<p><strong>ಜಮಖಂಡಿ</strong>: ಮಹಾರಾಷ್ಟ್ರದ ಕೃಷ್ಣಾ ಕೊಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿ ಉಕ್ಕೆರುತ್ತಿದೆ, ಬಿರು ಬಿಸಿಲಿಗೆ ಸೋತು ಸೊರಗಿದ್ದ ಕೃಷ್ಣೆ ಇದೀಗ ವರುಣನ ಕೃಪೆಯಿಂದ ಒಡಲು ತುಂಬಿಕೊಂಡಿದ್ದಾಳೆ. 2019ರಲ್ಲಿ ವರುಣನ ಅಬ್ಬರದಿಂದ ಕಂಗಾಲಾಗಿದ್ದ ಜನತೆ ಈ ಬಾರಿ ಮತ್ತೆ ಪ್ರವಾಹ ಎದುರಿಸುವ ಭೀತಿಯಲ್ಲಿದ್ದಾರೆ.</p>.<p>ತಾಲ್ಲೂಕಿನ ಮುತ್ತೂರು ಗ್ರಾಮದ ನಡುಗಡ್ಡೆಯನ್ನು ಸಂಪೂರ್ಣವಾಗಿ ಕೃಷ್ಣಾ ನೀರು ಸುತ್ತುವರೆದಿದ್ದು, ದ್ವೀಪವಾಗಿ ಮಾರ್ಪಟ್ಟಿದೆ. ಅಲ್ಲಿನ ಜನರು ಬೋಟ್ ಮೂಲಕ ಸಂಚರಿಸುತ್ತಿದ್ದಾರೆ, ಈಗಾಗಲೇ ಮೂರು ಮನೆಗಳಲ್ಲಿ ನೀರು ಪ್ರವೇಶವಾಗಿದ್ದು ಆ ಕುಟುಂಬಗಳು ಸ್ಥಳಾಂತರವಾಗಿವೆ. ಇಲ್ಲಿ 200 ಎಕರೆಗೂ ಅಧಿಕ ಭೂಮಿ ಇದ್ದು, 60 ರಿಂದ 70 ಕುಟುಂಬಗಳು ವಾಸವಾಗಿವೆ. 250 ಜನರು, 200ಕ್ಕೂ ಅಧಿಕ ಜಾನುವಾರಗಳಿವೆ. ರಾತ್ರಿ 10 ಗಂಟೆ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದ್ದು, ಗ್ರಾಮಸ್ಥರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.</p>.<p>‘ಅಗತ್ಯ ವಸ್ತುಗಳನ್ನು ತರಲು, ಹಾಲು ಹಾಕಲು ಬೋಟ್ ಮೂಲಕ ಅಥವಾ ನೀರಿನಲ್ಲಿ ಈಜಿಕೊಂಡು ಸಮೀಪದ ತುಬಚಿ ಗ್ರಾಮಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ 25ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿದ್ದು, ಕಳೆದ ನಾಲ್ಕು ದಿನಗಳಿಂದ ಶಾಲೆಗೆ ಹೋಗುತ್ತಿಲ್ಲ, ಪ್ರವಾಹ ಭೀತಿಯ ಸ್ಥಿತಿಯಲ್ಲಿ ಮಕ್ಕಳನ್ನು ಕಳಿಸುವುದು ಸುರಕ್ಷಿತವಲ್ಲ ಎಂದು ತಾತ್ಕಾಲಿಕವಾಗಿ ಶಾಲೆ ಬಿಡಿಸಿದ್ದೆವೆ ಎಂದು ಪಾಲಕರೊಬ್ಬರು’ ತಿಳಿಸಿದರು.</p>.<p>‘ನದಿ ನೀರಿನ ಜೊತೆಗೆ ಹಾವು, ಚೇಳುಗಳ ಕಾಟವೂ ಹೆಚ್ಚಿದೆ. ಪ್ರವಾಹ ಕಡಿಮೆಯಾಗುವವರೆಗೆ ರಾತ್ರಿ ವಿದ್ಯುತ್ ನೀಡಬೇಕು’ ಎಂದು ಮಹಿಳೆಯರು ಒತ್ತಾಯಿಸಿದರು.</p>.<p>‘ಮನೆಯಲ್ಲಿ ನೀರು ಹೋಗಿರುವುದರಿಂದ ಮುತ್ತೂರು ನಡುಗಡ್ಡೆಯನ್ನು ಬಿಟ್ಟು ಬಂದಿದ್ದೆವೆ, ನಮ್ಮ ಜಾನುವಾರಗಳಿಗೆ ಹಾಕಲು ಮೇವಿಲ್ಲ ತಾಲ್ಲೂಕಾಡಳಿತ ಕೂಡಲೇ ಜನರಿಗೆ ಗಂಜಿ ಕೇಂದ್ರ ಮತ್ತು ಜಾನುವಾರಗಳಿಗೆ ಮೇವು ಒದಗಿಸಬೇಕು’ ಎಂದು ಧರೆಪ್ಪ ನಾಟಿಕಾರ ಒತ್ತಾಯಿಸಿದರು.</p>.<p>ಸದ್ಯ ನೀರಿನ ಪ್ರಮಾಣ: ಸಮೀಪದ ಹಿಪ್ಪರಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 524.87ಮೀ. ಇದ್ದು, ಒಟ್ಟು 6 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಒಳ ಹರಿವು– 1,76,348 ಕ್ಯುಸೆಕ್ , ಹೊರಹರಿವು – 1,76,348 ಕ್ಯುಸೆಕ್ ಇದ್ದು, ನೀರಿನ ಹರಿವು ಹೆಚ್ಚಾಗಿರುವುದರಿಂದ ಹಿಪ್ಪರಗಿ ಜಲಾಶಯದ 22 ಗೆಟ್ಗಳನ್ನು ತೆಗೆದುಬಿಡಲಾಗಿದೆ’ ಎಂದು ತಹಶೀಲ್ದಾರ್ ಸದಾಶಿವ ಮಕ್ಕೊಜಿ ತಿಳಿಸಿದ್ದಾರೆ.</p>.<p>ಮಳೆಗಾಲದಲ್ಲಿ ಗ್ರಾಮಕ್ಕೆ ಚಿಕ್ಕ ಬೋಟ್ ಒದಗಿಸುವಂತೆ 2020ರಲ್ಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವೆ ಆದರೂ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಮಕ್ಕೆ ಚಿಕ್ಕ ಬೋಟ್ ನೀಡಬೇಕು </p><p><strong>-ನಾಗೇಶ ಹಿಪ್ಪರಗಿ, ಗ್ರಾಮಸ್ಥ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ಮಹಾರಾಷ್ಟ್ರದ ಕೃಷ್ಣಾ ಕೊಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿ ಉಕ್ಕೆರುತ್ತಿದೆ, ಬಿರು ಬಿಸಿಲಿಗೆ ಸೋತು ಸೊರಗಿದ್ದ ಕೃಷ್ಣೆ ಇದೀಗ ವರುಣನ ಕೃಪೆಯಿಂದ ಒಡಲು ತುಂಬಿಕೊಂಡಿದ್ದಾಳೆ. 2019ರಲ್ಲಿ ವರುಣನ ಅಬ್ಬರದಿಂದ ಕಂಗಾಲಾಗಿದ್ದ ಜನತೆ ಈ ಬಾರಿ ಮತ್ತೆ ಪ್ರವಾಹ ಎದುರಿಸುವ ಭೀತಿಯಲ್ಲಿದ್ದಾರೆ.</p>.<p>ತಾಲ್ಲೂಕಿನ ಮುತ್ತೂರು ಗ್ರಾಮದ ನಡುಗಡ್ಡೆಯನ್ನು ಸಂಪೂರ್ಣವಾಗಿ ಕೃಷ್ಣಾ ನೀರು ಸುತ್ತುವರೆದಿದ್ದು, ದ್ವೀಪವಾಗಿ ಮಾರ್ಪಟ್ಟಿದೆ. ಅಲ್ಲಿನ ಜನರು ಬೋಟ್ ಮೂಲಕ ಸಂಚರಿಸುತ್ತಿದ್ದಾರೆ, ಈಗಾಗಲೇ ಮೂರು ಮನೆಗಳಲ್ಲಿ ನೀರು ಪ್ರವೇಶವಾಗಿದ್ದು ಆ ಕುಟುಂಬಗಳು ಸ್ಥಳಾಂತರವಾಗಿವೆ. ಇಲ್ಲಿ 200 ಎಕರೆಗೂ ಅಧಿಕ ಭೂಮಿ ಇದ್ದು, 60 ರಿಂದ 70 ಕುಟುಂಬಗಳು ವಾಸವಾಗಿವೆ. 250 ಜನರು, 200ಕ್ಕೂ ಅಧಿಕ ಜಾನುವಾರಗಳಿವೆ. ರಾತ್ರಿ 10 ಗಂಟೆ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದ್ದು, ಗ್ರಾಮಸ್ಥರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.</p>.<p>‘ಅಗತ್ಯ ವಸ್ತುಗಳನ್ನು ತರಲು, ಹಾಲು ಹಾಕಲು ಬೋಟ್ ಮೂಲಕ ಅಥವಾ ನೀರಿನಲ್ಲಿ ಈಜಿಕೊಂಡು ಸಮೀಪದ ತುಬಚಿ ಗ್ರಾಮಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ 25ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿದ್ದು, ಕಳೆದ ನಾಲ್ಕು ದಿನಗಳಿಂದ ಶಾಲೆಗೆ ಹೋಗುತ್ತಿಲ್ಲ, ಪ್ರವಾಹ ಭೀತಿಯ ಸ್ಥಿತಿಯಲ್ಲಿ ಮಕ್ಕಳನ್ನು ಕಳಿಸುವುದು ಸುರಕ್ಷಿತವಲ್ಲ ಎಂದು ತಾತ್ಕಾಲಿಕವಾಗಿ ಶಾಲೆ ಬಿಡಿಸಿದ್ದೆವೆ ಎಂದು ಪಾಲಕರೊಬ್ಬರು’ ತಿಳಿಸಿದರು.</p>.<p>‘ನದಿ ನೀರಿನ ಜೊತೆಗೆ ಹಾವು, ಚೇಳುಗಳ ಕಾಟವೂ ಹೆಚ್ಚಿದೆ. ಪ್ರವಾಹ ಕಡಿಮೆಯಾಗುವವರೆಗೆ ರಾತ್ರಿ ವಿದ್ಯುತ್ ನೀಡಬೇಕು’ ಎಂದು ಮಹಿಳೆಯರು ಒತ್ತಾಯಿಸಿದರು.</p>.<p>‘ಮನೆಯಲ್ಲಿ ನೀರು ಹೋಗಿರುವುದರಿಂದ ಮುತ್ತೂರು ನಡುಗಡ್ಡೆಯನ್ನು ಬಿಟ್ಟು ಬಂದಿದ್ದೆವೆ, ನಮ್ಮ ಜಾನುವಾರಗಳಿಗೆ ಹಾಕಲು ಮೇವಿಲ್ಲ ತಾಲ್ಲೂಕಾಡಳಿತ ಕೂಡಲೇ ಜನರಿಗೆ ಗಂಜಿ ಕೇಂದ್ರ ಮತ್ತು ಜಾನುವಾರಗಳಿಗೆ ಮೇವು ಒದಗಿಸಬೇಕು’ ಎಂದು ಧರೆಪ್ಪ ನಾಟಿಕಾರ ಒತ್ತಾಯಿಸಿದರು.</p>.<p>ಸದ್ಯ ನೀರಿನ ಪ್ರಮಾಣ: ಸಮೀಪದ ಹಿಪ್ಪರಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 524.87ಮೀ. ಇದ್ದು, ಒಟ್ಟು 6 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಒಳ ಹರಿವು– 1,76,348 ಕ್ಯುಸೆಕ್ , ಹೊರಹರಿವು – 1,76,348 ಕ್ಯುಸೆಕ್ ಇದ್ದು, ನೀರಿನ ಹರಿವು ಹೆಚ್ಚಾಗಿರುವುದರಿಂದ ಹಿಪ್ಪರಗಿ ಜಲಾಶಯದ 22 ಗೆಟ್ಗಳನ್ನು ತೆಗೆದುಬಿಡಲಾಗಿದೆ’ ಎಂದು ತಹಶೀಲ್ದಾರ್ ಸದಾಶಿವ ಮಕ್ಕೊಜಿ ತಿಳಿಸಿದ್ದಾರೆ.</p>.<p>ಮಳೆಗಾಲದಲ್ಲಿ ಗ್ರಾಮಕ್ಕೆ ಚಿಕ್ಕ ಬೋಟ್ ಒದಗಿಸುವಂತೆ 2020ರಲ್ಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವೆ ಆದರೂ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಮಕ್ಕೆ ಚಿಕ್ಕ ಬೋಟ್ ನೀಡಬೇಕು </p><p><strong>-ನಾಗೇಶ ಹಿಪ್ಪರಗಿ, ಗ್ರಾಮಸ್ಥ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>