<p><strong>ಮಹಾಲಿಂಗಪುರ</strong>: ಸ್ಥಳೀಯ ಬುದ್ನಿ ಪಿಡಿ ಬಡಾವಣೆಯ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನವೆಂಬರ್ 11ರಿಂದ 16ರವರೆಗೆ ನಡೆಯುವ ಹರಿನಾಮ ಸಪ್ತಾಹ ಹಾಗೂ ಜಾತ್ರೋತ್ಸವದ ಭಿತ್ತಿಪತ್ರವನ್ನು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಶುಕ್ರವಾರ ಬಿಡುಗಡೆಗೊಳಿಸಿದರು.</p>.<p>ಜಾತ್ರಾ ಕಮಿಟಿ ಮುಖ್ಯಸ್ಥ ಕೃಷ್ಣಗೌಡ ಪಾಟೀಲ ಮಾತನಾಡಿ, ‘ವಿಠ್ಠಲ ರುಕ್ಮಿಣಿ ದೇವಸ್ಥಾನದ ಜಾತ್ರೋತ್ಸವ ಮತ್ತು ಅಖಂಡ ಹರಿನಾಮ ಸಪ್ತಾಹ ಫಂಡರಾಪುರದ ಶಿವುರಕೆರೆ ಶಾಖೆಯ ಕೃಷ್ಣ ಮಹಾರಾಜ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ. 11ರಂದು ಸಂಜೆ 5ಕ್ಕೆ ಪೋತಿ ಸ್ಥಾಪನೆ, ರಾತ್ರಿ 8 ರಿಂದ ಭಜನೆ, 12ರಿಂದ 14ರವರೆಗೆ ನಿತ್ಯ ಬೆಳಿಗ್ಗೆ 5ರಿಂದ 6ಗಂಟೆವರೆಗೆ ಕಾಕಡಾರತಿ, 7 ಗಂಟೆಯಿಂದ ಪ್ರವಚನ, 1 ಗಂಟೆಯಿಂದ ಭಜನೆ, ಕೀರ್ತನೆ, ಸಂಜೆ 4ರಿಂದ 6 ಗಂಟೆವರೆಗೆ ಪರಿಪಾಠ, 7ರಿಂದ 9ಗಂಟೆವರೆಗೆ ಕೀರ್ತನೆ, 9ಗಂಟೆಯಿಂದ ಜಾಗರಣೆ ನಡೆಯಲಿದೆ’ ಎಂದರು.</p>.<p>‘15ರಂದು ಬೆಳಿಗ್ಗೆ 5ರಿಂದ 8ಗಂಟೆವರೆಗೆ ಕಾಕಡಾರತಿ, ಶ್ರೀಹರಿ ವಿಠ್ಠಲ ಸೋಹಳಾ ದಿಂಡಿ ನಗರ ಪ್ರದಕ್ಷಿಣೆ, ಭಾರುಡ, ಮಹಾಪ್ರಸಾದ, ಮಧ್ಯಾಹ್ನ 12 ಗಂಟೆಗೆ ‘ಹಳ್ಳಿಯಿಂದ ದಿಲ್ಲಿವರೆಗೆ’ ನಾಟಕ ಪ್ರದರ್ಶನ ಹಾಗೂ ಸಂಜೆ 5 ಗಂಟೆಗೆ ಮಹಾರಥೋತ್ಸವ, 16ರಂದು ಸಂಜೆ 5 ಗಂಟೆಗೆ ಕಳಸ ಇಳಿಸಿ ಮಹಾಪ್ರಸಾದದೊಂದಿಗೆ ಉತ್ಸವ ಮುಕ್ತಾಯವಾಗುವುದು’ ಎಂದು ತಿಳಿಸಿದರು.</p>.<p>ಶಂಕರಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ನಾರಾಯಣಗೌಡ ಪಾಟೀಲ, ವಿಠ್ಠಲಗೌಡ ಪಾಟೀಲ, ಮಹಾಲಿಂಗಗೌಡ ಪಾಟೀಲ, ಶ್ರೀನಿವಾಸಗೌಡ ಮಾಲಬಸರಿ, ಮಲ್ಲಪ್ಪ ಅಂಬಣ್ಣಗೋಳ, ಕುಮಾರ ಪವಾರ, ರಾಜು ಮುದಕಪ್ಪಗೋಳ, ಸದಾಶಿವ ಶೇಗುಣಸಿ, ಮಲ್ಲಿಕಾರ್ಜುನ ಸಂಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ</strong>: ಸ್ಥಳೀಯ ಬುದ್ನಿ ಪಿಡಿ ಬಡಾವಣೆಯ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನವೆಂಬರ್ 11ರಿಂದ 16ರವರೆಗೆ ನಡೆಯುವ ಹರಿನಾಮ ಸಪ್ತಾಹ ಹಾಗೂ ಜಾತ್ರೋತ್ಸವದ ಭಿತ್ತಿಪತ್ರವನ್ನು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಶುಕ್ರವಾರ ಬಿಡುಗಡೆಗೊಳಿಸಿದರು.</p>.<p>ಜಾತ್ರಾ ಕಮಿಟಿ ಮುಖ್ಯಸ್ಥ ಕೃಷ್ಣಗೌಡ ಪಾಟೀಲ ಮಾತನಾಡಿ, ‘ವಿಠ್ಠಲ ರುಕ್ಮಿಣಿ ದೇವಸ್ಥಾನದ ಜಾತ್ರೋತ್ಸವ ಮತ್ತು ಅಖಂಡ ಹರಿನಾಮ ಸಪ್ತಾಹ ಫಂಡರಾಪುರದ ಶಿವುರಕೆರೆ ಶಾಖೆಯ ಕೃಷ್ಣ ಮಹಾರಾಜ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ. 11ರಂದು ಸಂಜೆ 5ಕ್ಕೆ ಪೋತಿ ಸ್ಥಾಪನೆ, ರಾತ್ರಿ 8 ರಿಂದ ಭಜನೆ, 12ರಿಂದ 14ರವರೆಗೆ ನಿತ್ಯ ಬೆಳಿಗ್ಗೆ 5ರಿಂದ 6ಗಂಟೆವರೆಗೆ ಕಾಕಡಾರತಿ, 7 ಗಂಟೆಯಿಂದ ಪ್ರವಚನ, 1 ಗಂಟೆಯಿಂದ ಭಜನೆ, ಕೀರ್ತನೆ, ಸಂಜೆ 4ರಿಂದ 6 ಗಂಟೆವರೆಗೆ ಪರಿಪಾಠ, 7ರಿಂದ 9ಗಂಟೆವರೆಗೆ ಕೀರ್ತನೆ, 9ಗಂಟೆಯಿಂದ ಜಾಗರಣೆ ನಡೆಯಲಿದೆ’ ಎಂದರು.</p>.<p>‘15ರಂದು ಬೆಳಿಗ್ಗೆ 5ರಿಂದ 8ಗಂಟೆವರೆಗೆ ಕಾಕಡಾರತಿ, ಶ್ರೀಹರಿ ವಿಠ್ಠಲ ಸೋಹಳಾ ದಿಂಡಿ ನಗರ ಪ್ರದಕ್ಷಿಣೆ, ಭಾರುಡ, ಮಹಾಪ್ರಸಾದ, ಮಧ್ಯಾಹ್ನ 12 ಗಂಟೆಗೆ ‘ಹಳ್ಳಿಯಿಂದ ದಿಲ್ಲಿವರೆಗೆ’ ನಾಟಕ ಪ್ರದರ್ಶನ ಹಾಗೂ ಸಂಜೆ 5 ಗಂಟೆಗೆ ಮಹಾರಥೋತ್ಸವ, 16ರಂದು ಸಂಜೆ 5 ಗಂಟೆಗೆ ಕಳಸ ಇಳಿಸಿ ಮಹಾಪ್ರಸಾದದೊಂದಿಗೆ ಉತ್ಸವ ಮುಕ್ತಾಯವಾಗುವುದು’ ಎಂದು ತಿಳಿಸಿದರು.</p>.<p>ಶಂಕರಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ನಾರಾಯಣಗೌಡ ಪಾಟೀಲ, ವಿಠ್ಠಲಗೌಡ ಪಾಟೀಲ, ಮಹಾಲಿಂಗಗೌಡ ಪಾಟೀಲ, ಶ್ರೀನಿವಾಸಗೌಡ ಮಾಲಬಸರಿ, ಮಲ್ಲಪ್ಪ ಅಂಬಣ್ಣಗೋಳ, ಕುಮಾರ ಪವಾರ, ರಾಜು ಮುದಕಪ್ಪಗೋಳ, ಸದಾಶಿವ ಶೇಗುಣಸಿ, ಮಲ್ಲಿಕಾರ್ಜುನ ಸಂಶಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>