ ಬೆಳ್ಳಿಯ ಆಂಜನೇಯ ಮೂರ್ತಿಯನ್ನ ಕಳ್ಳತನಮಾಡಿದ್ದಾನೆ. </p>.<p>ಬಾಗಲಕೋಟೆ ಎಸ್.ಪಿ. ಜಯಪ್ರಕಾಶ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಪಂಪನಗೌಡ ಮಾರ್ಗದರ್ಶನದ ಮೇರೆಗೆ ಬೀಳಗಿ ಸಿಪಿಐ ಕೆ.ಟಿ. ಶೋಭಾ, ಪಿಎಸ್ಐ ಮಂಜುನಾಥ ತಿರಕನ್ನವರ ಹಾಗೂ ಪ್ರೀತಮ ನಾಯಕ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದಾಗ, ಕಾತರಕಿ-ಚಿಕ್ಕಾಲಗುಡಿಯ ಸರಹದ್ದಿನಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಆರೋಪಿಯನ್ನು ಎಎಸ್ಐ ಸಿದ್ದು ಹೊಕ್ರಾಣಿ, ಕಾನ್ಸ್ಟೆಬಲ್ ಬಾಬು ಹುಡೇದ ಠಾಣೆಗೆ ಕರೆತಂದು ವಿಚಾರಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.</p>.<p>ರವಿ ಶಿಂಧೆ, ಎಲ್.ಎಚ್. ಬಾಳಾಗೊಳ, ವಿ.ವಿ.ಕೊಲಂಬಿ, ಆನಂದ್ ತೇಲಿ, ಚನ್ನಪ್ಪ ತಳವಾರ, ಪುರು ಲಮಾಣಿ, ರಮೇಶ ನಾಯಕ, ರಮೇಶ ಹೊಸಮನಿ, ಮುತ್ತು ಹಾದಿಮನಿ ಕಳ್ಳನ ಬಂಧನದ ವೇಳೆ ಕಾರ್ಯನಿರ್ವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>