ಆರು ಪೆಂಡಿ ಕಬ್ಬಿನವಾಡಿ ಮಾರಾಟದ ಹಣ ಕೇಳಲುಹೋಗಿದ್ದ ಕುಂಚನೂರ ಸರಹದ್ದಿನಲ್ಲಿರುವ ಯಮನಪ್ಪ ನಂದೆಪ್ಪ ಗೋಡೆಕಾರ (46) ಮೇಲೆ ಕುಂಬಾರಹಳ್ಳದ ಕಮಲವ್ವ ಪ್ರಕಾಶ ಛತ್ರಬಾನು, ಶ್ರೀಕಾಂತ ಪರಪ್ಪ ಪಾಟೀಲ, ಮಲ್ಲಿಕಾರ್ಜುನ ಪರಪ್ಪ ಪಾಟೀಲ, ಸದಾಶಿವ ಗುರುಪಾದಪ್ಪ ಕುಲಗೂಡ, ಶ್ರುತಿ ಸದಾಶಿವ ಕುಲಗೂಡ ಅವರು ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದರು ಎಂದು 2021ರ ನವೆಂಬರ್ 24 ರಂದು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್ಐ ವಸಂತ ಬಂಡಗಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಜಿ.ಎಸ್. ಪಾಟೀಲ ವಾದ ಮಂಡಿಸಿದ್ದರು.