ವಿದ್ಯಾರ್ಥಿಗಳಿಂದ ಪ್ರವೇಶ ಶುಲ್ಕ ಪಡೆಯುತ್ತಿರುವ ಮಂಡಳಿಯ ಸಿಬ್ಬಂದಿ
ಮಂಡಳಿಯ 13ನೇ ಸಭೆಯಲ್ಲಿ 1 ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲು ನಿರ್ಣಯಿಸಿದ ಪ್ರತಿ
ಮಕ್ಕಳಿಂದಲೂ ಶುಲ್ಕ ವಸೂಲಿ ಮಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಈ ಬಗ್ಗೆ ಪರಿಶೀಲಿಸುತ್ತೇನೆ
ಬಸಪ್ಪ ಪೂಜಾರಿ ಆಯುಕ್ತರು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕೂಡಲಸಂಗಮ
‘ಶಿಸ್ತು ಕ್ರಮ ಕೈಗೊಳ್ಳಿ’
ಬಸವಾದಿ ಶರಣರ ದಾರ್ಶನಿಕ ಸಂತರ ಸ್ವತಂತ್ರ ಹೋರಾಟಗಾರರ ಐತಿಹಾಸಿಕ ಸ್ಥಳವನ್ನು ಸರ್ಕಾರವೇ ಉಚಿತವಾಗಿ ನೋಡಲು ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ವಿಶ್ವಕ್ಕೆ ಗುರುವಾಗಿದ್ದ ಬಸವಣ್ಣನ ಐಕ್ಯಮಂಟಪ ದರ್ಶನಕ್ಕೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇದ್ದರೂ ಮಂಡಳಿಯ ಅಧಿಕಾರಿಗಳೇ ಪ್ರವೇಶ ಶುಲ್ಕ ವಸೂಲಿ ಮಾಡುವ ಮೂಲಕ ಮಕ್ಕಳ ಶೋಷಣೆಗೆ ಇಳಿದಿರುವುದು ದುರಂತ. ಶೋಷಣೆ ತಡೆಯಬೇಕಾದ ಮಂಡಳಿಯೇ ಶೋಷಣೆಗೆ ಇಳಿದರೇ ಏನು ಮಾಡಬೇಕು. ಮಂಡಳಿಯ ಅಧ್ಯಕ್ಷರು ಮುಖ್ಯಮಂತ್ರಿಗಳಾಗಿದ್ದೂ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಶಿಸ್ತು ಕ್ರಮಕೈಗೊಂಡು ಮಕ್ಕಳಿಗೆ ಆಗುತ್ತಿರುವ ಶೋಷಣೆ ತಡೆಯಬೇಕು. - ಬಸವಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ