<p><strong>ಬಾಗಲಕೋಟೆ:</strong> ಜಿಲ್ಲೆಯ ಕೆರೂರಿನ ಉಪನೋಂದಣಿ ಕಚೇರಿಯಲ್ಲಿ ₹5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಉಪನೋಂದಣಿ ಅಧಿಕಾರಿ ಮೋದಿನಸಾಬ್ ಹವಾಲ್ದಾರ ಹಾಗೂ ಕಂಪ್ಯೂಟರ್ ಆಪ್ರೇಟರ್ ಕುಮಾರ ಗೌಡರ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.</p>.<p>ಬೆಳಗಂಟಿ ಗ್ರಾಮದ ಮುತ್ತಪ್ಪ ನಾಯ್ಕರ ಎಂಬುವವರು ಕೆರೂರ ಹದ್ದಿನಲ್ಲಿರುವ ಜಮೀನನ್ನು ನೋಂದಣಿ ಮಾಡಿ ಕೊಡಲು ನೊಂದಣಿ ಅಧಿಕಾರಿ ಮೋದಿನಸಾಬ್ ಹವಾಲ್ದಾರ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನೋಂದಣಿ ಅಧಿಕಾರಿ ಸೂಚನೆ ಮೇರೆಗೆ ಕಂಪ್ಯೂಟರ್ ಆಪರೇಟರ್ ಕುಮಾರ ಮುಂಗಡವಾಗಿ ₹10 ಸಾವಿರ ಹಣವನ್ನು ರಾಘು ಭಾವಿಕಟ್ಟಿ ಎಂಬುವವರ ಪೋನ್ ಪೇ ಮೂಲಕ ಪಡೆದಿದ್ದರು. ಈ ಕುರಿತು ಮುತ್ತಪ್ಪ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.</p>.<p>ಬಾಕಿ ₹5 ಸಾವಿರ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಎಂ.ಎಚ್. ಬಿದರಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಜಿಲ್ಲೆಯ ಕೆರೂರಿನ ಉಪನೋಂದಣಿ ಕಚೇರಿಯಲ್ಲಿ ₹5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಉಪನೋಂದಣಿ ಅಧಿಕಾರಿ ಮೋದಿನಸಾಬ್ ಹವಾಲ್ದಾರ ಹಾಗೂ ಕಂಪ್ಯೂಟರ್ ಆಪ್ರೇಟರ್ ಕುಮಾರ ಗೌಡರ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.</p>.<p>ಬೆಳಗಂಟಿ ಗ್ರಾಮದ ಮುತ್ತಪ್ಪ ನಾಯ್ಕರ ಎಂಬುವವರು ಕೆರೂರ ಹದ್ದಿನಲ್ಲಿರುವ ಜಮೀನನ್ನು ನೋಂದಣಿ ಮಾಡಿ ಕೊಡಲು ನೊಂದಣಿ ಅಧಿಕಾರಿ ಮೋದಿನಸಾಬ್ ಹವಾಲ್ದಾರ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನೋಂದಣಿ ಅಧಿಕಾರಿ ಸೂಚನೆ ಮೇರೆಗೆ ಕಂಪ್ಯೂಟರ್ ಆಪರೇಟರ್ ಕುಮಾರ ಮುಂಗಡವಾಗಿ ₹10 ಸಾವಿರ ಹಣವನ್ನು ರಾಘು ಭಾವಿಕಟ್ಟಿ ಎಂಬುವವರ ಪೋನ್ ಪೇ ಮೂಲಕ ಪಡೆದಿದ್ದರು. ಈ ಕುರಿತು ಮುತ್ತಪ್ಪ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.</p>.<p>ಬಾಕಿ ₹5 ಸಾವಿರ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಎಂ.ಎಚ್. ಬಿದರಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>