<p><strong>ರಬಕವಿ ಬನಹಟ್ಟಿ:</strong> ‘ಜೀವನದಲ್ಲಿ ಗುರಿ ಮುಟ್ಟಬೇಕಾದರೆ ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಮತ್ತು ಸಲಹೆ ಮುಖ್ಯ. ಶ್ರದ್ಧೆ –ಭಕ್ತಿಯಿಂದ ಗುರುವನ್ನು ಆರಾಧಿಸಬೇಕು’ ಎಂದು ತೇರದಾಳ ನಾವಲಗಿಯ ಕಾಡದೇವರ ಗುರು ಗಂಗಾಧರ ಸಂಸ್ಥಾನ ಹಿರೇಮಠದ ಗಂಗಾಧರ ಸ್ವಾಮೀಜಿ ತಿಳಿಸಿದರು.</p>.<p>ಸಮೀಪದ ನಾವಲಗಿ ಗ್ರಾಮದ ಮಠದಲ್ಲಿ ಭಾನುವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಾಯೆಯ ಭವ ಸಾಗರದಿಂದ ಶಿಷ್ಯ ಮತ್ತು ಭಕ್ತರನ್ನು ಹೊರತರುವ ಮತ್ತು ಅವನಿಂದ ಅವಶ್ಯವಿರುವ ಸಾಧನೆ ಮಾಡಿಸಿಕೊಳ್ಳುವ, ಕಠಿಣ ಸಮಯದಲ್ಲಿಹತ್ತಿರದಿಂದ ನಿರಪೇಕ್ಷ ಪ್ರೇಮದಿಂದ ಆಧಾರನೀಡಿ ಕಷ್ಟಗಳಿಂದ ಮುಕ್ತ ಮಾಡುವವರು ಗುರು’ ಎಂದು ತಿಳಿಸಿದರು.</p>.<p>ಇದೇ ಸಂದರ್ಭದಲ್ಲಿ ನಾವಲಗಿಯ ಭಕ್ತರು ಪಾದಪೂಜೆ ನೆರವೇರಿಸಿದರು. ನೂರಾರು ಜನರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ ಬನಹಟ್ಟಿ:</strong> ‘ಜೀವನದಲ್ಲಿ ಗುರಿ ಮುಟ್ಟಬೇಕಾದರೆ ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಮತ್ತು ಸಲಹೆ ಮುಖ್ಯ. ಶ್ರದ್ಧೆ –ಭಕ್ತಿಯಿಂದ ಗುರುವನ್ನು ಆರಾಧಿಸಬೇಕು’ ಎಂದು ತೇರದಾಳ ನಾವಲಗಿಯ ಕಾಡದೇವರ ಗುರು ಗಂಗಾಧರ ಸಂಸ್ಥಾನ ಹಿರೇಮಠದ ಗಂಗಾಧರ ಸ್ವಾಮೀಜಿ ತಿಳಿಸಿದರು.</p>.<p>ಸಮೀಪದ ನಾವಲಗಿ ಗ್ರಾಮದ ಮಠದಲ್ಲಿ ಭಾನುವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಮಾಯೆಯ ಭವ ಸಾಗರದಿಂದ ಶಿಷ್ಯ ಮತ್ತು ಭಕ್ತರನ್ನು ಹೊರತರುವ ಮತ್ತು ಅವನಿಂದ ಅವಶ್ಯವಿರುವ ಸಾಧನೆ ಮಾಡಿಸಿಕೊಳ್ಳುವ, ಕಠಿಣ ಸಮಯದಲ್ಲಿಹತ್ತಿರದಿಂದ ನಿರಪೇಕ್ಷ ಪ್ರೇಮದಿಂದ ಆಧಾರನೀಡಿ ಕಷ್ಟಗಳಿಂದ ಮುಕ್ತ ಮಾಡುವವರು ಗುರು’ ಎಂದು ತಿಳಿಸಿದರು.</p>.<p>ಇದೇ ಸಂದರ್ಭದಲ್ಲಿ ನಾವಲಗಿಯ ಭಕ್ತರು ಪಾದಪೂಜೆ ನೆರವೇರಿಸಿದರು. ನೂರಾರು ಜನರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>